No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Wednesday, June 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಸಲಿಂಗಕಾಮ ತೀರ್ಪು: ಧರ್ಮ-ನ್ಯಾಯಾಲಯ ಎರಡನ್ನು ಪಾಲಿಸಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 7, 2018
in Army
0
Share on FacebookShare on TwitterShare on WhatsApp

ಪುರಾತನ ಶಾಸನಗಳ ಆಧಾರದಲ್ಲೇ ಈಗಿರುವ ಶಾಸನಗಳು ಅನುಷ್ಠಾನದಲ್ಲಿರುವುದು ಒಂದು ಮಾನವತಾ ಧರ್ಮದ ಸತ್ಯವಾಗಿರುತ್ತದೆ. ಜಗತ್ತಿನಲ್ಲಿ ಅನೇಕ ಧರ್ಮ ಶಾಸನಗಳನ್ನು ಆಯಾಯ ಧರ್ಮದ ಪ್ರಾಜ್ಞ ವಿದ್ವಾಂಸರುಗಳು ಅನುಭವದ ಮೂಲಕ ರಚಿಸಿದುದಾಗಿರುತ್ತದೆ.

ಸನಾತನ ವೇದೋಕ್ತ ವಿಧಾನಗಳು (ಹಿಂದೂ ಪದ್ಧತಿ) ಅನೇಕ ಸಂಸ್ಕಾರಗಳನ್ನೂ, ಅದನ್ನು ಮೀರಿ ನಡೆದರೆ ಉಂಟಾಗುವ ದೋಷಗಳನ್ನೂ ತಿಳಿಸಿದೆ. ಆದರೆ ಕಾಲಕ್ಕೆ ತಕ್ಕಂತೆ ಈ ಶಾಸನಗಳಲ್ಲಿ ಪರಿವರ್ತನೆಗಳನ್ನೂ ತರಬೇಕು ಎಂಬುದಾಗಿಯೂ ತಿಳಿಸಿದೆ.

ಪ್ರಕೃತಿ ಸತ್ಯಕ್ಕೆ ವಿರುದ್ಧ ಹೋಗಬಾರದು

ನಮ್ಮ ಮನುಸ್ಮೃತಿಯನ್ನು ಅನೇಕರು ವಿರೋಧಿಸಿದ್ದೂ ಇದೆ. ಆದರೆ ಅದರ ಕೆಲವೊಂದು ಶಾಸನಗಳಲ್ಲಿ ಪರಿವರ್ತನೆಗಳೂ ಆಗಿವೆ, ಕೆಲವೊಂದು ಶಾಸನಗಳ ಪಾಲನೆಯೂ ಅಗತ್ಯವಿರುವುದಿಲ್ಲ. ಯಾಕೆಂದರೆ ನಾಗರೀಕತೆ ಬೆಳೆದಂತೆ ಪರಿವರ್ತನೆಗಳೂ ಬೇಕಾಗಿವೆ. ಉದಾ: ಶೂದ್ರರ ಹೆಸರಿನ ಕೊನೆಗೆ ‘ದಾಸ’ ಎಂಬುದನ್ನು ಸೇರಿಸಬೇಕಿದೆ. ಆದರೆ ಈಗ ಇದು ಸಮಂಜಸವಲ್ಲ. ಯಾಕೆಂದರೆ ಶೂದ್ರಜರು ಅನೇಕಾನೇಕ ಜನರು ಉತ್ತಮ ಸಂಸ್ಕಾರ ಹೊಂದಿ ದ್ವಿಜ ಸಮಾನರಾಗಿದ್ದಾರೆ. ಹೀಗಿದ್ದಾಗ ಅಂದಿನ ನಿಯಮವು ಇಂದಿಗೆ ಸೂಕ್ತವಾಗದು. ಆದರೆ ಕೆಲವೊಂದು ಪ್ರಕೃತಿ ಸತ್ಯಕ್ಕೆ ವಿರುದ್ಧವಾಗಿ ನಡೆದು ಕೊಳ್ಳಬಾರದು ಎಂಬ ವಿಚಾರ ಎಂದೆಂದಿಗೂ ಸತ್ಯ.

ಮುಸ್ಲಿಮರ ಶೆರಿಯತ್ ಕಾನೂನನ್ನು ಗೌರವಿಸಲೇಬೇಕು. ಆದರೆ ಇಂದಿಗೆ ಅದೆಲ್ಲವೂ ಅನುಷ್ಟಾನದಲ್ಲಿ ಇರಬೇಕೆಂಬುದನ್ನು ಒಪ್ಪಲು ಸಾಧ್ಯವಿಲ್ಲ. ಉದಾ: ಸಂತಾನ ನಿಯಂತ್ರಣ ವಿರೋಧ, ತ್ರಿತಲಾಕ್ ಅಂದಿನ ಕಾಲಕ್ಕೆ ಬೇಕಾಗಿತ್ತು. ಕಾಲ ಬದಲಾದಂತೆ ಪರಿವರ್ತನೆ ಮಾಡಬೇಕಿತ್ತು.

ಆದರೆ ಅವರ ಜನಾಂಗವು ಹಳೆಯ ಕಾನೂನನ್ನೆ ಮತ್ತೆ ಮುಂದುವರಿಸುತ್ತಾ ಹೋಗಬೇಕು ಎನ್ನುವುದಕ್ಕೆ ಅರ್ಥವಿಲ್ಲ. ನಾವೂ ಮನುಸ್ಮೃತಿಯ ಪ್ರಕಾರ ಇಂದಿಗೂ ಅಸ್ಪೃಷ್ಯತೆ, ಶೂದ್ರಾದಿ ಭೇದ ಭಾವ ಮಾಡಿ ಮಡಿವಂತಿಕೆಯೇ ಬೇಕು ಎನ್ನುವುದನ್ನೂ ಈಗಿನ ಕಾಲಕ್ಕೆ ಅದೇಶಾಸನದ ಪಾಲೆನೆಯಾಗಬೇಕು ಎಂದರೆ ಅದು ಅರ್ಥಹೀನವಾಗುತ್ತದೆ.

ಸಲಿಂಗ ಕಾಮ ವಿಚಾರದಲ್ಲಿ ಸವೋಚ್ಛ ನ್ಯಾಯಾಲಯವು ನಿನ್ನೆಯಷ್ಟೇ ಒಂದು ಮಹತ್ತರ ತೀರ್ಪು ನೀಡಿದೆ. ಸಲಿಂಗ ಕಾಮವು ಅಪರಾಧವಲ್ಲ ಎಂಬ ತೀರ್ಪು ಅದು.

ಮನದಲ್ಲೇ ನೊಂದುಕೊಳ್ಳಬಹುದು

ಜಾತ್ಯತೀತ ಭಾರತದಲ್ಲಿ ಇರುವ ಶಾಸನವನ್ನು, ಅದನ್ನು ಎತ್ತಿಹಿಡಿದು ನೀಡುವ ತೀರ್ಪನ್ನು ಸಕಲ ಭಾರತೀಯ ಪ್ರಜೆಗಳು ಗೌರವಿಸಲೇ ಬೇಕಾಗಿರುತ್ತದೆ. ಆದರೆ ಅವರವರ ಧರ್ಮ ಶಾಸನಗಳ ಅನುಷ್ಠಾನದಲ್ಲಿ ಇರುವವರಿಗೆ ಗೊಂದಲವೂ ಆಗುತ್ತದೆ. ಹೇಗೆ ಏಕರೂಪ ಶಾಸನಕ್ಕೆ ಬೇರೆ ಧರ್ಮಗಳ ಜನರು ವಿರೋಧ ಮಾಡುತ್ತಾರೋ ಹಾಗೆಯೇ ಈ ಸಲಿಂಗ ಕಾಮ ಅಪರಾಧವಲ್ಲ ಎಂಬುದನ್ನು ಮನದೊಳಗಾದರೂ ವಿರೋಧಿಸಬಹುದು ಮತ್ತು ನ್ಯಾಯಾಲಯದ ತೀರ್ಪಿನ ಬಗ್ಗೆ ನೊಂದುಕೊಳ್ಳಬಹುದು.

ಯಾವಾಗಲೂ ನ್ಯಾಯಾಲಯ ನೀಡಿದ ತೀರ್ಪಿಗೆ ನಾವು ತಲೆಬಾಗಿ ಗೌರವಿಸುವವರು ಪ್ರಜೆಗಳು. ಹಾಗೆಯೇ ನ್ಯಾಯಾಲಯವೂ ಪ್ರಜೆಗಳಿಗೆ ನೋವಾಗುವಂತಹ ತೀರ್ಪು ನೀಡುವುದೂ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಬಹುದು ಮತ್ತು ಗೌರವಕ್ಕೂ ಚ್ಯುತಿ ಬರಬಾರದೆಂದೇನಿಲ್ಲ.

ಮನುಸ್ಮೃತಿಯಲ್ಲಿ ಏನು ಹೇಳಿದೆ?

ಮನು ಸ್ಮೃತಿಯಲ್ಲಿ ಒಂದೆಡೆ ರೇತಸ್ಸಿನ ಬಗ್ಗೆ ಒಂದು ವಿಚಾರ ಹೇಳಿದೆ. ಪುರುಷ ವೀರ್ಯವು ಭೂಮಿಗೆ ಬಿದ್ದು ವ್ಯರ್ಥವಾಗಬಾರದು ಎಂದಿದೆ. ಅಂದರೆ ಪುರುಷ ವೀರ್ಯವು ಇರುವುದು ಸಂತಾನ ಪಡೆಯಲಿಕ್ಕಾಗಿಯೇ ವಿನಾ ಭೋಗಕ್ಕಾಗಿ ಇರುವುದಲ್ಲ ಎಂಬ ಅರ್ಥವಿರುತ್ತದೆ. ಅನಧಿಕೃತವಾಗಿ ಅದೆಷ್ಟೋ ಮನುಷ್ಯರ ವೀರ್ಯ ಭೂಮಿಗೆ ಬಿದ್ದು ವ್ಯರ್ಥವಾಗುತ್ತಿರುತ್ತದೆ. ಆದರೆ ಧರ್ಮಶಾಸನವು ಇದು ದೋಷಪ್ರದ ಎಂದು ಹೇಳಿದೆ.

ಕಾಮತೋ ರೇತಸಃಸೇಕಂ ವೃತಸ್ಥಸ್ಯ ದ್ವಿಜನ್ಮನಃ
ಅತಿಕ್ರಮಂ ವೃತಸ್ಯಾಹುರ್ಧರ್ಮಜ್ಞಾ ಬ್ರಹ್ಮವಾಧೀನಃ
(ಮನು: 11-120 ನೇ ಶ್ಲೋಕ)

ಒಮ್ಮೆ ಪ್ರಾಣಿಗಳನ್ನು ನೋಡಿ

ಕಾಮನೆಯಿಂದ ವೀರ್ಯವನ್ನು ಸಂಭೋಗದಲ್ಲಿಯೋ, ಮೈಥುನ ಕೃತ್ಯಗಳಿಂದಲೋ ಚೆಲ್ಲಿದರೆ ಅವಕೀರ್ಣ ದೋಷವಿದೆ ಎಂದು ಹೇಳಿದೆ. ಅವಕೀರ್ಣೆಂದರೆ ನಾಶ ಮಾಡಿದ, ಹಾಳುಮಾಡಿದ ದುರುಪಯೋಗ ಮಾಡಿದ ದೋಷವಾಗುತ್ತದೆ. ಇದರಿಂದ ವ್ಯಕ್ತಿಯು ತೇಜಸ್ಸನ್ನು ಕಳೆದುಕೊಳ್ಳುತ್ತಾನೆ. ದೇಹಕ್ಕೆ ಬೇಗನೆ ಮುಪ್ಪು ಆವರಿಸಿ ಆಯುಕ್ಷೀಣವಾಗುತ್ತದೆ ಎಂಬುದು ಇದರ ಫಲಶ್ರುತಿ.

ಇದು ಕೇವಲ ಹಿಂದೂ ಧರ್ಮಕ್ಕೇ ಮಾತ್ರವಲ್ಲ. ಜಗತ್ತಿನ ಸಕಲ ಮನುಷ್ಯರಿಗೂ ಅನ್ವಯ ಆಗುವಂತ ಅನುಭವದ ಕಟು ಸತ್ಯ. ನೀವು ಯಾವುದೇ ಸರಿಸೃಪ, ಪ್ರಾಣಿ ಪಕ್ಷಿಗಳ ಚರಿತ್ರೆ ನೋಡಿ. ಅನಾವಶ್ಯವಾಗಿ ಅಕಾಲದಲ್ಲಿ ಗಂಡು ಹೆಣ್ಣುಗಳು ಒಟ್ಟು ಸೇರುವುದೇ ಇಲ್ಲ. ಅವುಗಳೊಳಗೆ ಅಂತಹ ಪ್ರಜ್ಞೆ ಇರುತ್ತದೆ. ಆದರೆ ಕೆಲ ಮನುಷ್ಯರಿಗೆ ಕಾಮ ತಡೆದುಕೊಳ್ಳಲು ಆಗದೆ ಸಲಿಂಗ, ಅತ್ಯಾಚಾರ, ಕೊನೆಗೆ ಪಶುಗಳ ಸಂಗಕ್ಕೂ ಮುಂದಾಗಿಬಿಡುತ್ತಾನೆ.

ಇಂತಹ ವಿಪರೀತವಾದ ಕಾಮೋದ್ರೇಕವನ್ನು divert ಮಾಡಲು ಅನೇಕ ವಿಚಾರಗಳಿದ್ದರೂ ಈ ಮನುಷ್ಯರು ಇದರಲ್ಲೇ ತಲ್ಲೀನರಾಗುತ್ತಾರೆ.

ಕಾಮಾತುರಾಣಾಂ ಲಜ್ಜಾ ಹೀನಂ ಎಂಬ ಪದಕ್ಕೆ ಇವರು ಹೋಲಿಕೆಯಾಗುತ್ತಾರೆ. ಇದೂ ಅಲ್ಲದೆ ಅನೇಕ ಪುರಾಣ ಕಥೆಗಳಲ್ಲಿ ಭೂಮಿಗೆ ಬಿದ್ದ ರೇತಸ್ಸಿನಿಂದ ಉತ್ಪತ್ತಿಯಾದ ಅನೇಕ ದಾನವರ ಉದಾಹರಣೆಗಳೂ ಇವೆ.

ಅದೆಲ್ಲ ಬಿಡಿ, ಪುರಾಣ ಸುಳ್ಳು ಎನ್ನುವವರಲ್ಲಿ ವಾದ ಮಾಡಲಾಗದು. ಆದರೂ ಪ್ರಕೃತಿ ವಿಚಾರದಲ್ಲಿ ಸರ್ವ ಪ್ರಜೆಗಳೂ ಒಪ್ಪುವಂತಹ ವಿಚಾರವೆಂದರೆ ಸ್ಖಲನವಾದ ವೀರ್ಯವು ಸಂತಾನೋದ್ದೇಶವಾಗಿಯೇ ಇರಬೇಕಲ್ಲದೆ ಭೂಮಿಗೆ ಬಿದ್ದು ವ್ಯರ್ಥವಾಗದೆ ಇನ್ನೊಂದು ಅವಾಂತರಕ್ಕೆ ಕಾರಣವಾಗಬಾರದು ಎಂಬುದಂತೂ ಸತ್ಯವೇ.

ಹಾಗಾಗಿ ಶ್ರೇಷ್ಟ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಾ ಮುಂದೆ ಇಂತಹ ಕೃತ್ಯಗಳಿಂದ ನ್ಯಾಯಾಲಯಕ್ಕೆ ಗೊಂದಲ ತರುವಂತೆಯೂ ಆಗಬಾರದು. ಹಾಗಾಗಿ ಇಂತಹ ಸಲಿಂಗ ಕಾಮಕೃತ್ಯಗಳಿಗೆ ಹೋಗದೆ, ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗದೆ ಧರ್ಮನಿಷ್ಟರಾಗಿರಬೇಕು. ಆವಾಗ ಆಯಾಯ ಧರ್ಮ ಶಾಸನಗಳನ್ನೂ ಉಲ್ಲಂಘಿಸಿದಂತಾಗದು.

ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ದೇಶದ ಪ್ರತಿ ನಾಗರಿಕನೂ ಪಾಲಿಸಬೇಕಾದ್ದು ಕರ್ತವ್ಯ. ಆದರೆ, ನ್ಯಾಯಾಂಗದ ತೀರ್ಪನ್ನು ಹೇಗೆ ಗೌರವಿಸಬೇಕೋ ಹಾಗೆಯೇ ನಾವು ನಂಬಿಕೊಂಡ ಧರ್ಮಕ್ಕೆ ಎಂದಿಗೂ ಚ್ಯುತಿ ಬಾರದಂತೆ ನಡೆದುಕೊಳ್ಳುವುದೂ ಸಹ ಪ್ರತಿಯೊಬ್ಬರ ಕರ್ತವ್ಯ. ನ್ಯಾಯಾಲಯದ ತೀರ್ಪು ನೀಡಿದೆ ಎಂದ ಮಾತ್ರಕ್ಕೆ ಅದು ಸ್ವೇಚ್ಛಾಚಾರಕ್ಕೆ ಅವಕಾಶ ಎಂದರ್ಥವಲ್ಲ. ಹೀಗಾಗಿ, ನ್ಯಾಯಾಲಯದ ತೀರ್ಪನ್ನೂ ಉಲ್ಲಂಘಿಸಬಾರದು, ಧರ್ಮಕ್ಕೂ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರೆ, ಪ್ರಕೃತಿ ಧರ್ಮ ವಿರೋಧಿಸುವ ಸಲಿಂಗ ಕಾಮಕ್ಕೆ ಅವಕಾಶ ನೀಡದೇ ಇದ್ದರೆ ಸಾಕು. ಆಗ, ನ್ಯಾಯಾಲಯದ ವಿರುದ್ಧವೂ ಹೋದಂತಾಗುವುದಿಲ್ಲ, ಧರ್ಮದ ಅನುಸಾರ ನಡೆದಂತೂ ಆಗುತ್ತದೆ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

 

ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಇಲ್ಲಿಗೆ ಕಳುಹಿಸಿ:
ಕರೆ:        9008761663
ವಾಟ್ಸಪ್: 9481252093
ಇ-ಮೇಲ್: kalpanews.kannada@gmail.com
aniruddha.vasista@gmail.com

Tags: HomosexualityManu SmritiPrakash AmmannayaSupreme Court Of Indiaಕಾಮಾತುರಾಣಾಂ ಲಜ್ಜಾ ಹೀನಂ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ಕೊಡುತ್ತಾನಂತೆ ಕಾಂಗ್ರೆಸ್ ಶಾಸಕ

Next Post

ಕೈಲಾಸ ಮಾನಸ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕಂಡಿದ್ದು ಹೀಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೈಲಾಸ ಮಾನಸ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕಂಡಿದ್ದು ಹೀಗೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Maharajas Trophy T20 cricket tournament - Shivamogga Yodhas Jersey

ಶಿವಮೊಗ್ಗ ಯೋಧಾಸ್ ಜರ್ಸಿ ಅನಾವರಣ | ಜೂನ್ 20ರಿಂದ ಮಹಾರಾಜ ಟ್ರೋಫಿ ಟಿ20 ಆರಂಭ

June 17, 2026
ಕೊಡಗು: ಆಮ್ಲಜನಕ ದಾಸ್ತಾನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚನೆ

ಮೋದಿ ಸರ್ಕಾರದ 12 ವರ್ಷದ ಸಾಧನೆಗಳೇನು? ಸಚಿವ ವಿ. ಸೋಮಣ್ಣ ವಿವರಿಸಿದ್ದು ಹೀಗೆ

June 17, 2026
Bhadravathi News Town Police Station

Bhadravathi | ವಿಷಪೂರಿತ ಹಾವು ಬಿಡಿಸಿ ಯುವತಿ ಕೊಲೆ ಯತ್ನ | ಇಬ್ಬರ ಬಂಧನ

June 17, 2026
`ಬೂತ್ ವಾಸ್ತವ್ಯ’ | ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ನಿವಾಸದಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ

`ಬೂತ್ ವಾಸ್ತವ್ಯ’ | ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ನಿವಾಸದಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ

June 16, 2026
ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

June 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL