No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Thursday, July 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಮೋ ಭಾರತ್ ವತಿಯಿಂದ ಅಜಾತಶತ್ರುವಿಗೆ ಭಾವನಾತ್ಮಕ ನಮನ

kalpa News by kalpa News
August 20, 2018
in Special Articles
0
Share on FacebookShare on TwitterShare on WhatsApp

ಬೆಂಗಳೂರು: ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತರತ್ನರಾದರು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪುಗಳನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮೆಲುಕು ಹಾಕಿದರು.

ನಮೋ ಭಾರತ್ ಸಂಘಟನೆ ವತಿಯಿಂದ ಗಿರಿನಗರದ ಯೋಗಶ್ರೀ ಕೇಂದ್ರದಲ್ಲಿ ಆಯೋಜಿಸಿದ್ದ ಅಜಾತಶತ್ರುವಿಗೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವ ಭಾರತದ ನಿರ್ಮಾಣದ ಬುನಾದಿ ಎಂಬ ವಿಷಯದಲ್ಲಿ ಭಾಷಣ ನುಡಿನಮನ ನಡೆಯಿತು. ಜನಸಂಘದ ಕಾಲದಿಂದಲೂ ಅಟಲ್ ಜೀ ಅವರೊಂದಿಗೆ ಒಡನಾಟ ಹೊಂದಿದ್ದ ಡಿ.ಎಚ್. ಶಂಕರಮೂರ್ತಿಯವರು, ಅಟಲ್ ಬಿಹಾರಿ ವಾಜಪೇಯಿ ಅವರ ಆರಂಭಿಕ ಜೀವನ, ಜನ ಸಂಘದ ದಿನಗಳ ಅವರ ನೆನಪುಗಳು, ನಂತರ ಅವರೊಂದಿಗೆ ಪಕ್ಷದ ಸಂಘಟನೆಯ ಕೆಲಸದ ಸಮಯದಲ್ಲಿನ ಅವರ ರೋಚಕ ಅನುಭವಗಳನ್ನು ಹಂಚಿಕೊಂಡರು.

1984 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನ್ನು ಅನುಭವಿಸಿದ ಸಮಯದಲ್ಲಿ ಶಿವಮೊಗ್ಗದ ಒಬ್ಬ ಹಿಂದುಳಿದ ಜಾತಿಯ ಕಾರ್ಯಕರ್ತ ಅಟಲ್ ಜಿ ಯವರ ಸೋಲಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು, ಅಟಲ್ ಜಿ ದೆಹಲಿಯಿಂದ ಆ ಕಾರ್ಯಕರ್ತನ ಮನೆಗೆ ಬಂದು, ಅವರ ಮನೆಯವರಿಗೆ ಧೈರ್ಯ ತುಂಬಿದ್ದರು ಎಂದು ಅಟಲ್ ಜೀ ಅವರ ಸರಳತೆಯ ಹಾಗೂ ಸಾಮಾನ್ಯ ಜನರಲ್ಲೊಂದಾಗುವ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು.

ವಾಜಪೇಯಿಯವರು ಅಂದು ರಾಜಕೀಯಕ್ಕೆ ಬರದೇ ಹೋಗಿದ್ದರೆ, ಅವರು ಒಬ್ಬ ಶ್ರೇಷ್ಠ ಕವಿಯಾಗುತ್ತಿದ್ದರು, ಅವರೊಬ್ಬ ಸಂಗೀತಗಾರರಾಗುತ್ತಿದ್ದರು, ಒಬ್ಬ ಖ್ಯಾತ ವಾಗ್ಮಿಯಾಗುತ್ತಿದ್ದರು, ಪತ್ರಿಕೋದ್ಯಮಕ್ಕೆ ಒಬ್ಬ ಮಹಾನ್ ಸಾಂಪಾದಕರಾಗುತ್ತಿದರು. ಈ ಎಲ್ಲ ಅರ್ಹತೆ ಹೊಂದಿದ್ದ ಅವರು, ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತರತ್ನರಾದರು ಎಂದು ತಮ್ಮ ಭಾವನಾತ್ಮಕ ನುಡಿ ನಮನವನ್ನು ಸಲ್ಲಿಸಿದರು.

ಯುವ ಚಿಂತಕ ಶ್ರೇಯಾಂಕ ಎಸ್ ರಾನಡೆ ಮಾತನಾಡಿ, ವಾಜಪೇಯಿಯವರ ವ್ಯಕ್ತಿತ್ವ, ಆದರ್ಶ, ಅವರು ಅಧಿಕಾರದಲ್ಲಿದ್ದ ಸಂದರ್ಭದ ಅವರ ಆರ್ಥಿಕ ಮತ್ತು ವಿದೇಶಿ ನೀತಿ ಹಾಗೂ, ಪ್ರಸಕ್ತ ವಿದ್ಯಮಾನಗಳ ಹಿಂದೇ ಇರುವ ಅಟಲ್ ಜೀ ಅವರ ಕೊಡುಗೆಗಳನ್ನು ಅಂಕಿ ಅಂಶಗಳೊಂದಿಗೆ ತಿಳಿಸಿದರು.

ವಾಜಪೇಯಿಯವರ 5 ವರ್ಷದ ಪೂರ್ಣಾವಧಿ ಸರ್ಕಾರ ಹಾಗೂ ಹಿಂದಿನ 13 ತಿಂಗಳ ಸರ್ಕಾರ ಇದ್ದಾಗಲೂ ಕೂಡ, ಒಂದರ ಮೇಲೊಂದರಂತೆ ಅಡೆತಡೆಗಳು ಬಂದರೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು. ಪೊಖ್ರಾನ್ ಅಣು ಪರೀಕ್ಷೆಯ ಪರಿಣಾಮದಿಂದ ಇತರ ದೇಶಗಳು ಭಾರತದ ಮೇಲೆ ಹಾಕಿದ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯದ ಕೊರತೆಯನ್ನು ಎದೆಗುಂದದೆ, ಜಾಗರೂಕತೆಯಿಂದ ನಿಭಾಯಿಸಿದ ಅವರ ತಂತ್ರಗಾರಿಕೆ ಹಾಗೂ ವಿದೇಶಿ ನೀತಿಯನ್ನು ವಿವರಿಸಿದರು.

ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಭಾರತಕ್ಕೆ ಬದಲಾವಣೆ, ಅಭಿವೃದ್ಧಿಯ ಸ್ಪಷ್ಟ ಬುನಾದಿಯನ್ನು ಹಾಕಿಕೊಟ್ಟು ವಿಶ್ವದ ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಕೀರ್ತಿ ಅಟಲ್ ಜಿಗೇ ಸಲ್ಲಬೇಕು. ಹಾಗಾಗಿ ಅಟಲ್ ಭಾರತದ ಭಾಗ್ಯವಿಧಾತ ಮತ್ತು ಭಾಗ್ಯ ಬದಲಿಸಿದ ರಾಷ್ಟ್ರನಾಯಕ ಎಂದರು.

ನವ ಭಾರತ ನಿರ್ಮಾಣದಲ್ಲಿ ಅವರ ಅವಧಿ ಮತ್ತು ಪಾತ್ರವನ್ನು ಪುನರ್ವ್ಯಾಖಾನಿಸಬೇಕಾದ ಅನಿವಾರ್ಯತೆಯಿದೆ. ಇಂತಹ ಅನೇಕ ಮೊದಲುಗಳ ಅನನ್ಯತೆ, ಅಂತಃಶಕ್ತಿ, ಅಸಾಮಾನ್ಯ ನಿರ್ಧಾರ.. ಹೀಗೆ ಭಾರತ ಎಂದೆಂದೂ ನೆನಪಿಸುವ ಅನೂಹ್ಯ ಕೃತ್ತಿಮದಿಂದ ಇತಿಹಾಸದಲ್ಲಿ ಅಟಲ್ ಸ್ಥಾನ ಅಜರಮರವಾಗಲಿದೆ. 2004 ರಲ್ಲಿ ವಾಜಪೇಯಿಯವರಿಗೆ ಎರಡನೇ ಬಾರಿ ಅಧಿಕಾರ ನೀಡದೆ ಭಾರತೀಯರು ಮಾಡಿದ ತಪ್ಪು ಮತ್ತೆ ಮರುಕಳಿಸಬಾರದು.

ನಮೋ ಭಾರತ ಸಂಘಟನೆಯ ಪರವಾಗಿ ಕಾರ್ಯಕ್ರಮದ ಕುರಿತು ವಿಘ್ನೇಶ್ ಕಾಮತ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಷ್ಟ್ರ ಸಂತ ವಾಜಪೇಯಿಯವರ ಆದರ್ಶ ವ್ಯಕ್ತಿತ್ವದ ಅವಲೋಕನ ಹಾಗೂ ರಾಜಕೀಯ ಇತಿಹಾಸದಲ್ಲಿ ದೇಶ ಕಂಡ ಆಮೂಲಾಗ್ರ ಬದಲಾವಣೆ ಹಾಗೂ ಅವರ ಆಶಾವಾದದ ಕುರಿತು ಸಮಗವಾದ್ರ ನುಡಿನಮನವನ್ನು ಸಲ್ಲಿಸಿದರು.

ಸಂಘಟನೆಯ ಕಾರ್ಯಕರ್ತ ಲಕ್ಷ್ಮೀಶ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ನಾಗರಿಕರು, ಅಟಲ್ ಜಿ ಅಭಿಮಾನಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಶಾಂತಿ ಮಂತ್ರವನ್ನು ಸಾಮೂಹಿಕವಾಗಿ ಹೇಳಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಎಲ್ಲರೂ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

– ನಮೋ ಭಾರತ ಸಂಘಟನೆ

Tags: Ajathashatru Atal JiAtal Bihari VajpayeeBENGALURUNamo BharatYoga Shri
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊಡಗಿಗೆ ಕಳುಹಿಸಿರುವ ಊಟ, ತಿಂಡಿ, ಬಟ್ಟೆ ಸಾಕು: ಸಚಿವ ತಮ್ಮಣ್ಣ

Next Post

ಕೊಡಗು ಪ್ರವಾಹ: ರವಿಚಂದ್ರನ್, ಉಪೇಂದ್ರ ಹೇಳಿದ್ದೇನು ಗೊತ್ತಾ?

kalpa News

kalpa News

Next Post

ಕೊಡಗು ಪ್ರವಾಹ: ರವಿಚಂದ್ರನ್, ಉಪೇಂದ್ರ ಹೇಳಿದ್ದೇನು ಗೊತ್ತಾ?

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL