Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ತಾಯಿ ಭಾರತಿಗೆ ಗೀತ ನಮನ | ಶಿವಮೊಗ್ಗದಲ್ಲೊಂದು ಯಶಸ್ವಿ ಅಪರೂಪದ ಕಾರ್ಯಕ್ರಮ

September 11, 2024
in Small Bytes, Special Articles, ಅಧ್ಯಾತ್ಮ ಸಾಧನೆ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಒಂದು ಕಾರ್ಯಕ್ರಮವಾಗಿ ಬಹುದಿನಗಳವರೆಗೂ ಜನರು ಅದನ್ನು ಸಂಭ್ರಮಿಸುತ್ತ ಮೆಲುಕು ಹಾಕುತ್ತಿದ್ದಾರೆ ಎಂದರೆ ಅದರ ಕುರಿತಾಗಿ ಬರೆಯಲೇಬೇಕೆಂಬ ಹಂಬಲ ಸಹಜ.

ಸ್ವಾತಂತ್ರ್ಯ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಾಗಿ ಅದು ಬರಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗಷ್ಟೇ ಸೀಮಿತ ಎಂದುಕೊಂಡಿದ್ದ ದಿನಗಳು ಇದ್ದವು. ಆದರೆ ಅದು ಈಗ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರ ಕಾರಣದಿಂದ ‘ಹರ್ ಘರ್ ತಿರಂಗಾ’ ಎಂದೂ ಮನೆ ಮನೆಯಲ್ಲಿ ಸಂಭ್ರಮಿಸುವಂತಾಯಿತು. ಈ ನಡುವೆ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ ಎಂದು ಎಲ್ಲರಿಗೂ ಕರೆ ಕೊಡುತ್ತಾ ತಮ್ಮ ಮನೆ ಅಂಗಳದಲ್ಲೇ ಸ್ವಾತಂತ್ರ್ಯೋತವವನ್ನು ಹಬ್ಬವಾಗಿ ಆಚರಿಸುತ್ತಾ ಬಂದಿರುವ ಕುಟುಂಬವು ಒಂದಿದೆ.
ಬಾಯರ್ಸ್ ಕಂಪ್ಯೂಟರ್ಸ್ ನ ಮಾಲೀಕರಾದ ಶ್ರೀಯುತ ಚಂದ್ರಶೇಖರ್ ಬಾಯರ್ ಹಾಗೂ ಅವರ ಪತ್ನಿ ಶ್ರೀಮತಿ ಜ್ಯೋತಿ ಬಾಯರ್ ತಾವು ವಿವಾಹವಾದ ದಿನದಿಂದಲೂ ಮನೆಯಲ್ಲಿ ದೀಪಾವಳಿ, ನವರಾತ್ರಿ ಹಬ್ಬ, ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವವೇ ಮೊದಲಾದ ಇತರೆ ಹಬ್ಬಗಳನ್ನು ವಿಶೇಷವಾಗಿ ಆಚರಿಸಿಕೊಳ್ಳದೆ ಸ್ವಾತಂತ್ರ್ಯೋತ್ಸವ ಮತ್ತು ಸತ್ಯನಾರಾಯಣ ಪೂಜೆ ಎಂದು ಕರೆದು ನೂರಾರು ಜನರಿಗೆ ದೇಶಪ್ರೇಮದ ಸುಧೆಯನ್ನು ಹರಿಸುತ್ತಾ ಬಂದಿದ್ದಾರೆ. ಅನೇಕ ಮಹನೀಯರನ್ನು ಕರೆಸಿ ಉಪನ್ಯಾಸ ಮಾಡಿದ್ದಾರೆ. ಅಲ್ಲದೆ ಸಾಮಾನ್ಯ ಕೆಲಸವನ್ನು ನಿಷ್ಠೆಯಿಂದ ಮಾಡಿದ ಜನರನ್ನು ಗುರುತಿಸಿ, ಅವರಿಗೆ ಸ್ವದೇಶಿ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿ ಸನ್ಮಾನಿಸುತ್ತಾ ಬಂದಿದ್ದಾರೆ. ಕಾರ್ಯಕ್ರಮದ ನಂತರ ಪುಷ್ಕಳ ಭೋಜನವನ್ನು ಸಹ ಹಾಕಿಸುತ್ತಾರೆ.

ಇದರಲ್ಲೇನು ವಿಶೇಷ ಎಂದರೆ ಈ ಬಾರಿ ಆಯೋಜಿಸಿದ “ತಾಯಿ ಭಾರತಿಗೆ ಗೀತನಮನ” ಎಂಬ ಕಾರ್ಯಕ್ರಮ. ಯಾವಾಗಲೂ ಉಪನ್ಯಾಸ ಏರ್ಪಡಿಸಿ ಬಂದಂತಹ ಜನರಿಗೆ ದೇಶಪ್ರೇಮದ ಕುರಿತಾಗಿ ತಿಳಿಸುತ್ತಿದ್ದ ಅವರು ಸಂಗೀತದ ಸುಧೆಯೊಂದಿಗೆ ತಾಯಿ ಭಾರತಿಗೆ ಗಾನ ನಮನವನ್ನು ಸಲ್ಲಿಸಿದ್ದು ವಿಶೇಷ. ಅದಕ್ಕೆ ಖ್ಯಾತವಾಗ್ಮಿಗಳು, ಚಿಂತಕರು, ಲೇಖಕರು, ಕವಿ, ವಿಮರ್ಶಕರೂ ಆದಂತಹ ಶ್ರೀ ವಿನಯ್ ಶಿವಮೊಗ್ಗ ಅವರ ನವಿರಾದ ನಿರೂಪಣೆಯೊಂದಿಗೆ ಮಲೆನಾಡಿನ ಹೆಮ್ಮೆಯ ಪ್ರತಿಭೆ ಶ್ರೀ ಪೃಥ್ವಿ ಗೌಡ ಅವರ ಅದ್ಭುತವಾದ ರಾಗ ಲಹರಿ ಕೇಳುಗನ ಹೃನ್ಮನ ತಣಿಸಿತು.
ಅವರ ಆಯ್ಕೆಯ ಹಾಡುಗಳು ರೋಮಾಂಚನ ತರಿಸುವಂತಿತ್ತು ಮತ್ತು ಮನಸ್ಸಿನಾಳ ಇಳಿದ್ದು ಕೇಳುಗನಿಗೆ ರಸಗಂಗೆಯಲ್ಲಿ ಮಿಂದೆದ್ದ ಅನುಭವ ತಂದಿತು. ಒಂದೊಂದು ಹಾಡುಗಳೂ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ ಸುಮ್ಮನೆ ಆಲಿಸುವಂತೆ ಮಾಡಿದ್ದೇ ಅಲ್ಲದೆ ದೇಶಪ್ರೇಮದ ಚಿಂತನೆ ಇನ್ನಷ್ಟು ಆವರಿಸುವಂತೆ ಮಾಡಿತುಕೂಡ. ಪೃಥ್ವಿ ಗೌಡ ಅವರ ಅದ್ಭುತವಾದ ಕಂಠಸಿರಿಯಿಂದ ಮೂಡಿಬಂದ ಹಾಡೆಲ್ಲವೂ ಮತ್ತೆ ಮತ್ತೆ ಆಲಿಸಬೇಕೆಂಬ ಭಾವ ಮೂಡಿಸುವಂತಿತ್ತು.
ಇದಕ್ಕೆ ತಕ್ಕನಾಗಿಯೇ ಅತಿ ಹೆಚ್ಚು ಅಲ್ಲದ ಅತಿ ಕಡಿಮೆಯೂ ಅಲ್ಲದ ಸೊಗಸಾದ ನಿರೂಪಣೆಯಂತೂ ಮತ್ತೊಂದು ವಿಶಿಷ್ಟ.

ಮಕ್ಕಳಿಗೆ ತಾಯಿ ಮುದ್ದು ಮಾಡುತ್ತಲೇ ಮೌಲ್ಯದ ಪಾಠವನ್ನು ಕಲಿಸುವಂತೆ ವಿನಯ್ ಶಿವಮೊಗ್ಗ ಅವರು ಕಾರ್ಯಕ್ರಮದ ಔಚಿತ್ಯತೆ, ದೇಶದ ಹಿರಿಮೆ ಹಾಡಿನ ಕುರಿತಾಗಿ ಹೇಳುವುದೇ ಅಲ್ಲದೆ ಪರಿಸರ ಕಾಳಜಿಯೊಂದಿಗೆ ಮುಂದಿನ ತಲೆಮಾರಿಗೆ ನಾವು ದಾಟಿಸುವ ಮೌಲ್ಯಗಳ ಕುರಿತಾಗಿ ತಿಳಿಸಿದಂತೆ ಕಾರ್ಯಕ್ರಮದ ಶ್ರೇಷ್ಠತೆಯನ್ನು ಹೆಚ್ಚಿಸುವಂತಿತ್ತು. ಏಕೆಂದರೆ ಬರಿ ಹಾಡಿನ ರಸಾಸ್ವಾದದಲ್ಲಿಯೇ ಕಳೆಯುವಂತೆ ಮಾಡದೆ ಎಚ್ಚರಿಕೆಯನ್ನು ಸಹ ಮಾತಿನ ನಡು ನಡುವೆ ನೀಡಿ ಬಂದಿದ್ದವರಿಗೆ ಮೌಲ್ಯದ ಅರಿವು ಮತ್ತು ಪರಿಸರ, ಜಲ ಇತ್ಯಾದಿಗಳ ಸಂರಕ್ಷಣೆಗೆ ನಾವೇನು ಮಾಡಬಹುದೆಂಬುದನ್ನು ತಿಳಿಸಿಕೊಟ್ಟರು. ಹಾಗಾಗಿ ತಾಯಿ ಭಾರತಿಗೆ ಗೀತನಮನ ಯಶಸ್ವಿಯಾಯಿತು. ಆಯ್ಕೆ ಮಾಡಿಕೊಂಡಿದ್ದ ಪ್ರತಿಯೊಂದು ಹಾಡೂ ಅಷ್ಟೇ ಮಧುರವಾಗಿತ್ತಲ್ಲದೆ ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ… ಎನ್ನುವುದನ್ನು ಸಾಕಾರಗೊಳಿಸುವಂತಿತ್ತು. ಹಾಗಾಗಿ ವಿನಯ್ ಶಿವಮೊಗ್ಗ ಹಾಗೂ ಪೃಥ್ವಿ ಅವರು ನಡೆಸಿಕೊಟ್ಟ ಗೀತ ಮನ ಸಾರ್ಥಕವಾಯಿತು. ಇದೊಂದು ನಿಜಕ್ಕೂ ಶಕ್ತಿಯುತ ಸಭಾ ಕಾರ್ಯಕ್ರಮವೇ ಆಯಿತು.
Kalahamsa Infotech private limitedನಂತರ ಗುರುವಿಗೆ ನಮನ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಿರ್ಮಲಾ ನಾಯಕ್, ಸಂಸ್ಕೃತದ ಕಾರ್ಯ ಮಾಡುತ್ತಿರುವ ಶ್ರೀಮತಿ ಮನು ಚೌಹಾಣ್, ದೇಶ ಕಾಯ್ದ ಯೋಧ ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಶ್ರೀ ಸುಧೀರ್ ಅವರಿಗೆ, ನಂತರ ಅಧ್ಯಾತ್ಮ ಸಾಧನೆ ಮಾಡಿ ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಶ್ರೀ ಶಬರೀಶ್ ಕಣ್ಣನ್ ಇವರುಗಳಿಗೆ ಮಾಡಿದ ಸನ್ಮಾನವು ಯೋಗ್ಯವಾಗಿಯೇ ಇತ್ತು.

ಈ ಎಲ್ಲವನ್ನು ಮಾಡಿ ಸಾರ್ಥಕತೆ ಪಡೆದ ಶ್ರೀ ಚಂದ್ರಶೇಖರ್ ಬಾಯರ್ ದಂಪತಿಗಳಿಗೆ ಶತಕೋಟಿ ಪ್ರಣಾಮಗಳು. ಇಂತಹ ದಂಪತಿಗಳ ಸಂಖ್ಯೆ ಇನ್ನು ಬೆಳೆಯುವಂತಾಗಲಿ ಎಂದು ಆಶಿಸುತ್ತಾ ಕಾರ್ಯಕ್ರಮಕ್ಕೆ ಬರಲಾಗದವರಿಗೆ ನೋಡಬೇಕೆಂಬ ಆಸೆ ಉಳ್ಳವರಿಗೆ ಶಿವಮೊಗ್ಗದ ಯುಟ್ಯೂಬ್ ಚಾನೆಲ್ ಆದ ಸಮುದ್ಯತ ಭಾರತದ https://youtu.be/7f5WXZaJsYo?si=582NKdpO-2HgNjJm ಈ ಲಿಂಕ್ ನಲ್ಲಿ ಸದಾ ಲಭ್ಯವಿದೆ. ಇದನ್ನು ನೋಡಿ ನಮ್ಮದೇಶ ನಮ್ಮ ಹೆಮ್ಮೆ ಎಂಬಂತೆ ಬದುಕ ನಡೆಸೋಣ ಅಲ್ಲವೆ!!!!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4
Tags: Independence DayKannada News WebsiteLatest News KannadaPACE CollegeShimogaShivamoggaಅಧ್ಯಾತ್ಮ ಸಾಧನೆಸ್ವಾತಂತ್ರ್ಯೋತ್ಸವ
Previous Post

ಸೆ.13ರಂದು ಅಮೃತ ಅನ್ನದಾಸೋಹ ಯೋಜನೆಗೆ ಚಾಲನೆ

Next Post

70 ವರ್ಷ ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ಬಿಗ್ ಗುಡ್ ನ್ಯೂಸ್ | 6 ಕೋಟಿ ಮಂದಿಗೆ ಪ್ರಯೋಜನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

70 ವರ್ಷ ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ಬಿಗ್ ಗುಡ್ ನ್ಯೂಸ್ | 6 ಕೋಟಿ ಮಂದಿಗೆ ಪ್ರಯೋಜನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!