ಕಲ್ಪ ಮೀಡಿಯಾ ಹೌಸ್ | ಹಾಸನ |
ಕಾಂಗ್ರೆಸ್ನವರಿಗೆ ಗೊತ್ತಿರುವುದು ರಾವಣ ಮಾತ್ರ. ಆದರೆ ಬಿಜೆಪಿಗೆ ಶ್ರೀರಾಮಚಂದ್ರನ ಆಡಳಿತ ತಿಳಿದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Minister Sudhakar ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಶತಮಾನದ ಮಹಾತ್ಮ ಎಂದು ಕರೆಯಲಾಗುತ್ತಿದೆ. ಶ್ರೀ ರಾಮಚಂದ್ರ ರಾಮರಾಜ್ಯವನ್ನು ಕಟ್ಟಿದಂತೆಯೇ ಮೋದಿಯವರು ಆಡಳಿತ ನಡೆಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರ ಹೇಗೆ ಆಡಳಿತ ನಡೆಸಿತ್ತು, ಈಗ ಹೇಗೆ ಆಡಳಿತ ನಡೆಯುತ್ತಿದೆ ಎಂಬುದನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ ತಿಳಿದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರೆ ಅವರಿಗೆ ಮಾತ್ರ ಉಳಿಗಾಲವಾಗುತ್ತದೆ. ಆದರೆ ರಾಜ್ಯ ಸುಭಿಕ್ಷೆಯಿಂದಿದೆ. ನಾನು ಸೇರಿದಂತೆ ಯಾವುದೇ ವ್ಯಕ್ತಿ ವ್ಯವಸ್ಥೆಗೆ ಅನಿವಾರ್ಯವಲ್ಲ. ಯಾರೂ ಇಲ್ಲದಿದ್ದರೂ ವ್ಯವಸ್ಥೆ ಮುಂದುವರಿಯುತ್ತದೆ ಎಂದರು.

ಚುನಾವಣೆ ವೇಳೆ ಎಲ್ಲಾ ಯಾತ್ರೆಗಳು ಆರಂಭವಾಗುತ್ತದೆ. ಭಾರತ್ ಜೋಡೋ, ಪಂಚರತ್ನ ಕೂಡ ನಡೆಯುತ್ತಿರುವುದು ಸಹಜ. ಬಿಜೆಪಿ ಆಡಳಿತ ಮಾಡುತ್ತಿರುವುದೇ ಅಭಿವೃದ್ಧಿ ಹೆಸರಿನಲ್ಲಿ. ಧರ್ಮ, ಜಾತಿಯ ಓಲೈಕೆ ಮಾಡುವುದು ಕಾಂಗ್ರೆಸ್ ಮಾತ್ರ. ಇದು ಇತಿಹಾಸದಲ್ಲೂ ಕಂಡುಬರುತ್ತದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post