ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಹೊಳೆಹೊನ್ನೂರಿನ ಅರೆಬಿಳಚಿ ಕ್ಯಾಂಪ್’ನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2021ರ ಡಿ.29ರಂದು ಅರೆಬಿಳಚಿಯ ನಿವಾಸಿಯೊಬ್ಬರು ತಮ್ಮ ಪತ್ನಿಯ ಹೆರಿಗೆಗಾಗಿ ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿದ್ದರು. ಜ.4ರಂದು ಇವರು ಮನೆಗೆ ಹಿಂತಿರುಗುವ ವೇಳೆಗೆ ಇವರ ಮನೆಯ ಬೀಗ ಮುರಿದು ಟಿವಿ, 50 ಸಾವಿರ ರೂ ನಗದನ್ನು ಕಳ್ಳರು ದೋಚಿದ್ದರು.
ಈ ಬಗ್ಗೆ ಇವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪಿಐ, ಪಿಎಸ್’ಐ ಅವರುಗಳ ನೇತೃತ್ವದ ತಂಡ ತನಿಖೆ ನಡೆಸಿ ಹಾಯ್ ಹೊಳೆ ಗ್ರಾಮ ಸುರೇಶ್ ಕರಡಿ(24), ಮಿಳಘಟ್ಟದ ಪ್ರವೀಣ್(22) ಹಾಗೂ ಅಭಿಶೇಕ್(22) ಹಾಗೂ ಗಾಜನೂರಿನ ಶಿವಕುಮಾರ್(23) ಎನ್ನುವವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಹೊಳೆಹೊನ್ನೂರು ಠಾಣೆಯ-1, ತುಂಗಾನಗರ ಠಾಣೆಯ-2 ಮತ್ತು ತೀರ್ಥಹಳ್ಳಿ ಠಾಣೆಯ 1 ಪ್ರಕರಣ ಸೇರಿ 4 ಸುಲಿಗೆ ಪ್ರಕರಣಗಳು ಮತ್ತು ಹೊಳೆಹೊನ್ನೂರು ಹಾಗೂ ಮಾಳೂರು ಪೊಲೀಸ್ ಠಾಣೆಯ 2 ಮನೆಗಳ್ಳತನ ಪ್ರಕರಣಗಳು ಮತ್ತು ಹೊಳೆಹೊನ್ನೂರು ಠಾಣೆಯ-4, ತುಂಗಾನಗರ ಠಾಣೆಯ -1, ಶಿಕಾರಿಪುರ ಟೌನ್ ಠಾಣೆಯ-1, ಶಿವಮೊಗ್ಗ ಗ್ರಾಮಾಂತರ ಠಾಣೆಯ-1 ಮತ್ತು ರಿಪ್ಪನ್ ಪೇಟೆ ಠಾಣೆಯ 1 ಪ್ರಕರಣ ಸೇರಿ 8 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳಿಗೆ ಸಂಬಂಧಿಸಿದ 52 ಗ್ರಾಂ 540 ಮಿಲಿ ತೂಕದ ಬಂಗಾರದ ಆಭರಣಗಳು, 8 ದ್ವಿ ಚಕ್ರ ವಾಹನಗಳು ಮತ್ತು 1 ಸೋನಿ ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇವರುಗಳ ವಿರುದ್ಧ ಐಪಿಸಿ ಕಲಂ 454, 457 380 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post