ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೈತ್ರ ಶುಕ್ಲ ಪೂರ್ಣಿಮೆಯಂದು ಬೆಂಗಳೂರು_ಕರಗ ಮಹೋತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ಧರ್ಮರಾಜ ಕರಗ, ದ್ರೌಪದಿ ಕರಗ ಎಂದೂ ಕರೆಯಲಾಗುತ್ತದೆ. ರಾತ್ರಿಯಲ್ಲಿ ಜರುಗುವ ಈ ಉತ್ಸವವನ್ನು ಧಾರ್ಮಿಕ ನಂಬಿಕೆ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ತನ್ನದೇ ಆದ ಭವ್ಯ ಇತಿಹಾಸವನ್ನು ಹೊಂದಿರುವ ಕರಗ ಮಹೋತ್ಸವವು ಪ್ರತಿವರ್ಷ ಚಿತ್ರಾ ಪೂರ್ಣಿಮೆಯಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ.
ಬೆಂಗಳೂರಿನ ಶ್ರೀ ಧರ್ಮರಾಯ ದೇವಸ್ಥಾನ ಈ ಉತ್ಸವದ ಕೇಂದ್ರ ಬಿಂದು. ಈ ದಿನ ವಹ್ನಿಕುಲ ಕ್ಷತ್ರಿಯ ಜನಾಂಗದವರ ಕುಲದೇವತೆಯಾದ ಆದಿಶಕ್ತಿ ಶ್ರೀದ್ರೌಪದಿ ದೇವಿಯನ್ನು ವಿಶೇಷ ಪೂಜಾದಿಗಳೊಂದಿಗೆ ಆರಾಧಿಸಲಾಗುತ್ತದೆ. ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರವನ್ನು ತಲೆಯಮೇಲೆ ಹೊತ್ತು, ನರ್ತಿಸುತ್ತಾ ಮುಂದೇ ಸಾಗುತ್ತಿರುತ್ತಾರೆ. ಇದನ್ನು ಅನುಸರಿಸುತ್ತಾ ಕೈಯಲ್ಲಿ ಖಡ್ಗವನ್ನು ಹಿಡಿಸು ಗೋವಿಂದನ ನಾಮಸ್ಮರಣೆಯನ್ನು ಮಾಡುತ್ತಾ ಸಾಗುವ ನೂರಾರು ವೀರಕುಮಾರರನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಸಾಕ್ಷಿಯಾಗುತ್ತಾರೆ. ಈ ಉತ್ಸವ ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವೂ ಹೌದು.
ಕರಗ ನೋಡುವ ಅವಕಾಶ ಸಿಗಲಿಲ್ಲವೆಂಬ ಬೇಸರ ಬೇಡ, ನಾವು ಇದ್ದಲ್ಲಿಯೇ ತಾಯಿಯನ್ನು ಸ್ಮರಿಸೋಣ, ತಾಯಿ ದ್ರೌಪದಿ ನಮ್ಮೆಲ್ಲರನ್ನೂ ಹರಸುವಳು. ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್ ಡೌನ್ನಿಂದಾಗಿ, ಈ ಭಾರಿಯ ಬೆಂಗಳೂರಿನಕರಗ ಮಹೋತ್ಸವವನ್ನು ಸರಳವಾಗಿ ನೆರವೇರಿಸಲು ನಿಶ್ಚಯಿಸಲಾಗಿದೆ. ಹೋವಿನಕರಗಕ್ಕೆ ಕೇವಲ ಐದು ಮಂದಿಗೆ ಮಾತ್ರ ಪಾಲ್ಗೊಳ್ಳುವ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ.
ಧರೆಗೆ ದರ್ಶನ ನೀಡಲು ವರ್ಷಕ್ಕೊಮ್ಮೆ ಬರುವಳಂತೆ ಚೈತ್ರಪೌರ್ಣಮಿಯಂದು ಪುಣ್ಯ ಚರಿತಳು ಈ ಮಾತೇ.. ಶ್ರೀ ಆದಿಶಕ್ತಿ ದ್ರೌಪದಿ ದೇವಿ ಶ್ರೀ ಧರ್ಮರಾಯ ಸ್ವಾಮಿ.
ಅಮ್ಮ ನಿನ್ನ ದರ್ಶನಕ್ಕೆ ಕೋಟ್ಯಂತರ ಜನರು ಕಾಯುತ್ತಿದ್ದಾರೆ. ಆದಷ್ಟು ಬೇಗ ನಮಗೆ ನಿನ್ನ ದರ್ಶನ ನೀಡಿ, ಅಗ್ನಿಸಂಜಾತೆಯಾದ ನೀನು ಈ ಭೂಮಿಗೆ ಹಿಡಿದಿರುವ ಕರೋನ ಎಂಬ ಮಹಾಮಾರಿಯನ್ನು ಸುಟ್ಟು ಭಸ್ಮ ಮಾಡಿ ಎಲ್ಲರು ಕ್ಷೇಮವಾಗಿ, ಸಂಮೃದ್ದಿಯಾಗಿ ಬಾಳುವಂತೆ ಮಾಡು.
ಲೋಕಾಸಮಸ್ತಸುಖಿನೋ_ಭವಂತು
ತಾಯಿ ದ್ರೌಪದಿ ಸರ್ವರಿಗೂ ಒಳಿತನ್ನುಂಟು ಮಾಡಲಿ
Get in Touch With Us info@kalpa.news Whatsapp: 9481252093
Discussion about this post