ನಾಗ್ಪುರ್: ದೇಶದಾದ್ಯಂತ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರು ತೀವ್ರವಾಗಿ ಟೀಕಿಸಿದರೂ ಸಹ ಲೆಕ್ಕಿಸದೇ, ತಾವು ಕೊಟ್ಟ ಮಾತಿನಂತೆ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹಾಡಿ ಹೊಗಳಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಈ ಕಾರ್ಯಕ್ರಮ ಪ್ರತಿವರ್ಷಗೂ ಸಹ ನಡೆಯುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ನಡೆಯುತ್ತಿದ್ದು, ಪ್ರತಿ ಬಾರಿಯೂ ಪ್ರಮುಖರೊಬ್ಬರನ್ನು ಮುಖ್ಯಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಪ್ರಣವ್ ಮುಖರ್ಜಿಯವರು ನಮ್ಮೆಲ್ಲರಿಗೂ ಆತ್ಮೀಯರು. ಈ ಬಾರಿ ಅವರನ್ನು ಅಷ್ಟೇ ಆತ್ಮೀಯವಾಗಿ ಅಹ್ವಾನಿಸಿದ್ದೆವು. ಅದನ್ನು ಒಪ್ಪಿ ಅವರು ಬಂದಿದ್ದಾರೆ. ಇದರಲ್ಲಿ ವಿವಾದ ಸೃಷ್ಠಿ ಮಾಡುವುದು ಏನಿದೆ ಎಂದರು.
Dr Pranab Mukherjee ko humne sehej roop se amantran diya aur unhone humara sneh pehchan kar unhone sahmiti di. Unko kaise bulaya aur woh kaise ja rahe hain yeh charcha nirarthak hai: RSS Chief Mohan Bhagwat pic.twitter.com/5pkT4bmyvX
— ANI (@ANI) June 7, 2018
ಪ್ರಣವ್ ಮುಖರ್ಜಿ ಈ ದೇಶದ ಪ್ರಜೆಯಾಗಿ, ನಮ್ಮೆಲ್ಲರ ಆತ್ಮೀಯರಾಗಿ ಇಲ್ಲಿ ಬಂದಿದ್ದಾರೆ. ಅವರ ಇಲ್ಲಿದ್ದರೂ ಪ್ರಣವ್ ಮುಖರ್ಜಿ ಮಾತ್ರವೇ ಆಗಿದ್ದಾರೆ. ಇದಕ್ಕಾಗಿ, ವಿವಾದ ಸೃಷ್ಠಿಸುವುದು ಸರಿಯಲ್ಲ ಎಂದರು.
Discussion about this post