ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲಕ್ನೋ: ರಾಮಜನ್ಮ ಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ಮಸೀದಿಗೆ ಬದಲಾಗಿ ಐದು ಎಕರೆ ಪರ್ಯಾಯ ಜಾಗವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜಮಿಯತ್ ಉಲಮಾ-ಎ-ಹಿಂದ್ ಆಕ್ಷೇಪಣೆ ಎತ್ತಿದೆ.
ಅಯೋಧ್ಯೆಯ ಮೇಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಚರ್ಚಿಸಲು ಜಮಿಯತ್ ಉಲಮಾ-ಎ-ಹಿಂದ್ ನಡೆಸುತ್ತಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಿರ್ಣಾಯಕ ಸಭೆಗೂ ಎರಡು ದಿನಗಳ ಮೊದಲೇ ಈ ಆಕ್ಷೇಪಣೆ ಎತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಮಸೀದಿಗೆ ‘ಪರ್ಯಾಯ’ವಾಗಿ ಯಾವುದೂ ಸಹ ಸ್ವೀಕಾರಾರ್ಹವಲ್ಲ, ಅದು ಹಣ ಅಥವಾ ಭೂಮಿಯಾಗಿರಬಹುದು ಎಂದು ಜಮಿಯತ್ ಉಲಾಮಾ-ಎ-ಹಿಂದ್ ಹೇಳಿದೆ.
ಇನ್ನು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಹಾಕುವ ಸಾಧ್ಯಯನ್ನೂ ಸಹ ತಳ್ಳಿ ಹಾಕದ ಸಮಿತಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಅರ್ಜಿ ಸಲ್ಲಿಸುವ ಸೂಚನೆಯನ್ನು ನೀಡಿದೆ.
Gt In Touch With Us info@kalpa.news Whatsapp: 9481252093
Discussion about this post