ಗೌರಿಬಿದನೂರು: ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೌರಿಬಿದನೂರು ನಗರದ ಎಸ್’ಎಸ್’ಇಎ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಟಿಸಿದ ಭರತ ಬಾಹುಬಲಿ ಕಾಳಗ ನಾಟಕವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಡಿಡಿಪಿಐ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಉಪ ಪ್ರಾಂಶುಪಾಲ ಆಂಜನೇಯ ತಿಳಿಸಿದ್ದಾರೆ.
ನಮ್ಮ ಶಾಲೆಯ ವ್ಯಾಸಂಗ ಮಾಡುತ್ತಿರುವ 8. 9 ಮತ್ತು 10 ನೇ ತರಗತಿಯ ಒಟ್ಟು 10 ವಿದ್ಯಾರ್ಥಿಗಳು ನಟಿಸಿದ್ದ ಭರತ ಬಾಹು ಬಲಿ ಕಾಳಗ ನಾಟಕವು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಾಟಕದ ನಿರ್ದೇಶನವನ್ನು ಕೆ.ವಿ. ನಾಯಕ್ ಮತ್ತು ಉಸ್ತುವಾರಿಯನ್ನು ಶಿಕ್ಷಕ ಸಂಜೀವರಾಯಪ್ಪ ಮತ್ತು ಉಪಪ್ರಾಂಶುಪಾಲ ಆಂಜನೇಯ ವಹಿಸಿದ್ದರು.
ಗೌರಿಬಿದನೂರು ನಗರದ ಎಸ್’ಎಸ್’ಇಎ ಪ್ರೌಢಶಾಲೆಯ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಡಿಡಿಪಿಐ ನಾಗೇಶ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಾಗಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093, 94487 22200
Discussion about this post