ಕಲ್ಪ ಮೀಡಿಯಾ ಹೌಸ್ | ಗದಗ |
ಜಯಗಂಗಾ ಫಿಲಂ ಪ್ರೊಡಕ್ಷನ್ ಧಾರವಾಡ ಲಾಂಚನದಲ್ಲಿ ಪ್ರೇಮಕಥಾ ಹಂದಿರ ಹೊಂದಿದ ‘ಲವಂಗಿ’ ಕನ್ನಡ ಚಲನಚಿತ್ರ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.
16ನೇ ಶತಮಾನದ ಸತ್ಯಘಟನೆಯುಳ್ಳ ಪ್ರೇಮಕಥೆ ಇದಾಗಿದ್ದು, ರಾಷ್ಟೀಯ ಭಾವೈಕ್ಯತೆ ಮತ್ತು ಹಿಂದು-ಮುಸ್ಲಿಂ ಸಾಮರಸ್ಯ ಸಂದೇಶವನ್ನು ಚಿತ್ರ ಒಳಗೊಂಡಿದೆ. ಡಾ.ಚಂದ್ರಮೌಳಿ ಶಿ ನಾಯ್ಕರ ಅವರ ‘ಅಲಂಕಾರ ಸಾಮ್ರಾಟ’ ಕಾದಂಬರಿ ಆಧಾರಿತ ಚಿತ್ರವನ್ನು
ಉತ್ತರ ಕರ್ನಾಟಕದವರೇ ಆದ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಎಮ್. ಟಿಪ್ಪುವರ್ಧನ್ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರೀಕರಣ ಬೆಂಗಳೂರು, ಧಾರವಾಡ, ಬಾಗಲಕೋಟೆ, ಗದಗ, ಗಜೇಂದ್ರಗಡ, ಸಿಂಗಟಾಲೂರ ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ ಎಂದು ನಿರ್ದೇಶಕ ಎಮ್.ಟಿಪ್ಪುವರ್ಧನ್ ಮತ್ತು ನಿರ್ಮಾಪಕ ಸಿ.ಎಸ್.ಎನ್ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post