ಕಲ್ಪ ಮೀಡಿಯಾ ಹೌಸ್ | ಗುರುವಾಯೂರು |
ಕೇರಳದ ತ್ರಿಶೂರ್ ಬಳಿಯಿರುವ ಗುರುವಾಯೂರು ಶ್ರೀ ಕೃಷ್ಣಸ್ವಾಮಿ ದೇವಾಲಯ Kerala Trishur Shri Krishnaswamy Temple ಅಪರೂಪದ ಗಳಿಗೆಯೊಂದಕ್ಕೆ ಸಾಕ್ಷಿಯಾಯಿತು.
ಹೌದು… ಶ್ರೀಕೃಷ್ಣನ ಸನ್ನಿಧಿಯಲ್ಲಿ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ PM Narendra modi ಅವರ ಸಮ್ಮುಖದಲ್ಲಿ ನವಜೋಡಿಯೊಂದು ವಿವಾಹವಾಗಿದ್ದು, ವಿಶೇಷ ಗಳಿಗೆಗೆ ಸಾಕ್ಷಿಯಾಯಿತು.
ನಟ ಕಮ್ ರಾಜಕಾರಣಿ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ ಅವರ ವಿವಾಹ ನಡೆಯಿತು.
ಗುರುವಾಯೂರು ದೇವಸ್ಥಾನದ ಪೂರ್ವ ಪ್ರವೇಶ ದ್ವಾರದಲ್ಲಿರುವ ಮೊದಲ ಮಂಟಪದಲ್ಲಿ ಭಾಗ್ಯ ಸುರೇಶ್ ಅವರ ವಿವಾಹವು ಬೆಳಿಗ್ಗೆ 8.45 ಕ್ಕೆ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಧು-ವರರಿಗೆ ಹೂವಿನ ಹಾರಗಳನ್ನು ನೀಡಿದರು. ಬಳಿಕ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಕಲಾವಿದೊಂದಿಗೆ ಸಂವಾದ ನಡೆಸಿ ಆಶೀರ್ವದಿಸಿದರು.
Also read: ಮೋದಿಯವರ ಎಸ್’ಪಿಜಿ ಕಮಾಂಡೋ ಸಮವಸ್ತ್ರ ಬದಲು ಪಂಚೆ, ಶಲ್ಯ ಧರಿಸಿದ್ದು ಯಾಕೆ?
ಮಲಯಾಳಂನ ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ದಿಲೀಪ್ ಸೇರಿದಂತೆ ಹಲವು ಸೂಪರ್ ಸ್ಟಾರ್’ಗಳು ಹಾಜರಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಗುರುವಾಯೂರಿಗೆ ಆಗಮಿಸಿದ ಪ್ರಧಾನಿಯವರು ಗುರುವಾಯೂರು ದೇವಸ್ವಂ ಮಂಡಳಿಯ ಶ್ರೀವಲ್ಸಂ ಅತಿಥಿಗೃಹದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ನಂತರ ದೇವಸ್ಥಾನಕ್ಕೆ ತೆರಳಿದರು. ಬಳಿಕ ಶ್ರೀಗುರುವಾಯೂರಪ್ಪನ ದೇವರಿಗೆ ಕಮಲದ ಹೂಗಳಿಂದ ತುಲಾಭಾರ ಅರ್ಪಿಸಿದರು. ಬೆಳಗ್ಗೆ 8.30ರ ಸುಮಾರಿಗೆ ದರ್ಶನ ಮುಗಿಸಿದ ಮೋದಿ ಅವರು ಗುರುವಾಯೂರಿನಲ್ಲಿ ವಿವಾಹವಾದ ಸುಮಾರು 20 ಜೋಡಿಗಳಿಗೆ ತಮ್ಮ ಆಗಮನ ಸಂದರ್ಭದಲ್ಲಿ ಶುಭ ಹಾರೈಸಿದರು.
ಪ್ರಧಾನಿ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವಾಗ ಸಾಂಪ್ರದಾಯಿಕ ‘ಮುಂಡು’ (ಧೋತಿ) ಮತ್ತು ‘ವೇಷ್ಟಿ’ (ಮೇಲ್ಭಾಗವನ್ನು ಮುಚ್ಚುವ ಶಾಲು) ಧರಿಸಿದ್ದರು. ದೇವಸ್ವಂ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಧಾನಿಯವರು, ಶ್ರೀಕೃಷ್ಣ ದೇಗುಲದ ದೈವಿಕ ಶಕ್ತಿಯನ್ನು ಅಪಾರವಾಗಿದೆ. ಪವಿತ್ರವಾದ ಗುರುವಾಯೂರ್ ದೇವಾಲಯದಲ್ಲಿ ಪ್ರಾರ್ಥಿಸಿದ್ದೇನೆ. ಈ ದೇವಾಲಯದ ದೈವಿಕ ಶಕ್ತಿಯು ಅಗಾಧವಾಗಿದ್ದು, ಪ್ರತಿಯೊಬ್ಬ ಭಾರತೀಯರು ಸಂತೋಷದಿAದ ಮತ್ತು ಸಮೃದ್ಧವಾಗಿರಲು ನಾನು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post