- ಕಾರ್ಗಲ್ ಸಂಪದ ಅರಲಗೋಡ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಇನ್ನೂ ಮಂಗಳ ನಿರಂತರ ಸಾವು
- ಗ್ರಾಮಗಳ ಜನರು, ಮಹಿಳೆಯರು ಅರಲಗೋಡ ಮಂಗನಕಾಹಿಲೆ ಆಸ್ಪತ್ರೆಯಲ್ಲಿ ತಪಾಸಣೆಗೆ ಕ್ಯೂ
- 20 ದಾಟಿದ ಈ ಗ್ರಾಮದಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ಸಾವು ಕಂಡವರ ಸಂಖ್ಯೆ
- ಶೇ.25ರಷ್ಟು ಈ ಹಳ್ಳಿಗಳ ತೊರೆದು ಬೇರೆಡೆ ತೆರಳುತ್ತಿರುವ ಸ್ಥಳೀಯರು
ಇದು ಶರಾವತಿ ಅಭಯಾರಣ್ಯದಲ್ಲಿರುವ ಅರಲಗೋಡಿನ ಇಂದಿನ ದಯನೀಯ ಸ್ಥಿತಿ ಎಂದು ವೃಕ್ಷ ಲಕ್ಷ ಆಂದೋಲನದ ಕಾರ್ಯಕರ್ತರ ತಂಡ ಅಭಿಪ್ರಾಯ ನೀಡಿದೆ.
ಅರಲಗೋಡು ಗ್ರಾಮಕ್ಕೆ ಎಪ್ರಿಲ್ 1ರಂದು ಭೇಟಿ ನೀಡಿದ ವೃಕ್ಷಲಕ್ಷ ತಂಡ, ವನವಾಸಿಗಳು, ರೈತರು, ಮಹಿಳೆಯರ ಕಷ್ಟ ವಿಚಾರಿಸಿದೆ. ಸಾವಿಗೀಡಾದವರ ಕುಟುಂಬಗಳಿಗೆ ಸಾಂತ್ವನ ಹೇಳಿದೆ.
ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಾಗರ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕೆ. ವೆಂಕಟೇಶ್, ಕವಲಕೋಡು, ವೃಕ್ಷಲಕ್ಷದ ಆನೆಗುಳಿ ಸುಬ್ಬರಾವ್, ಜಗದೀಶ್, ಶ್ರೀಕಾಂತ್, ಅಶೋಕ, ಮುಂತಾದ ಕಾರ್ಯಕರ್ತರು ತಂಡದಲ್ಲಿ ಇದ್ದರು.
ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಚಾಯತ್ ಅರಣ್ಯ ವನ್ಯ ಜೀವಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.
ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಸರ್ಕಾರ ಪರಿಹಾರ ನೀಡಿಲ್ಲ. ಕೃಷಿ ಚಟುವಟಿಕೆ ಪೂರ್ಣ ನಿಂತಿದೆ. ಅರಣ್ಯ ಇಲಾಖೆ ಲೆಕ್ಕದಲ್ಲಿ 176 ಮಂಗಗಳು ಸತ್ತಿವೆ. ಆದರೆ ಗ್ರಾಮ ಮುಖಂಡರಾದ ಲೋಕರಾಜ್ ಪ್ರಕಾರ ಈ ಸಂಖ್ಯೆ 900 ದಾಟಿದೆ. ಹಳ್ಳಿ ಬಿಟ್ಟು ತೆರಳಿದ ಜನರಿಗೆ ಕಾಯಿಲೆ ಬಂದಿಲ್ಲ. ಇನ್ನಷ್ಟು ಕುಟುಂಬಗಳು ತಾತ್ಕಾಲಿಕವಾಗಿ ಊರು ಬಿಡುವ ತಯಾರಿಯಲ್ಲಿ ಇದ್ದಾರೆ ಎಂದು ಊರ ಮುಖಂಡರಾದ ಮಂಜಯ್ಯ ಜೈನ್ ಹಾಗೂ ಮಹಾಬಲಗಿರಿ ಹೇಳಿದ್ದಾರೆ.
ಅರಳಗೋಡ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯ ಡಾ. ಮೋಹನ್ ಅವರು ಜ್ವರ ಬಂದ ತಕ್ಷಣ ಚಿಕಿತ್ಸೆ ನೀಡಿದರೆ ಮಂಗನ ಕಾಹಿಲೆ ಸಾವು ಕಡಿಮೆ ಮಾಡಲು ಸಾಧ್ಯವಾಗಿದೆ. ಅಪ್ಠೌಕತೆ, ರಕ್ತದ ಕೊರತೆ ಬಹಳ ರೋಗಿಗಳಲ್ಲಿ ಇರುವುದರಿಂದ ಕಾಹಿಲೆ ಎದುರಿಸುವ ಶಕ್ತಿ ಕಡಿಮೆ ಇದೆ. ಶಕ್ತಿ ಮಿರಿ ಪ್ರಯತ್ನ ನಡೆಸಿದ್ದೇವೆ ಎಂದರು.
ಪ್ರಕೃತಿಯೇ ಮುನಿಸಿಕೊಂಡಿದೆ, ಮಳೆ ಬಂದರೆ ಮಂಗನ ಕಾಯಿಲೆಗೆ ತಡೆ ಸಾಧ್ಯ ಎನ್ನಲಾಗಿದೆ. ಅರಲಗೋಡಿಗೆ ಜೋರಾದ ಮಳೆ ಬರಲಿ ಎಂದು ಪ್ರಾರ್ಥಿಸೋಣ ಎಂದು ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.
ಅರಲಗೋಡ ಭೇಟಿ ಸಮೀಕ್ಷೆ ನಂತರ ವೃಕ್ಷ ಲಕ್ಷ ಆಂದೋಲನ ಸರ್ಕಾರಕ್ಕೆ ಮಾಡಿರುವ ಮನವಿ ಇಂತಿದೆ:
- ಮಂಗನ ಕಾಯಿಲೆಯಿಂದ ಸಾವಿಗೀಡಾದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು.
- ಮಳೆ ಬೀಳುವ ಎಪ್ರಿಲ್ – ಮೇ 2 ತಿಂಗಳ ಕಾಲ ಅರಲಗೋಡ ಹಳ್ಳಿಗಳ ಜನರಿಗೆ ಬೇರೆ ಸ್ಥಳಗಳಲ್ಲಿ ತಾತ್ಕಾಲಿಕ ಪುನರ್ ವಸತಿ ಕಲ್ಪಿಸಿಕೊಡಬೇಕು.
- ಆರೋಗ್ಯ ಇಲಾಖೆ, ಸರ್ಕಾರ, ಅರಲಗೋಡ ಆಸ್ಪತ್ರೆಗೆ ಇನ್ನಷ್ಟು ಹಾಸಿಗೆ, ಉಪಕರಣ, ಔಷಧಿ, ಸಿಬ್ಬಂದಿಯನ್ನು ತಕ್ಷಣ ಒದಗಿಸಬೇಕು.
- ಮಂಗನ ಕಾಯಿಲೆಗೆ ಔಷಧ ಕಂಡು ಹಿಡಿಯಬೇಕು. ಐ.ಸಿ.ಎಂ.ಆರ್. ನವದೆಹಲಿ ಅವರ ತಜ್ಞರ ತಂಡ ಅರಲಗೋಡಿಗೆ ಬರುವಂತೆ ತುರ್ತು ಕ್ರಮ ಬೇಕು.
- ವನ್ಯ ಜೀವಿ ಅರಣ್ಯ ಇಲಾಖೆ ಅರಲಗೋಡನಲ್ಲಿ ಸಾವಿಗೀಡಾದ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು.
- ಸಾಮಾಜಿಕ-ಧಾಮಿಕ ಸಂಘ ಸಂಸ್ಥೆ, ಮಠಗಳು ಅರಲಗೋಡಿಬಂದು ಸಂತ್ರಸ್ತರಿಗೆ ನೆರವಿನ ಹಸ್ತ ನೀಡಬೇಕು.
- ಗ್ರಾಮದಿಂದ ಬೇರೆಡೆ ವಾಸಿಸಲು ಬಯಸುವ ಅರಲಗೋಡ ರೈತರಿಗೆ ತಾತ್ಕಾಲಿಕ ಪುನರ್ ವಸತಿ ಕಲ್ಪಿಸಲು ಮಠ ಮಂದಿರಗಳು,ಜನತೆ ಮುಂದಾಗಬೇಕು.
- ಗೋ ಶಾಲೆಗಳಿಗೆ ಅರಲಗೋಡ ಗ್ರಾಮದ ದನಕರು ತರಲು ಅವಕಾಶ ಕಲ್ಪಿಸಬೇಕು.
Discussion about this post