ಗೌರಿಬಿದನೂರು: ತಾಲೂಕಿನ ವೇದಲವೇಣಿ ನಿವಾಸಿ ಅರೋಗ್ಯ ಇಲಾಖೆಯ ಶುಶ್ರೂಷಕರಾದ ವಿ.ಎನ್. ಮೂರ್ತಿ ಅವರ ಸಮಯ ಪ್ರಜ್ಞೆ ಹಾಗೂ ಅವರ ಅರೋಗ್ಯ ಸೇವೆಯಿಂದ ಗರ್ಭಿಣಿಯ ಪ್ರಾಣ ಊಳಿಸಿ ಮತ್ತೊಂದು ಜೀವಕ್ಕೆ ಪ್ರಾಣ ನೀಡಿರುವ ಮಾನವೀಯ ಘಟನೆ ನಡೆದಿದೆ.
ವೇದಾಲವೇಣಿ ನಿವಾಸಿ ವಿ.ಎನ್. ಮೂರ್ತಿ ಹಲವು ವರ್ಷಗಳಿಂದ ಜಿಲ್ಲಾ ಅಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಗೇಪಲ್ಲಿ ಕೊತ್ತಪಲ್ಲಿ ಗ್ರಾಮದ ನಿವಾಸಿ ಗರ್ಭಿಣಿ ನಂದಿನಿ ಹೆರಿಗೆಗೆ ಎಂದು ಜಿಲ್ಲೆ ಅಸ್ಪೆತ್ರೆಗೆ ದಾಖಲಾಗಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸೂಚಿಸಿದ್ದು ಅದಕ್ಕಾಗಿ ಆರೋಗ್ಯ ಕವಚ ವಾಹನದಲ್ಲಿ ಕರೆದು ಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಹೆಚ್ಚಾಗಿದೆ.
ಆದರೆ, ಈ ಸಂದರ್ಭದಲ್ಲಿ ಧೈರ್ಯಗೆಡದ ಶುಶ್ರೂಷಕ ಮೂರ್ತಿ ಅವರು, ವಾಹನವನ್ನು ಬದಿಗೆ ನಿಲ್ಲಿಸಿ ತಮಗೆ ತಿಳಿದ ವೈದ್ಯ ಪದ್ದತಿಯಿಂದಲೇ ನಂದಿನಿಗೆ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದ್ದಾರೆ. ಇದೀಗ ಮಗು ಮತ್ತು ತಾಯಿ ಕ್ಷೇಮದಿಂದ ಇದ್ದಾರೆ.
ಸಮಯ ಪ್ರಜ್ಞೆಯೊಂದು ಇದ್ದರೆ ಶುಶ್ರೂಷಕರು ಸಹ ಪ್ರಾಣ ಉಳಿಸಬಹುದು ಎಂದು ಮೂರ್ತಿ ಅವರು ನಿರೂಪಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post