ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದ್ದು, ಪರಿಣಾಮವಾಗಿ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ನೆರೆಗೆ ತತ್ತರಿಸಿರುವ ಮಂದಿಗೆ ಸಾಮಾನ್ಯ ಜನರಿಂದ ಮೊದಲ್ಗೊಂಡು, ಗಣ್ಯವ್ಯಕ್ತಿಗಳವರೆಗೂ ಎಲ್ಲರೂ ಸಹ ಸಹಾಯಹಸ್ತ ಚಾಚುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸಹಾಯವಾಗಲಿ ಎಂಬ ಕಾರಣದಿಂದ ಸ್ಥಾಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಭಾರೀ ಪ್ರಮಾಣದಲ್ಲಿ ಹಣ ಸಂದಾಯವಾಗುತ್ತಿದೆ.
ಈ ಕುರಿತಂತೆ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್’ನಲ್ಲಿ ಮಾಹಿತಿ ಪ್ರಕಟಿಸಲಾಗಿದ್ದು, ಆಗಸ್ಟ್ 9ರಿಂದ ನಿನ್ನೆಯವರೆಗೂ ಅಂದರೆ 8 ದಿನಗಳ ಅವಧಿಯಲ್ಲಿ ಒಟ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ 7,17,66,717 ರೂ. ಜಮೆಯಾಗಿದ್ದು, ಡಿಡಿ ಮೂಲಕ 3,02,90,571 ರೂ. ಬಂದಿದೆ. ಒಟ್ಟು 11,26,78,355 ರೂ. ಜಮೆಯಾಗಿದೆ.
Hubballi Division : Swachhata Hi Seva and Swachhata Pakhwada–2026 Launched in
Kalpa Media House | Hubballi | The ‘Swachhata Hi Seva’ and ‘Swachhata Pakhwada–2026’ campaigns were launched today at SSS Hubballi...
Read moreDetails






