ನಾಗ್ಪುರ: ಜಾತ್ಯತೀತತೆ ಮತ್ತು ಸೇರ್ಪಡೆ ನಮಗೆ ನಂಬಿಕೆಯ ಒಂದು ವಿಷಯ ಎಂದು ಹೇಳುವ ಮೂಲಕ ಜಾತ್ಯತೀತ ಕಲ್ಪನೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಕಾಂಗ್ರೆಸ್ಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪರೋಕ್ಷ ಟಾಂಗ್ ನೀಡಿದರು.
ದೇಶದಾದ್ಯಂತ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರು ತೀವ್ರವಾಗಿ ಟೀಕಿಸಿದರೂ ಸಹ ಲೆಕ್ಕಿಸದೇ, ತಾವು ಕೊಟ್ಟ ಮಾತಿನಂತೆ ನಾಗ್ಪುರದಲ್ಲಿ ನಡೆದ ಆರ್ಎಸ್ಎಸ್ ತೃತೀಯ ಸಂಘ್ ಶಿಕ್ಷಾ ವರ್ಗದಲ್ಲಿ ಅವರು ಮಾತನಾಡಿದರು.
ಜಾತ್ಯತೀತತೆ ನಮ್ಮ ದೇಶದ ನಿಜವಾದ ಧರ್ಮವಾಗಿದೆ ಎಂದು ಪ್ರಣವ್ ದಾ, ನಾವು ಕೋಪ ಹಾಗೂ ಅಹಿಂಸೆಯಿಂದ ಶಾಂತಿ ಹಾಗೂ ಸಾಮರಸ್ಯದೆಡೆಗೆ ಸಾಗಬೇಕಿದೆ ಎಂದರು.
ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥವ್ಯವಸ್ಥೆಯಾಗಿದ್ದು, ವಿಶ್ವದಲ್ಲಿ ಸಂತೋಷದಿಂದಿರುವ ಸಂದರ್ಭವನ್ನು ಜನರಿಗೆ ಕಲ್ಪಿಸಿಲ್ಲ. ಜನರ ಸಂತೋಷದಲ್ಲಿ ಅರಸನ ಸಂತೋಷವಿದೆ ಎಂದರು.
Sh Pranab Mukherjee ends his speech at #RSSTritiyaVarsh saying #JaiHind #Vandemataram pic.twitter.com/sd68DxiShr
— RSS (@RSSorg) June 7, 2018
ಪ್ರಣವ್ ಮುಖರ್ಜಿ ಮಾತಿನ ಮುಖ್ಯಾಂಶಗಳು ಇಂತಿವೆ:
- ನಮಗೆ ಪ್ರಜಾಪ್ರಭುತ್ವ ಒಂದು ಉಡುಗೊರೆಯಾಗಿಲ್ಲ, ಬದಲಾಗಿ ಪ್ರತ್ಯೇಕವಾದ ಗುರಿಯಾಗಿದೆ…
- ಸಾಮ್ರಾಟ ಅಶೋಕನ ಸಾಮ್ರಾಜ್ಯದ ಕಾಲ ಅತ್ಯಂತ ಶ್ರೇಷ್ಠವಾಗಿತ್ತು. ಶಾಂತಿ ಮತ್ತು ಬ್ರಾತೃತ್ವವನ್ನು ಉನ್ನತವಾಗಿ ಮೆರೆಸಿತ್ತು…
- ನಮ್ಮ ರಾಷ್ಟ್ರವನ್ನು ಪುರಾತನ ಕಾಲದಿಂದಲೂ ಸಹ ಗುರುತಿಸಲಾಗಿದ್ದು, ಹಲವಾರು ಪಂಗಡಗಳು, ವಿಭಿನ್ನ ಸಂಸ್ಕೃತಿ, ನಂಬಿಕೆ ಹಾಗೂ ಸಹಿಷ್ಠು ಗುಣಗಳನ್ನು ನಮ್ಮ ಮಣ್ಣಿನಲ್ಲೇ ಬಂದಿವೆ. ಇಂತಹ ಶ್ರೇಷ್ಠ ಸಂಸ್ಕೃತಿ ಹೊಂದಿರುವ ರಾಷ್ಟ್ರ ನಮ್ಮದು..
- ರಾಷ್ಟ್ರೀಯತೆಯು ಒಬ್ಬರ ಸ್ವಂತ ರಾಷ್ಟ್ರದೊಂದಿಗೆ ಗುರುತಿಸುವಿಕೆಯನ್ನು ವ್ಯಾಖ್ಯಾನಿಸುತ್ತದೆ ಮತ್ತು ಹಿತಾಸಕ್ತಿಗಳಿಗಾಗಿ ಬೆಂಬಲಿಸುತ್ತದೆ. ದೇಶಭಕ್ತಿಯು ಒಬ್ಬರ ದೇಶಕ್ಕೆ ಒಬ್ಬರ ಹುರುಪಿನ ಭಕ್ತಿಯ ಪಜ್ವಲನವಾಗಿದೆ…
- ನಮ್ಮ ದೇಶದ ಭಕ್ತಿ ವಿಚಾರದಲ್ಲಿ ಭಾರತದ ಬಾಗಿಲು ಸದಾ ತೆರೆದಿರುತ್ತದೆ. ಪ್ರಪಂಚದ ವಿಭಿನ್ನ ರೀತಿಯ ಧರ್ಮ ಹಾಗೂ ಜನರಿಗೆ ನಮ್ಮಲ್ಲಿ ಸದಾ ಸ್ವಾಗತವಿರುತ್ತದೆ…
- ನಮ್ಮಲ್ಲಿನ ಭಾಷೆ ಹಾಗೂ ಸಂಸ್ಕೃತಿಯಲ್ಲಿನ ವಿಭಿನ್ನತೆಯು ದೇಶದ ವಿಶೇಷವನ್ನು ಉನ್ನತೀಕರಿಸಿದೆ. ಸಹಿಷ್ಣು ಮನೋಭಾವ ನಮ್ಮನ್ನು ದೇಶದ ಮೂಲಕ ಶ್ರೇಷ್ಠವಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿದೆ…
- ಆಧುನಿಕ ರಾಜ್ಯಗಳು ಹೇಗಿರಬೇಕು ಎಂಬುದನ್ನು ಹಲವಾರು ಚಿಂತಕರು ವ್ಯಕ್ತಪಡಿಸಿದ್ದಾರೆ…
- ಗಾಂಧೀಜಿಯವರು ವಿವರಿಸುತ್ತಿದ್ದಂತೆ, ಭಾರತೀಯ ರಾಷ್ಟ್ರೀಯತೆಯು ಪ್ರತ್ಯೇಕ ಅಥವಾ ವಿನಾಶಕಾರಿ ಅಲ್ಲ..
Discussion about this post