ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರಾದ ಆನಂದ್ ಸಿಂಗ್ ರವರು ಕಳೆದ ಮೂರು ನಾಲ್ಕು ದಿನಗಳಿಂದ ಹೊಸಪೇಟೆಯ ಅನೇಕ ವಾರ್ಡ್’ಗಳ ಬಡಕುಟುಂಬದ ಮನೆಗಳಿಗೆ ಅಧಿಕಾರಿಗಳ ಸಮೇತವಾಗಿ ಭೇಟಿ ನೀಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಅವರ ದಿನಂಪ್ರತಿ ಜೀವನಕ್ಕೆ ಹಾಗೂ ಅವರ ಆಹಾರ ತಿನಿಸುಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಕಡುಬಡವರ ಮನೆಯಲ್ಲಿನ ಜೀವನ ಜೀವನ ಶೈಲಿಯನ್ನು ಸೂಕ್ಷ್ಮವಾಗಿ ಅರಿತವರು ಲಾಕ್ ಡೌನ್ ಮುಂದುವರಿದರೆ ಆಗುವ ಪರಿಣಾಮವನ್ನು ಅರಿತರು.
ಕೊರೋನ ವೈರಸ್ ಲಾಕ್ ಡೌನ್ ದಿನಾಂಕ 15ಕ್ಕೆ ಮುಕ್ತಾಯವಾಗುವುದಿಲ್ಲ ಎಂದು ತಿಳಿದು ತಮ್ಮ ಕ್ಷೇತ್ರದ ಕಡು ಬಡವರು, ಕೂಲಿ ಕಾರ್ಮಿಕರು, ಬಿಪಿಎಲ್ ಪಡಿತರ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಹಾರ ವ್ಯವಸ್ಥೆಗೆ ಬೇಕಾಗುವ ದಿನಸಿಯನ್ನು ನೀಡಲು ಮುಂದಾಗುತ್ತಾರೆ. ಸುಮಾರು ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯಗಳ ಮತ್ತು ದಿನಸಿ ಇರುವ ಪ್ಯಾಕ್ಗಳನ್ನು ತಯಾರಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ 60,000 ಕುಟುಂಬಗಳಿಗೆ ದಿನಾಂಕ 17 ರಿಂದ ಹಂಚುತ್ತಿದ್ದಾರೆ.
ಈಗಾಗಲೇ ಹಲವಾರು ಕಾರ್ಮಿಕರು ಈ ಕೆಲಸ ಕಾರ್ಯದಲ್ಲಿ ತೊಡಗಿದ್ದು ಒಂದು ಪ್ಯಾಕ್ ನಲ್ಲಿ 6 ಕೆಜಿ ಜೋಳ, 3ಕೆಜಿ ಬೇಳೆ , 1 ಕೆಜಿ ಉಪ್ಪು, 3 ಕೆಜಿ ಗೋಧಿ 1ಕೆಜಿ ಎಣ್ಣೆ, ಹಾಲಿನ ಪ್ಯಾಕೆಟ್ ಅರಿಶಿನ, ಬೆಳ್ಳುಳ್ಳಿ ಸಾಸಿವೆ ಹೀಗೆ ಹತ್ತು ಸಾಮಗ್ರಿಗಳನ್ನು ಹಾಕಿದ ಆನಂದ್ ಸಿಂಗ್ ರವರ ಭಾವಚಿತ್ರ ಇರುವ ಪ್ಯಾಕ್’ಗಳು ಆಯಾ ವಾರ್ಡ್/ವಿಭಾಗದ ಮುಖ್ಯಸ್ಥರುಗಳ ಸಮ್ಮುಖದಲ್ಲಿ ಹಂಚಲಾಯಿತು.
(ವರದಿ: ಎಂ.ಎಂ. ನಾಡಿಗೇರ್, ಹೊಸಪೇಟೆ)
Get in Touch With Us info@kalpa.news Whatsapp: 9481252093
Discussion about this post