ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಪ್ರಯಾಣಿಕರು ರಸ್ತೆಯ ನಿಯಮಗಳನ್ನು ಅರಿತು ಜಾಗರೂಕತೆಯಿಂದ ವಾಹನವನ್ನು ಚಲಾಯಿಸುವ ಮೂಲಕ ಅಮೂಲ್ಯವಾದ ತಮ್ಮ ಜೀವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತೊಂಡೇಬಾವಿಯ ಎಸಿಸಿ ಕಾರ್ಖಾನೆಯ ಪಿ.ಎಲ್.ಎಂ. ಲಕ್ಷ್ಮಣ್ ತಿಳಿಸಿದರು.
ತಾಲೂಕಿನ ತೊಂಡೇಬಾವಿಯಲ್ಲಿ ಎಸಿಸಿ ಕಂಪನಿಯ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ವಾಹನ ಚಾಲನೆಯ ನಿಯಮಗಳನ್ನು ತಿಳಿಸುವ ಮೂಲಕ ಅವರ ಪ್ರಯಾಣವನ್ನು ಸುಖಕರವಾಗಿಸಲಾಗುತ್ತದೆ. ಅಲ್ಲದೆ ವೇಗಮಿತಿಯನ್ನು ತಡೆದು ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಬಳಸಬೇಕಾಗಿದೆ. ಇದರಿಂದ ಇತರರಿಗೆ ಪ್ರಯಾಣದ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸಿಸಿ ಕಂಪನಿಯ ಸುರಕ್ಷತಾ ಅಧಿಕಾರಿಗಳಾದ ನಿತ್ಯಾನಂದನ್, ಸಂದೀಪ್ ಗುಪ್ತಾ, ಸರಕು ಸಾಗಾಟ ಅಧಿಕಾರಿ ಮಂಜುನಾಥ್, ಸಿಎಸ್ ಆರ್ ಸಯ್ಯದ್, ಶ್ರೀಕೃಷ್ಣ ಟ್ರಾನ್ಸ್ ಪೋರ್ಟ್ ನ ವ್ಯವಸ್ಥಾಪಕರಾದ ನವೀನ್ ಯಾದವ್, ವಿಕಾಸ್ ವೆಂಕಟೇಶ್, ಚೇತನ್ ಹಾಗೂ ಲಾರಿ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post