ಕಲ್ಪ ಮೀಡಿಯಾ ಹೌಸ್ | ಹಾಸನ |
ಮಂಡ್ಯದಲ್ಲಿ ಸುಮಲತಾ, #Sumalatha ಹಾಸನದಲ್ಲಿ ಬಿಜೆಪಿಯ ಕೆಲವು ನಾಯಕರು ನಮಗೆ ಕೋ-ಆಪರೇಟ್ ಮಾಡ್ತಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ #H D Devegowda ಕಿಡಿ ಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೈತ್ರಿ ಪಕ್ಷದ ಕೆಲವು ನಾಯಕರಿಂದ ನಮಗೆ ಬೇಸರವಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿ ಅವರಿಗೆ ಹಾಗೂ ಹಾಸನದಲ್ಲಿ ಬಿಜೆಪಿಯ ಕೆಲವು ನಾಯಕರು ಕೋ-ಆಪರೇಟ್ ಮಾಡ್ತಿಯಲ್ಲ ಎಂದು ಬೇಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿಗೆ ಕೋ-ಆಪರೇಟ್ ಮಾಡುತ್ತಿಲ್ಲ. ಅದರಿಂದ ಕುಮಾರಸ್ವಾಮಿ #H D Kumaraswamy ಏನೋ ಅಪಾಯ ಆಗುತ್ತದೆ ಎಂದು ನೀವು ಹೇಳಬಹುದು. ಆದರೆ ಏನೂ ಆಗುವುದಿಲ್ಲ ಎಂದರು.
Also read: ನೇಹಾ-ಫಯಾಜ್ ಫೋಟೋಗಳು ವೈರಲ್ | ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಅನುಮಾನ
ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡುತ್ತಾರೆ ಎಂದು ನೀವು ಕೇಳಬಹುದು, ನಾನೇ ಹೇಳ್ತೀನಿ. ಇಂದು ಕಾವೇರಿ ಬೇಸಿನ್’ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ ಆಪರೇಟ್ ಮಾಡುತ್ತಿಲ್ಲ ಎಂದು ಬೇಸರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post