ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಅದರಲ್ಲೂ ಬೆಂಗಳೂರು ಭಾಗದ ಜನರ ಸುಮಾರು 30 ವರ್ಷಗಳ ಬೇಡಿಕೆಯನ್ನು ಭಾರತೀಯ ರೈಲ್ವೆ #IndianRailway ಈಡೇರಿಸಿದ್ದು, ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಆರಂಭಿಸುವುದಾಗಿ ಘೋಷಣೆ ಮಾಡಿದೆ.
ಈ ಕುರಿತಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ #TejasviSurya ಮಾಹಿತಿ ಪ್ರಕಟಿಸಿದ್ದು, ಬೆಂಗಳೂರು ಮತ್ತು ಮುಂಬೈ ನಡುವೆ ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಭಾರತದ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಸೇರಲಿದೆ ಎಂದಿದ್ದಾರೆ.
ಈ ಕುರಿತಂತೆ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರು ಸಹ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ, ನಾವು ಬೆಂಗಳೂರು ಮತ್ತು ಮುಂಬೈ #Mumbai ನಡುವೆ ಸೂಪರ್ ಫಾಸ್ಟ್ ರೈಲನ್ನು ಪ್ರಾರಂಭಿಸುತ್ತೇವೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿವೆ ಮತ್ತು ಅವುಗಳ ನಿಲ್ದಾಣಗಳಲ್ಲಿ ಸಾಮರ್ಥ್ಯ ವಿಸ್ತರಣೆಯು ಈಗ ಇದನ್ನು ಸಾಧ್ಯವಾಗಿಸಿದೆ ಎಂದಿದ್ದಾರೆ.

ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿತ್ತು. ಕಳೆದ ಮೂರು ದಶಕಗಳಲ್ಲಿ, ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ನಮಗೆ ಬೆಂಗಳೂರು ಮತ್ತು ಮುಂಬೈ ನಡುವೆ ಒಂದೇ ಒಂದು ಸೂಪರ್ ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷ, ಎರಡು ನಗರಗಳ ನಡುವೆ 26 ಲಕ್ಷಕ್ಕೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈಗ, ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸಲು ಬಯಸುವ ಲಕ್ಷಾಂತರ ಜನರಿಗೆ ಇದು ಹೆಚ್ಚು ಕೈಗೆಟುಕುವ ಮತ್ತು ಅನುಕೂಲಕರವಾಗಿರುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಇನ್ನು, ಈ ಸೂಪರ್ ಫಾಸ್ಟ್ ರೈಲು ಅನುಮೋದನೆ ವಿಚಾರದಲ್ಲಿ ತೇಜಸ್ವಿ ಸೂರ್ಯ ಅವರು ನಿರಂತರವಾಗಿ ಕೇಳುತ್ತಲೇ ಇದ್ದರು. ಒಂದು ರೈಲಿನ ವಿಚಾರದಲ್ಲಿ ಅವರು ಹೀಗೆ ನಿರಂತರವಾಗಿ ಫಾಲೋ ಅಪ್ ಮಾಡಿದ್ದು ನನಗೆ ತುಂಬಾ ಸಂತೋಷವಾಯಿತು. ಅವರು ಯಾವಾಗಲೂ ಬೆಂಗಳೂರಿನ ಜನರಿಗಾಗಿ ಶ್ರಮಿಸುತ್ತಾರೆ ಎಂದು ಅಶ್ಚಿನಿ ವೈಷ್ಣವ್ ಪ್ರಶಂಸಿಸಿದ್ದಾರೆ.

ಹೊಸ ಸೂಪರ್ ಫಾಸ್ಟ್ ರೈಲು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜನರು ಎರಡು ನಗರಗಳ ನಡುವೆ ಪ್ರಯಾಣಿಸಲು ಕೈಗೆಟುಕುವ ಮತ್ತು ಅನುಕೂಲಕರವಾಗಿಸುತ್ತದೆ.
ಈಗ, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸಲು ಜನರು ವಿಮಾನಗಳು ಮತ್ತು ಬಸ್’ಗಳಿಗೆ ಪರ್ಯಾಯವನ್ನು ಹೊಂದಿದ್ದಾರೆ.
ಹೊಸ ರೈಲು ಸಂಚಾರ ಪ್ರಯಾಣಿಕರು, ಕುಟುಂಬಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post