ನವದೆಹಲಿ: ಪಕ್ಷ, ಪ್ರತಿಪಕ್ಷ ಹಾಗೂ ನಿಷ್ಪಕ್ಷ ಎಂಬುದನ್ನೆಲ್ಲಾ ಬಿಡಿ. ಅದನ್ನೆಲ್ಲಾ ಮರೆತು ದೇಶದ ಅಭಿವೃದ್ಧಿಗಾಗಿ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ.
ಇಂದಿನಿಂದ ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಭವನದ ಆವರಣದಲ್ಲಿ ಮಾತನಾಡಿದ ಅವರು, ಎಲ್ಲ ರೀತಿಯ ಪೂರ್ವಾಗ್ರಹ ಪೀಡಿತ ಮನಃಸ್ಥಿತಿಯನ್ನು ಬಿಟ್ಟು, ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.
Speaking at the start of the Parliament Monsoon Session. https://t.co/ThbYyTuYCi
— Narendra Modi (@narendramodi) June 17, 2019
ಮುಂದಿನ ಐದು ವರ್ಷ ನಾವು ಸಂಸತ್ತಿನ ಘನತೆ ಕಾಪಿಡಲು ಶ್ರಮಿಸುವೆವು. ಲೋಕಸಭೆಯಲ್ಲಿನ ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸದೆ ಸಕ್ರಿಯವಾಗಿ ಕಾರ್ಯವೆಸಗುವ ವಿರೋಧ ಪಕ್ಷದ ಅಗತ್ಯವಿದೆ. ಹಲವು ದಶಕಗಳ ಬಳಿಕ ಸರ್ಕಾರವೊಂದು ಎರಡನೆಯ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಜನರು ದೇಶ ಸೇವೆಗಾಗಿ ನಮಗೆ ಇನ್ನೊಂದು ಅವಕಾಶ ನೀಡಿದ್ದಾರೆ. ಅಂತೆಯೇ ಜನರ ಪರವಾಗಿ ಕೈಗೊಳ್ಳುವ ನಿರ್ಧಾರಗಳನ್ನು ಎಲ್ಲ ಪಕ್ಷಗಳು ಬೆಂಬಲಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.
Discussion about this post