ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಲಾರದೇ ಇರುವ ಸಾರ್ವಜನಿಕರ ಸಹಾಯಕ್ಕಾಗಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದ ವೈದ್ಯರು ದೂರವಾಣಿ ಮೂಲಕ ಉಚಿತ ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಚಿಕಿತ್ಸಾಲಯದ ಡಾ.ಕಾಂಚನಾ ಎಸ್. ಆಚಾರ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ಸಣ್ಣ ಪಟ್ಟು ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಲಾರದೇ ಹಲವು ನಾಗರಿಕರು ಸಂಕಷ್ಟದಲ್ಲಿರುತ್ತಾರೆ. ಇಂತಹವರಿಗೆ ದೂರವಾಣಿ ಕರೆ ಮೂಲಕ ನಾವು ಉಚಿತವಾಗಿ ಸಲಹೆ ನೀಡಲು ನಿರ್ಧರಿಸಿದ್ದು, ಇದು ಲಾಕ್ ಡೌನ್ ಮುಕ್ತಾಯವಾಗುವವರೆಗೂ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದರು.
ಕೆಲವೊಂದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಶಮನ ಮಾಡಿಕೊಳ್ಳಬಹುದಾದ ಸಲಹೆಗಳನ್ನು ನಾವು ನೀಡಲಿದ್ದೇವೆ. ಅಗತ್ಯವಿರುವವರು ಕರೆ ಮಾಡುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಯಾರು ಸಲಹೆ ನೀಡುತ್ತಾರೆ?
ಆಯುರ್ವೇದ ತಜ್ಞ ಡಾ.ಸುದರ್ಶನ್ ಕೆ. ಆಚಾರ್
ಆಯುರ್ವೇದ ತಜ್ಞೆ ಡಾ.ಕಾಂಚನಾ ಎಸ್. ಆಚಾರ್
ಕರೆ ಮಾಡಬೇಕಾದ ಸಮಯ: ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ
ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ: 73378 51382, 99642 78800
Get in Touch With Us info@kalpa.news Whatsapp: 9481252093
Discussion about this post