Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಧುಮೇಹಿಗಳ ಆರೋಗ್ಯಕರ ಜೀವನಕ್ಕೆ ಇಲ್ಲಿವೆ ಡಾ.ರವೀಶ್ ಅವರ ಸಲಹೆಗಳು

ನಿಮ್ಮಲ್ಲಿನ ಭಯವೇ ಅಪಾಯ ತಂದೊಡ್ಡಬಹುದು ಎಂಬುದನ್ನು ನೆನಪಿಡಿ

February 3, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇಂದು ಮಧುಮೇಹ ಸರ್ವೇಸಾಮಾನ್ಯವಾಗಿದೆ. ಹಳಬರಲ್ಲಿ ಇದು ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ, ಡಯಾಬಿಟಿಸ್ ಹಾಗೂ ಇತ್ತೀಚಿನವರೆಗೆ ಶುಗರ್ ಕಂಪ್ಲೈಂಟ್ ಎಂದೂ ಜನಜನಿತವಾಗಿದೆ. ಈ ರೋಗದ ಬಗ್ಗೆ ನಮ್ಮ ದೇಶದಲ್ಲಿ ಬಹು ಹಿಂದೆ ಉಲ್ಲೇಖವಿದೆ.

ಸುಶ್ರುತ ಸಂಹಿತೆ(400ಬಿಸಿ)ಯಲ್ಲಿ ಸಿಹಿಮೂತ್ರ ವಿಸರ್ಜನೆ ಮತ್ತು ಸಕ್ಕರೆ ಕಾಯಿಲೆಯ ವಿಧಗಳು ಚರ್ಚಿಸಲ್ಪಟ್ಟಿದೆ. ಈ ರೋಗಕ್ಕೆ ಡಯಾಬಿಟಿಸ್ (ಅತಿಮೂತ್ರ ವಿಸರ್ಜನೆ ಎಂಬ ಅರ್ಥದಲ್ಲಿ) ಎಂಬ ಹೆಸರನ್ನು ಮೊದಲ ಶತಮಾನದಲ್ಲೇ ಗ್ರೀಕ್ ವೈದ್ಯ ಏರಿಯಟಸ್ ನೀಡಿದ್ದ. ನಂತರ ಎಫ್’ಜಿ ಬ್ಯಾಂಟಿಂಗ್ ಮತ್ತು ಸಿಎಚ್ ಬೆಸ್ಟ್‌. ಅವರು 1921ರ ಜುಲೈ 30ರಂದು ಇನ್ಸುಲಿನ್ ಕಂಡುಹಿಡಿದು ನೊಬೆಲ್ ಪ್ರಶಸ್ತಿಗೆ ಭಾಜನರಾದದ್ದು ಮಧುಮೇಹ ಚಿಕಿತ್ಸಾ ಕ್ರಮಗಳಲ್ಲಿ ಒಂದು ಮೈಲುಗಲ್ಲು.

ಡಯಾಬಿಟಿಸ್ ಹೇಗೆ ಬರುತ್ತದೆ?
ನಾವು ಸೇವಿಸಿದ ಆಹಾರವು ರಕ್ತದಲ್ಲಿ ಸಕ್ಕರೆಯಾಗಿ (ಗ್ಲುಕೋಸ್) ಜೀವಕೋಶಗಳಿಗೆ ಶಕ್ತಿಯ ಮೂಲವಾಗಿ ತಲುಪುತ್ತದೆ. ಈ ಕ್ರಿಯೆಗೆ ಇನ್ಸುಲಿನ್ ಹಾರ್ಮೋನ್ ಅತ್ಯವಶ್ಯ. ಇನ್ಸುಲಿನ್ ಕಡಿಮೆ ಉತ್ಪತ್ತಿಯಾದಲ್ಲಿ ಅಥವಾ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದೇ ಮಧುಮೇಹ ಅಥವಾ ಸಕ್ಕರೆ ಕಾಯಿಲೆ.

ಪ್ರತಿಯೊಬ್ಬ ವ್ಯಕ್ತಿಯ ದೇಹದ ರಕ್ತದಲ್ಲಿ ಸಕ್ಕರೆಯು ಒಂದು ನಿರ್ಧಿಷ್ಟ ಪ್ರಮಾಣವನ್ನು ಮೀರಿದಾಗ ಅದು ಮೂತ್ರಜನಕಾಂಗಗಳಿಂದ ಹಾದು ಮೂತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಅದೇ ಸಿಹಿಮೂತ್ರ ರೋಗ. ಮೂತ್ರದಲ್ಲಿ ಸಕ್ಕರೆ ಕಾಣಿಸಿಕೊಳ್ಳುವ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಜಾಗತಿಕ ಮಟ್ಟದ ಸಮಸ್ಯೆ
ಮಧುಮೇಹ ವಿಶ್ವದಾದ್ಯಂತ ಹೆಚ್ಚುತ್ತಿದ್ದು 2025ರ ವೇಳೆಗೆ ಮಧುಮೇಹಿಗಳ ಸಂಖ್ಯೆ 300 ಮಿಲಿಯನ್ ತಲುಪುವ ಅಂದಾಜಿನ ಆತಂಕವಿದೆ. ಇದರಲ್ಲಿ ಶೇ.75 ರೋಗಿಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಕಂಡು ಬರುತ್ತಾರೆ. ಇದರಲ್ಲಿ ಶೇ.30-35 ರೋಗಿಗಳು ಭಾರತ ಹಾಗೂ ಚೀನಾಗಳಲ್ಲಿ ಸಿಗುತ್ತಾರೆ! ಮಧುಮೇಹ ಸುದೀರ್ಘಾವಧಿಯ ಕಾಯಿಲೆ. ಅದು ಅನೇಕ ದುಷ್ಪರಿಣಾಮಗಳಿಗೆ ಕಾರಣ. ಮುಖ್ಯವಾಗಿ ಕಣ್ಣು, ಮೂತ್ರ ಜನಕಾಂಗ, ಮತ್ತು ಕೊಲೆಸ್ಟ್ರಾಲ್’ಗೆ ಸಂಬಂಧಿಸಿದ ರಕ್ತನಾಳ ತೊಂದರೆಗಳಾದ ಹೃದ್ರೋಗ, ಪಾರ್ಶ್ವವಾಯು, ಕೈಕಾಲು ಅಂಗ ವಿಚ್ಛೇದನದಂತಹ ಮಾರಕ ಸಂಭವನೀಯತೆಗಾಗಿ ಬಹಳ ಪ್ರಾಮುಖ್ಯವಾಗುತ್ತದೆ.

ಇದಲ್ಲದೇ ಸಾಮಾನ್ಯ ಸೋಂಕುಗಳು ಉಲ್ಬಣಿಸಿ ಒಟ್ಟಾರೆಯಾಗಿ ಮಧುಮೇಹಿಗೂ ಮತ್ತು ಕುಟುಂಬಕ್ಕೂ ಆರ್ಥಿಕವಾಗಿ ಹೊರೆಯಾಗುತ್ತದೆ. ಇದರಿಂದ ವೈದ್ಯಕೀಯ ವೆಚ್ಚವಲ್ಲದೇ ಸುಸೂತ್ರ ಜೀವನ ನಿರ್ವಹಣೆ ಕಷ್ಟಸಾಧ್ಯ.

ಮಧುಮೇಹಿಗರೇ ಗಮನಿಸಿ!
ಇನ್ಸುಲಿನ್ ಆವಿಷ್ಕಾರದ ಪೂರ್ವದಲ್ಲಿ ಮಧುಮೇಹದಿಂದ ಸಾವುಗಳು ಸಾಮಾನ್ಯವಾಗಿತ್ತು. ಇಂದು ಹಾಗಿಲ್ಲ. ಈ ಕಾಯಿಲೆಯೊಂದಿಗೂ ಸುಸೂತ್ರ ಜೀವನ ನಿರ್ವಹಣೆ ಸಾಧ್ಯ. ಮಧುಮೇಹದ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಗಳ ಅರಿವಿನಿಂದ ಮಧುಮೇಹಿ ಇಂದು ಹೆಚ್ಚು ಸಮಯ ಸಮರ್ಪಕ ಜೀವನ ನಿರ್ವಹಿಸಬಲ್ಲ. ಮಧುಮೇಹ ಮಕ್ಕಳಲ್ಲಿ ಆಟ ಪಾಠಕ್ಕೆ, ಉಳಿದವರಲ್ಲಿ ದೈನಂದಿನ ಕೆಲಸ ಕಾರ್ಯಕ್ಕೆ, ಮದುವೆಗೆ, ತಾಯ್ತನಕ್ಕೆ ಅಡ್ಡಿಯಾಗದಂತೆ ನಿರ್ವಹಿಸಬಲ್ಲ ಕಾಯಿಲೆ. ಹೋಟೆಲ್, ಸಭೆ ಸಮಾರಂಭ, ಪಾರ್ಟಿಗಳಲ್ಲಿ ಮಧುಮೇಹಿಗಳು ಹಿಂಜರಿಯದೇ ಖುಷಿಯಿಂದ ಪಾಲ್ಗೊಳ್ಳಬಹುದು. 300 ಮಿಲಿಯನ್ ಮಧುಮೇಹಿಗಳಲ್ಲಿ ತಾನು ಒಬ್ಬನಾದೆ ಎಂಬ ಕೀಳರಿಮೆ ತಾಳದೇ ಎಲ್ಲರಂತೆ ಹೆಮ್ಮೆಯಿಂದ ಜೀವಿಸಬಹುದಾಗಿದೆ. ಅದಕ್ಕೆ ಬೇಕಾಗಿರುವುದು ಕಾಯಿಲೆಯ ಬಗೆಗಿನ ಅರಿವು, ಸಮರ್ಪಕ ಚಿಕಿತ್ಸೆ ಮತ್ತು ಸ್ವಯಂ ನಿರ್ವಹಣೆ. ಇವೆಲ್ಲ ರೋಗಿಯ ಜವಾಬ್ದಾರಿಯಾಗಬೇಕು.

ಡಯಾಬಿಟಿಸ್ ನಿರ್ವಹಣೆ ಹೇಗೆ?
ಮಧುಮೇಹದ ನಿರ್ವಹಣೆ ವೈದ್ಯಕೀಯ ಪ್ರಗತಿಯಿಂದಾಗಿ ಆಶಾದಾಯಕವಾಗಿದೆ. ಈ ಮಾಹಿತಿ ರೋಗಿಗಳನ್ನು ಸೂಕ್ತವಾಗಿ ತಲುಪಬೇಕಿದೆ. ರಕ್ತದಲ್ಲಿ ಸಕ್ಕರೆ ಅಂಶದ ಸಂಪೂರ್ಣ ಹತೋಟಿ, ಮಧುಮೇಹದ ದುಷ್ಪರಿಣಾಮಗಳ ಅರಿವು ಇಂದಿನ ಅಗತ್ಯ.

ಹತೋಟಿಯಿಲ್ಲದ ಮಧುಮೇಹ ಅಪಾಯಕಾರಿ
ಅದು ಆ ಕ್ಷಣದಲ್ಲಿ ಸದ್ದಿಲ್ಲದೇ ಮೌನವಾಗಿ ನಿದ್ರಿಸುತ್ತಿರಬಹುದು. ಮುಂದೊಂದು ದಿನ ಅದರ ದುಷ್ಪರಿಣಾಮ ತಪ್ಪಿದ್ದಲ್ಲ. ಅದು ತರುವ ದೈಹಿಕ, ಮಾನಸಿಕ, ಆರ್ಥಿಕ ಹಿಂಜರಿತಗಳು ರೋಗಿ ಮತ್ತು ಅವರ ಕುಟುಂಬಕ್ಕಲ್ಲದೇ ಸಮಗ್ರ ದೇಶಕ್ಕೂ ಹಿನ್ನಡೆ. ತನ್ನ ಕಾಯಿಲೆಯನ್ನು ಮರೆತು ಅಥವಾ ಮುಚ್ಚಿಟ್ಟು ಹಿಂಜರಿಯಬಾರದು ಅಥವಾ ಮ್ಯಾಜಿಕ್, ರೆಮಿಡಿ, ಶೀಘ್ರ ಗುಣಪಡಿಸುವ ಜಾಹೀರಾತು ಚಿಕಿತ್ಸೆಗೆ ತನ್ನ ಆರೋಗ್ಯವನ್ನು ಬಲಿ ಕೊಡಬಾರದು.

ಮಧುಮೇಹಿಗರೇ ಧೈರ್ಯ ತಾಳಿರಿ!
ಏನು ಸೇವಿಸಿದರೆ ಏನಾಗುತ್ತೋ ಎಂಬ ಭಯ ಅಥವಾ ಅಕಾಲಿಕ ಕಿಡ್ನಿ ತೊಂದರೆ, ಹೃದಯಾಘಾತದಿಂದ ಮರಣವನ್ನಪ್ಪಿದವರ ಬಗ್ಗೆ ದುಃಸ್ವಪ್ನದಲ್ಲಿ ಬೆಚ್ಚುತ್ತಾ ಖಿನ್ನತೆಯಿಂದ ತೊಳಲಾಡಬಾರದು. ವೈಜ್ಞಾನಿಕವಾಗಿ ತನಗೆ ಒಪ್ಪಿತವಾದ ಚಿಕಿತ್ಸೆ ಪಡೆದು ತನ್ನ ಮಧುಮೇಹವನ್ನು ನಿಯಂತಣದಲ್ಲಿಡಬೇಕು. ಆಗಾಗ್ಗೆ ರಕ್ತ ಪರೀಕ್ಷೆ, ವೈದ್ಯರ ಸಲಹೆಗಳ ಮೂಲಕ ಮತ್ತಷ್ಟು ಖಾತ್ರಿಪಡಿಸಿಕೊಳ್ಳಬೇಕು. ವೈದ್ಯರ ಮಾರ್ಗದರ್ಶನ, ಕುಟುಂಬ, ಸ್ನೇಹಿತರ ಸಹಕಾರ ಪಡೆದು ಮಧುಮೇಹಕ್ಕೆ ಸೂಕ್ತ ಉತ್ತರ ನೀಡಿ ಈಸಬೇಕು, ಈಸಿ ಜೈಸಬೇಕು.

ಮಧುಮೇಹವನ್ನು ಸಮರ್ಥ ಜೀವನಶೈಲಿಯಿಂದ (ಆಹಾರ ಕ್ರಮ, ದೈಹಿಕ ಪರಿಶ್ರಮ, ಆರೋಗ್ಯಕರ ತೂಕ) ತಡೆಯಬಹುದು. ಮುಂದೂಡಬಹುದು. ಇದು ರೋಗಿಯಲ್ಲಿ ಸಕ್ಕರೆ ಹತೋಟಿಗೂ ಸಹಾಯಕ. ರಕ್ತದ ಸಕ್ಕರೆ ಅಂಶ ಸಹಜ ಸ್ಥಿತಿಯಲ್ಲಿ ಕಾಯ್ದುಕೊಂಡ ಮಧುಮೇಹಿ ಮುಂದಾಗುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು, ಮುಂದೂಡಬಹುದು ಅಥವಾ ಅದರ ತೀವ್ರತೆಯನ್ನು ಕಡಿಮೆಯಾಗಿಸಬಹುದು.


ತಜ್ಞ ಸಲಹಾ ವೈದ್ಯರು
ಶ್ರೀಲಕ್ಷ್ಮೀ ನರ್ಸಿಂಗ್ ಹೋಂ

Get in Touch With Us info@kalpa.news Whatsapp: 9481252093

Tags: Diabetes ControlDiabetes Control TipsDietDoctor Article in KannadaDr RaveeshHealth ArticleHealthy Life StyleHeart AttackHeart DiseaseInsulinLatestNewsKannadaಆಹಾರ ಕ್ರಮಇನ್ಸುಲಿನ್ಜೀವನಶೈಲಿಡಯಾಬಿಟಿಸ್ಡಾ.ರವೀಶ್ಮಧುಮೇಹಸಿಹಿಮೂತ್ರ ರೋಗಹೃದಯಾಘಾತಹೃದ್ರೋಗ
Previous Post

ಅಪರೋಕ್ಷ ಜ್ಞಾನದ ಅಪ್ರತಿಮ ದಾರ್ಶನಿಕರು – ಆಚಾರ್ಯ ಮಧ್ವರು

Next Post

T20 ಭಾರತಕ್ಕೆ ಇಡೀ ಸರಣಿ ಜಯಮಾಲೆ ಕನ್ನಡಿಗರಿಗೆ ಹೆಮ್ಮೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

T20 ಭಾರತಕ್ಕೆ ಇಡೀ ಸರಣಿ ಜಯಮಾಲೆ ಕನ್ನಡಿಗರಿಗೆ ಹೆಮ್ಮೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶ್ರೀ ವರಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ

June 24, 2025

ಸಹಕಾರನಗರ ಶ್ರೀಮದುತ್ತರಾದಿ ಮಠದಲ್ಲಿ ಜೂ.27ರವರೆಗೆ ವಿಶೇಷ ಕಾರ್ಯಕ್ರಮ

June 24, 2025

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶ್ರೀ ವರಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ

June 24, 2025

ಸಹಕಾರನಗರ ಶ್ರೀಮದುತ್ತರಾದಿ ಮಠದಲ್ಲಿ ಜೂ.27ರವರೆಗೆ ವಿಶೇಷ ಕಾರ್ಯಕ್ರಮ

June 24, 2025

International Day of Yoga Celebrated at Ashokapuram Central Workshop

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!