Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

February 26, 2019
in Special Articles
0 0
0
Share on facebookShare on TwitterWhatsapp
Read - 2 minutes

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆದ 11 ದಿನಗಳ ನಂತರ ಪ್ರತೀಕಾರ ತೆಗೆದುಕೊಂಡಿರುವ ಭಾರತ, ಸುಮಾರು 300ಕ್ಕೂ ಅಧಿಕ ಉಗ್ರರನ್ನು ವಾಯು ದಾಳಿ ನಡೆಸಿ ನಾಶ ಮಾಡಿದೆ.

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್’ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್’ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಅತ್ಯಂತ ವ್ಯವಸ್ಥಿತವಾಗಿ ದಾಳಿ ಯೋಜನೆ ರೂಪಿಸಿದ್ದ ಭಾರತ 21 ನಿಮಿಷಗಳಲ್ಲಿ ದಾಳಿಯನ್ನು ಮುಕ್ತಾಯಗೊಳಿಸಿದ್ದು, ಇದಕ್ಕಾಗಿ 12 ಮಿರಾಜ್ ಯುದ್ದ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ. ಭಾರತೀಯ ಪಡೆಗಳು ನಡೆಸಿದ ವಾಯು ದಾಳಿಗೆ ಬಲಾಕೋಟ್’ನ ಮೂರು ಭಾಗಗಳು ಸರ್ವನಾಶವಾಗಿದ್ದು, ನಸುಕಿನ 3.48ಕ್ಕೆ ಈ ಬೆಳವಣಿಗೆ ನಡೆದಿದೆ.

ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 42 ಯೋಧರು ವೀರಸ್ವರ್ಗ ಸೇರಿದ ಘಟನೆಯ ನಂತರ ಯಾವುದೇ ಸೇನಾ ದಾಳಿ ನಡೆಸದ ಮೋದಿ ಸರ್ಕಾರದ ವಿರುದ್ಧ ನಾಯಿ ನರಿಗಳೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದವು.

ಜನ ಸಾಮಾನ್ಯರು ಮಾತನಾಡುವಂತೆ ಅಥವಾ ಪ್ರತಿಪಕ್ಷಗಳು ರಾಜಕೀಯ ಮಾತನಾಡುವಂತೆ ಪುಲ್ವಾಮಾ ದಾಳಿ ನಡೆದಾಕ್ಷಣ ಒಂದು ಜವಾಬ್ದಾರಿಯ ಕೇಂದ್ರ ಸರ್ಕಾರ ಏಕಾಏಕಿ ಬೀದಿ ರೌಡಿ ರೀತಿಯಲ್ಲಿ ಮುಗಿಬೀಳಲು ಸಾಧ್ಯವಿಲ್ಲ.

ಒಂದು ಬೃಹತ್ ದೇಶ ಶತ್ರು ರಾಷ್ಟçದ ಮೇಲೆ ಇಂತಹ ಒಂದು ದಾಳಿ ನಡೆಸುತ್ತದೆ ಎಂದರೆ ಅದಕ್ಕೆ ಅದರದ್ದೆ ಆದ ಒಂದು ವ್ಯವಸ್ಥಿತ ಸಿದ್ದತೆ ಅಗತ್ಯವಿರುತ್ತದೆ.

ಪುಲ್ವಾಮಾ ದಾಳಿ ನಡೆದ ನಂತರ ಮೋದಿ ಸರ್ಕಾರ ಹಾಗೂ ಸೇನಾ ಪಡೆಗಳು ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಎಲ್ಲ ಭಾಗದಲ್ಲಿರುವ ಗಡಿಯನ್ನು ಬಿಗಿಗೊಳಿಸುವ ಜೊತೆಯಲ್ಲಿ, ವಾಯಪಡೆ ಹಾಗೂ ನೌಕಾಪಡೆಗಳ ಭದ್ರತೆಯನ್ನು ಬಿಗಿಗೊಳಿಸಿದ್ದು.


ಇದಾದ ನಂತರ, ಭಾರತೀಯ ಸೇನೆ, ಗೃಹ ಸಚಿವಾಲಯ ಹಾಗೂ ರಕ್ಷಣಾ ಇಲಾಖೆಗಳು ಪ್ರಧಾನಿಯವರೊಂದಿಗೆ ನಿರಂತರವಾಗಿ ಸಭೆ ನಡೆಸಿ, ಪ್ರತಿದಾಳಿ ಹೇಗಿರಬೇಕು ಎಂಬ ರೂಪುರೇಷೆ ಸಿದ್ದಪಡಿಸಿವೆ. ಇದಕ್ಕೂ ಮೊದಲಾಗಿ, ಗುಪ್ತಚರ ಇಲಾಖೆ, ಸೇನಾ ಗುಪ್ತಚರ ಇಲಾಖೆ, ಸ್ಯಾಟಲೈಟ್’ಗಳನ್ನು ಬಳಕೆ ಮಾಡಿಕೊಂಡು, ಉಗ್ರರ ಅಡಗುತಾಣಗಳ ಕುರಿತಾಗಿ ಇಂಚಿಂಚೂ ಮಾಹಿತಿ ಕಲೆ ಹಾಕಲಾಗಿದೆ.

ಇದೇ ವೇಳೆ ಅತ್ಯಂತ ಪ್ರಮುಖ ಬೆಳವಣಿಗೆ ಎಂದರೆ, ಒಂದು ವೇಳೆ ನಾವೇನಾದರೂ ಉಗ್ರರ ವಿರುದ್ಧ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ ಹಾಗೂ ಉಗ್ರರು ಭಾರತದ ಮೇಲೂ ಸಹ ದಾಳಿ ನಡೆಸುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ, ದೇಶದ ಭದ್ರತೆಯ ದೃಷ್ಠಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸೇನೆ ಮಾಡಿಕೊಂಡಿತ್ತು.

ಇದಕ್ಕಾಗಿ ಪ್ರಮುಖವಾಗಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳೆದ ಎಂಟು ದಿನಗಳಿಂದಲೇ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಒಂದು ವೇಳೆ ಭಾರತ ದಾಳಿ ನಡೆಸಿದರೆ, ಕಾಶ್ಮೀರದ ಒಳಗೆ ಅಡಗಿರಬಹುದಾದ ಉಗ್ರರು ಹಾಗೂ ಉಗ್ರರ ಬೆಂಬಲಿಗ ಸ್ಥಳೀಯರು ದೇಶದ ಒಳಗೆ ಅನಾಹುತ ಸೃಷ್ಠಿಸಬಹುದು. ಇದನ್ನರಿತ ಕೇಂದ್ರ ಸರ್ಕಾರ ಸೇನೆ ಹಾಗೂ ಕಾಶ್ಮೀರ ಪೊಲೀಸರಿಗೆ ಸ್ವತಂತ್ರ ನೀಡಿ, ಕಲ್ಲುತೂರಾಟಗಾರರನ್ನು ಹತ್ತಿಕ್ಕಲು, ಅಗತ್ಯಬಿದ್ದರೆ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿತ್ತು.

ಇದರ ಬೆನ್ನಲ್ಲೆ, ಮೂರು ದಿನಗಳ ಹಿಂದೆ ಅಂದರೆ ಫೆ.23ರಂದು ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದ ಕೇಂದ್ರ ಸರ್ಕಾರ ಇದಕ್ಕಾಗಿ ಹೆಚ್ಚುವರಿಯಾಗಿ ಪ್ಯಾರಾ ಮಿಲಿಟರಿಯ 100ಕ್ಕೂ ಅಧಿಕ ಭಾರೀ ಪಡೆಗಳನ್ನು ನಿಯೋಜನೆ ಮಾಡಿದ್ದು ಗಮನಿಸಬೇಕಾದ ಅಂಶ.

ಇನ್ನು, ಗಡಿ ಪ್ರದೇಶದಲ್ಲಿ ವಾಸವಾಗಿರುವ ಬಹುತೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿರುವ ಸೇನೆ, ಯಾವುದೇ ನಾಗರಿಕರ ಪ್ರಾಣಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ.

ಇದರ ಜೊತೆಯಲ್ಲಿ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಅನಧಿಕೃತವಾಗಿ ಹೈ ಅಲರ್ಟ್ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಎಂತಹುದ್ದೆ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿಸಿಕೊಂಡಿದೆ.

ವಿಂಗ್ ಕಮಾಂಡರ್ ಭಕ್ಷಿ ಅವರ ಹೇಳಿಕೆಯಂತೆ ಭಾರತದ ಇಂದಿನ ದಾಳಿಯಿಂದ ಒಂದು ವೇಳೆ ಪಾಕ್ ಸೇನೆ ಅಥವಾ ಉಗ್ರರು ಪ್ರತಿದಾಳಿ ನಡೆಸಿದರೆ ಅದನ್ನು ಎದುರಿಸಲು ಅಗತ್ಯವಾಗಿರುವ ಎಲ್ಲ ರೀತಿಯ ಭದ್ರತಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಉಗ್ರರಿಗೆ ಸಹಕಾರ ನೀಡುತ್ತಿರುವ ಒಂದು ಪರಮಾಣು ಬಾಂಬ್ ಹೊಂದಿರುವ ರಾಷ್ಟದ ವಿರುದ್ಧ ದಾಳಿ ನಡೆಸಬೇಕು ಎಂದರೆ, ಶತ್ರುಗಳೂ ಸಹ ನಮ್ಮ ಮೇಲೆ ಪ್ರತಿದಾಳಿ ನಡೆಸುವ ಎಲ್ಲ ಸಾಧ್ಯತೆ, ಅದರ ಪರಿಣಾಮಗಳು ಹಾಗೂ ಅದನ್ನು ಎದುರಿಸಲೂ ಅಥವಾ ಹತ್ತಿಕ್ಕಲು ಅಗತ್ಯವಾಗಿರುವ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.

ಇಂತಹ ವ್ಯವಸ್ಥಿತ ಸಿದ್ದತೆಯನ್ನು ಮಾಡಿಕೊಂಡಿರುವ ಮೋದಿ ಸರ್ಕಾರ ಹಾಗೂ ಭಾರತೀಯ ಸೇನೆ, ಪುಲ್ವಾಮಾ ದಾಳಿ ನಡೆದ 11 ದಿನಗಳ ನಂತರ ಪ್ರತಿದಾಳಿ ನಡೆಸಿ, ಉಗ್ರರನ್ನು ಹೊಡೆದು ಹಾಕುವ ಜೊತೆಯಲ್ಲಿ ನಮ್ಮ ಸೇನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿರುವುದು ಹೆಮ್ಮೆಯ ಸಂಗತಿ..

Tags: India_Attack_on_LoCIndian_Air_ForceindianarmyIndiastrikesbackKalpa NewsKannadaNewsLoCPulwama terror attackPulwama_terror_attackಮಿರಾಜ್_ವಿಮಾನವಾಯು_ಸೇನೆ
Previous Post

Video: ಭಾರತೀಯ ಸೇನೆ ದಾಳಿಗೆ ನೂರಾರು ಪ್ರಮುಖ ಉಗ್ರರು ಮಟಾಷ್: ಕೇಂದ್ರ ಹೇಳಿಕೆ

Next Post

ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ & ಆಕ್ಷನ್- ದಿ ಇಂಡಿಯನ್ ಆರ್ಮಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ & ಆಕ್ಷನ್- ದಿ ಇಂಡಿಯನ್ ಆರ್ಮಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!