Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಹಣದಾಸೆಗೆ ಬೀಳದೇ ಶ್ರಮಿಸಿದ ಸಹಕಾರ ಸಾರಿಗೆ ನೌಕರರನ್ನು ದಯನೀಯ ಸ್ಥಿತಿಯಿಂದ ಹೊರತನ್ನಿ

ಏಷ್ಯಾ ಖಂಡವೇ ತಿರುಗಿ ನೋಡುವಂತೆ ಬೆಳೆದಿದ್ದ ಮಲೆನಾಡ ಸಾರಿಗೆ ಕಾಯಕಲ್ಪಕ್ಕೆ ಕಾಯುತ್ತಿದೆ

February 20, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಂದು ಸಾರಿಗೆ ಸಂಸ್ಥೆ ನಾಲ್ಕು ಜಿಲ್ಲೆಗಳ ಮತ್ತು ಸುತ್ತಮುತ್ತಲ ಹಳ್ಳಿಗಾಡಿನ ಜನಗಳ ಸಾರಿಗೆ ಅಗತ್ಯವಾಗಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಏರುತಗ್ಗುಗಳ ಹಾದಿಯ ನೈಸರ್ಗಿಕ ತಾಣಗಳಲ್ಲಿ ಬಸ್’ಗಳು ಸಂಚರಿಸಿ ಇಡೀ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಇದೊಂದು ಗರ್ವದ ಮಾತು. ಆದರೆ ಅದೀಗ ಒಣಜಂಭದ ಮಾತಾಗುವ ಅಣಕಿಗೆ ಒಳಗಾಗಿಬಿಟ್ಟಿದೆ.

ಸುಮಾರು ಮೂವತ್ತು ವರ್ಷಗಳ ಇತಿಹಾಸ ಎಪ್ಪತ್ತಾರು ಬಸ್’ಗಳು. ಸುಮಾರು ಮುನ್ನೂರು ಮಂದಿ ಸಿಬ್ಬಂದಿ. ಪ್ರತಿದಿನ ಎಂಟುಸಾವಿರ ಪ್ರಯಾಣಿಕರು. ಹಳ್ಳಿಹಳ್ಳಿಗೆ ಬಸ್ ಸಂಪರ್ಕ. ಯಾವುದೇ ಖಾಸಗಿ ವ್ಯಕ್ತಿಯ ಮಾಲೀಕತ್ವವಿಲ್ಲ. ಸಂಪೂರ್ಣ ಸಹಕಾರ ತತ್ವದ ಮೇಲೆಯೇ ನಿರ್ಮಿತವಾದ ಸಹಕಾರ ಸಾರಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಹಕಾರ ಸಂಪದ. ನಮ್ಮ ಮಲೆನಾಡಿನ ಹೆಮ್ಮೆ. ಅಷ್ಟೇಕೆ ಒಂದು ಹೇಳಿಕೆಯಂತೆ ಇಡೀ ಏಷಿಯಾದಲ್ಲೇ ಸಹಕಾರ ತತ್ವದ ಮೇಲೆ ನಿರ್ವಹಿಸುತ್ತಿರುವ ಏಕೈಕ ಸಾರಿಗೆ ಎಂಬ ಹೆಗ್ಗಳಿಕೆ.

ಈಗ ನನಗೆ ನೆನಪಾಗುತ್ತದೆ. ಭದ್ರಾವತಿ ಆಕಾಶವಾಣಿಗೆ ರೂಪಕ ನಿರ್ಮಿಸಲು ನಾನು ಮತ್ತು ಸಹೋದ್ಯೋಗಿ ಮಿತ್ರರಾದ ಸದಾನಂದ ಹೊಳ್ಳ ಕೊಪ್ಪಕ್ಕೇ ಹೋಗಿದ್ದೆವು. ಆಗ ಕರೀಗೌಡ ಎಂಬುವವರು ಆಡಳಿತ ಮಂಡಳಿ ಪ್ರಮುಖರಾಗಿದ್ದರು. ಅಲ್ಲಿ ಪ್ರಮುಖರು ಎಂದರೆ ಸರ್ಕಾರಿ ಶ್ರೇಣೀಕೃತ ಹುದ್ದೆಯಲ್ಲ. ಕಾರ್ಮಿಕರೇ ಅಲ್ಲಿ ಪ್ರಭುಗಳು. ಮಾಲೀಕ ಕಾರ್ಮಿಕ ಬೇಧವೇ ಇಲ್ಲ. ಎಲ್ಲ ಕೈಗಳೂ ದುಡಿಯಬೇಕು. ಎಲ್ಲ ಹೊಟ್ಟೆಗಳೂ ಭರ್ತಿಯಾಗಬೇಕು. ಜನಗಳ ಅಗತ್ಯಕ್ಕೆ ಅದರಲ್ಲಂತೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸಹಕಾರ ಸಾರಿಗೆ ಬಸ್’ಗಳು ಸಂಚರಿಸುತ್ತಿದ್ದವು. ರಿಯಾಯ್ತಿ ಪಾಸ್’ಗಳಿಂದಲೇ ಪ್ರಯಾಣಿಕರ ಜೀವನಾಡಿಯಾಗಿ ಬೆಳೆಯಿತು ಸಹಕಾರ ಸಾರಿಗೆ.

ಆಗ ಕರಿಗೌಡರು ನಮಗೆ ಇಡೀ ಸಂಸ್ಥೆಯ ರೂಪುರೇಷೆಗಳನ್ನು ವಿವರಿಸಿದ್ದರು. ಒಂದು ಕಾಲಕ್ಕೆ ಖಾಸಗಿ ಒಡೆತನದಲ್ಲಿದ್ದ ಈ ವಹಿವಾಟು ನಷ್ಟದ ದೃಷ್ಟಿಯಿಂದ ಮುಚ್ಚುವ ಸ್ಥಿತಿ ತಲುಪಿತು. ಆಗಿನ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಚುಕ್ಕಾಣಿ ಹಿಡಿದರು. ಸಹಕಾರ ತತ್ವದ ಆಧಾರದ ಮೇಲೆ ತಲೆಯೆತ್ತಿತು ಸಾರಿಗೆ ಸಂಸ್ಥೆ. ಒಂದು ಉತ್ತಮ ಕಾರ್ಯಕ್ರಮ ನಿರ್ಮಿಸಿದ ತೃಪ್ತಿ ನಮ್ಮದಾಯಿತು.

ನಮ್ಮಲ್ಲಿ ಸಹಕಾರದ ಮಾತೆತ್ತಿದರೆ ಅಮುಲ್ ಸಂಸ್ಥೆಯ ಉದಾಹರಣೆ ಹೇಳುತ್ತೇವೆ. ಅದೇ ನಮ್ಮ ರಾಜ್ಯದಲ್ಲೇ ಅಮೂಲ್ಯ ಸಾರಿಗೆ ಸಂಸ್ಥೆಯ ಬಗ್ಗೆ ನಮ್ಮ ಆದ್ಯತೆಯೇ ಕಾಣುತ್ತಿಲ್ಲ. ದೀಪದ ಕೆಳಗೆ ಕತ್ತಲೆ. ಒಂದು ಇತಿಹಾಸದ ದಾಖಲೆಯಾಗಬಹುದಾಗಿರುವ ಸಹಕಾರ ಸಾರಿಗೆ ಉಸಿರುಗಟ್ಟಿರುವ ಪರಿಸ್ಥಿತಿ ನಮ್ಮ ಆಡಳಿತ ಷಾಹಿಯ ಕಣ್ಣಿಗೆ ಬಿದ್ದಿಲ್ಲವಲ್ಲ ಎಂಬ ಸಖೇದಾಶ್ಚರ್ಯವುಂಟಾಗುತ್ತದೆ.

ಈಗ್ಗೆ ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ಮತ್ತು ಈಗಿನ ಭಾಜಪ ಸರ್ಕಾರದ ಮುಖ್ಯಮಂತ್ರಿಗಳವರೆಗೆ ಸಹಕಾರ ಸಾರಿಗೆಯ ಚಿಂತಾಜನಕ ಸ್ಥಿತಿಯ ಬಗ್ಗೆ ಗಮನ ಸೆಳೆಯಲಾಗಿದೆ. ಸ್ಥಳೀಯ ಶಾಸಕರು ಮುಖಂಡರು, ಸಾಮಾಜಿಕ ಕಾರ್ಯಕರ್ತರು ಇಲ್ಲಿನ ಸಂಸ್ಥೆಯ ಸ್ಥಿತಿಯನ್ನ ನೋಡಿದ್ದಾರೆ. ಆದರೆ ಏನೂ ಸುಧಾರಣೆ ಕಂಡುಬಂದಿಲ್ಲ.

ಸುಮಾರು ಮುನ್ನೂರು ಕುಟುಂಬಗಳಿಗೆ ನೇರ ಉದ್ಯೋಗ. ಸುಮಾರು ಎರಡು ಸಾವಿರ ಮಂದಿಗೆ ಜೀವಾನಾಧಾರ. ಆದರೆ ಈಗ ಅವರ ಬದುಕೆಲ್ಲ ಬೀದಿಗೆ ಬಿದ್ದಿದೆ. ಅತೀವ ನಷ್ಟಕ್ಕೀಡಾಗಿ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಿದೆ.

ವೈಶಿಷ್ಟ್ಯವೆಂದರೆ ಈ ಸಂಸ್ಥೆ ಡೀಸೆಲ್ ದರ ಬದಲಾದಂತೆಲ್ಲ ಮರು ದರ ನಿಗದಿ ಮಾಡದೇ ಅನ್ಯಕ್ರಮಗಳ ಮೂಲಕ ಉಳಿತಾಯ ಮಾಡಿತು. ಪ್ರಯಾಣಿಕರಿಗೆ ಹೊರೆಯಾಗದಂತೆ ನಾಜೂಕಾಗಿ ಆಡಳಿತ ನಿರ್ವಹಿಸಿತು. ಈ ಜಾಣ್ಮೆ ನಮ್ಮ ಕೆಂಪು ಬಸ್ಸಿನವರಿಗೆ ಒಂದು ಅಧ್ಯಯನ ಯೋಗ್ಯ ವಿಷಯವೂ ಆಗಿದೆ. ಆದರೆ ಇಂಥದೊಂದು ಸಂಸ್ಥೆಯ ಯಶಸ್ಸಿನ ಹಾದಿಯನ್ನು ವಿಮರ್ಶಿಸಲೂ ಮುಂದಾಗಲಿಲ್ಲ. ಡೀಸೆಲ್ ದರ ಏರಿಕೆ- ಬಸ್ ಟಿಕೆಟ್ ದರ ಏರಿಕೆ ಈ ಅನುಪಾತದಲ್ಲೇ ನಡೆಯುತ್ತಿದೆ.

ಆದರೆ ಕಡಿಮೆ ಸಂಬಳ ಪಡೆದು ಸಂಸ್ಥೆಯ ಹಿತ ರಕ್ಷಿಸುವ ಅಲ್ಲಿ ನೌಕರರ ಮನೋಸಂಕಲ್ಪ ಅನುಕರಣೀಯ. ಮೇಲಾಧಿಕಾರಿ, ಕೈಕೆಳಗಿನ ನೌಕರ ಎಂಬ ಮನೋಭಾವನೆಗಳನ್ನು ಬಿಟ್ಟು ಆಪ್ತರಾಗಿ ಪರಸ್ಪರ ವರ್ತಿಸುವ ಅವರ ನಡವಳಿಕೆ ಒಂದು ಆದರ್ಶವೇ.

ವಿದ್ಯಾರ್ಥಿಗಳಂತೂ ತಮ್ಮ ವ್ಯಾಸಂಗದ ಅವಿನಾಭಾವ ಸಂಗಾತಿಯಾಗಿಬಿಟ್ಟಿದ್ದವು ಆ ಬಸ್’ಗಳು. ಚಾಲಕರು, ನಿರ್ವಾಹಕರು, ಹೀಗೆ ಅತ್ಯಂತ ದುರ್ಗಮವಾದ ಪರಿಸರದಲ್ಲಿ ಸಂಚರಿಸಿ ಕುಗ್ರಾಮಗಳ ಮಕ್ಕಳು, ಕೃಷಿಕರು ಮುತಾಂದವರ ಆಧಾರ ಸಾರಿಗೆಯಾಗಿ ಪರಿವರ್ತಿತವಾಗಿತ್ತು. ಎಂತೆಥವೋ ಸಕ್ಕರೆ ಕಾರ್ಖಾನೆ, ಸಹಕಾರ ಸಂಘಗಳು, ಶಿಕ್ಷಣ ಸಂಸ್ಥೆಗಳನ್ನು ಸೂಪರ್ ಸೀಡ್ ಮಾಡಿ ಆಡಳಿತಗಾರರನ್ನು ನೇಮಿಸಿ ಜನತೆಯ ಹಿತ ರಕ್ಷಿಸುವ ಸರ್ಕಾರ ಈಗ ಯಾಕೆ ಮೌನ ತಾಳಿದೆ ಅರ್ಥವಾಗುತ್ತಿಲ್ಲ. ಪಾಪ ನೌಕರರು ದಯನಿಯವಾಗಿ ಬೇಡುತ್ತಿದ್ದಾರೆ. ಅಲ್ಪಸಂಬಳ ಸ್ವೀಕರಿಸಿ ಹಣದಾಸೆಗೆ ಬಲಿಬೀಳದೇ ಸಂಸ್ಥೆಯನ್ನು ಬಲಗೊಂಡು ಬೆಳೆಸಿದ್ದಾರೆ. ಈಗಿನ ಸರ್ಕಾರದ ನೀತಿ, ಡೀಸೆಲ್ ಬೆಲೆ, ಬಿಡಿಭಾಗಗಳ ಬೆಲೆ ಏರಿಕೆ ಇವುಗಳಿಂದ ಸಾರಿಗೆ ನಿರ್ವಹಣೆ ಸೋತು ಸುಣ್ಣಾಗಿದೆ. ತಕ್ಷಣ ಇದರತ್ತ ಗಮನ ಹರಿಸಬೇಕು.

ಮಕ್ಕಳಿಗೆ ಪರೀಕ್ಷಾ ಸಮಯ. ಇದು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಸಮಯವಲ್ಲ. ರಾಜ್ಯ ಸಾರಿಗೆ ತಮಗೆ ಅನುಕೂಲವಿಲ್ಲ ಎಂದು ವಿದ್ಯಾರ್ಥಿಗಳೇ ಹೇಳುತ್ತಾರೆ. ಸಂಸ್ಥೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶ್ರೀಧರ್ಮಪ್ಪ. ಆದರೆ ಕಾಯಕಲ್ಪ ಹೇಗೆ ಎಂಬ ಉತ್ತರವಿಲ್ಲ. ಕೇವಲ ಓಟುಗಳ ಲೆಕ್ಕದಿಂದ ನೋಡುವ ಸಮಸ್ಯೆ ಇದಲ್ಲ. ಒಂದು ಪ್ರದೇಶದ ದೈನಂದಿನ ಅಗತ್ಯವಾಗಿ ಹಾಸುಹೊಕ್ಕಾದ ಸಂಸ್ಥೆಯ ಅಳಿವು ಉಳಿವಿನ ಪ್ರಶ್ನೆ.

ಹಿಂದೆ ರಸ್ತೆ ರಾಷ್ಟ್ರೀಕರಣ ಸಂದರ್ಭದಲ್ಲಿ ರಾತ್ರೋರಾತ್ರಿ ಬಸ್’ಗಳ ಸಮೇತ ಕ್ರಮ ಜಾರಿಗೆ ಮಾಡಲಾಯಿತು. ಈಗ ಪರಿಸ್ಥಿತಿ ಬದಲಾಗಿದೆ. ಒಂದು ಅಪರೂಪದ ಸಹಕಾರಿ ಆಂದೋಲನವನ್ನು ದೇಶವ್ಯಾಪಿ ಜನಪ್ರಿಯಗೊಳಿಸಿದ ಸಹಕಾರ ಸಾರಿಗೆಯ ಬಗ್ಗೆ ವಿಶೇಷ ಕಾನೂನು ಹೊರಡಿಸಿ ರಕ್ಷಣೆ ನೀಡಬೇಕು. ಸರ್ಕಾರವೇ ವಹಿಸಿಕೊಂಡರೆ ಬಹಳ ಒಳ್ಳೆಯ ಕೆಲಸ.

ಜಿಲ್ಲೆಯ ಸಚಿವರಿದ್ದಾರೆ, ಪ್ರಭಾವೀ ರಾಜಕೀಯ ಮುಖಂಡರಿದ್ದಾರೆ, ಜನಸ್ಪಂದನೆಯ ಮುಖ್ಯಮಂತ್ರಿಗಳೇ ಇದ್ದಾರೆ. ಮಠಮಾನ್ಯಗಳಿಗೆ ಅನುದಾನ ನೀಡುವ ಪರಿಪಾಠವಿದೆ. ಇರಲಿ. ಅದರ ಜೊತೆಗೇ ಇದೂ ಒಂದು ನೂಲು ಮೇಲಿನ ಪುಣ್ಯದ ಕೆಲಸ. ಸಹಕಾರ ತತ್ವಕ್ಕೆ ಆನೆಬಲ ನೀಡುವ ಮಹತ್ವದ ಕೊಡುಗೆ ಇದಾಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಆ ಪುಣ್ಯಕಟ್ಟಿಕೊಳ್ಳಲಿ ಎಂದು ಆಶಿಸೋಣ.

ಲೇಖನ: ಡಾ.ಎನ್. ಸುಧೀಂದ್ರ 

Get in Touch With Us info@kalpa.news Whatsapp: 9481252093

Tags: BusC T RaviCM B S YediyurappaDr N SudeendraKannada News WebsiteLatestNewsKannadaMalnad NewsMP B Y RaghavendraSahakara SarigeTCSTCS BusTransportation agencyಡಾ.ಎನ್. ಸುಧೀಂದ್ರಮಲೆನಾಡ ಸಾರಿಗೆಸಹಕಾರ ಸಾರಿಗೆಸಾರಿಗೆ ಸಂಸ್ಥೆ
Previous Post

ಶಿವಮೊಗ್ಗ-ಚಿತ್ರದುರ್ಗ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ 500 ಕೋಟಿ ರೂ. ಅನುದಾನ

Next Post

ಸ್ವತಃ ಮೋದಿಯವರಿಂದಲೇ ಪ್ರಶಂಸೆ ಪಡೆದ ಯುವ ನಕ್ಷತ್ರ ‘ಹಾರಿಕಾ’ ದೇಶಭಕ್ತಿ ರಾಷ್ಟ್ರಕ್ಕೇ ಮಾದರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ಸ್ವತಃ ಮೋದಿಯವರಿಂದಲೇ ಪ್ರಶಂಸೆ ಪಡೆದ ಯುವ ನಕ್ಷತ್ರ ‘ಹಾರಿಕಾ’ ದೇಶಭಕ್ತಿ ರಾಷ್ಟ್ರಕ್ಕೇ ಮಾದರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!