ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಕಾಂಗ್ರೆಸ್ ನಾಯಕರು ಜೈಲಲ್ಲಿ ಇರಬೇಕಾದವರು, ವಿಧಾನಸಭೆಗೆ ಹೋಗಲು ಅವರೆಲ್ಲ ಅನರ್ಹರು ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಜೈಲಿಗೆ ಕಳುಹಿಸಿ ಎಂದು ನಾನು ಸಿಎಂ ಬಸವರಾಜ ಬೊಮ್ಮಾಯಿಯವರನ್ನು CM Basavaraja Bommai ಆಗ್ರಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು Nalin Kumar Kateel ಕಿಡಿಕಾರಿದ್ದಾರೆ.
ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಆರಂಭಕ್ಕೆ ಮುನ್ನ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ರಾಜ್ಯಾದ್ಯಂತ ಇಂದು ಕಾಂಗ್ರೆಸ್ ಆರಂಭಿಸಿರುವ ಪಾದಯಾತ್ರೆ ಬಗ್ಗೆ ಸುದ್ದಿಗಾರರು ಕೇಳಿದಾಗ ಕಾಂಗ್ರೆಸ್ ನಾಯಕರು ಜೈಲಲ್ಲಿ ಇರಬೇಕಾದವರು, ವಿಧಾನಸಭೆಗೆ ಹೋಗಲು ಅವರೆಲ್ಲ ಅನರ್ಹರು ಎಂದರು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿಯ ಅಂಗವಾಗಿ ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ @AnandSinghBS, ಶ್ರೀಮತಿ @ShashikalaJolle, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @MTenginkai, ಶ್ರೀ @siddarajuBJP ಮತ್ತು ಪ್ರಮುಖರು ಉಪಸ್ಥಿತರಿದ್ದರು. pic.twitter.com/lyuIk9yzot
— BJP Karnataka (@BJP4Karnataka) April 16, 2022
ಹಿಂದಿನ ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಕೆ ಜೆ ಜಾರ್ಜ್ ಘಟನೆ ನಡೆದಾಗ ಡಿವೈಎಸ್ಪಿ ಗಣಪತಿಯವರು ವಿಡಿಯೊದಲ್ಲಿ ಸ್ಪಷ್ಟವಾಗಿ ನನ್ನ ಸಾವಿಗೆ ಗೃಹ ಸಚಿವ ಕೆ ಜೆ ಜಾರ್ಜ್ ಕಾರಣ ಎಂದು ಹೇಳಿದ್ದರೂ ಜಾರ್ಜ್ ಅವರು ಕೋರ್ಟ್ ತೀರ್ಪು ಬಂದ ಮೇಲೆ 7 ತಿಂಗಳ ಬಳಿಕ ರಾಜೀನಾಮೆ ನೀಡಿದರು. ಸಂತೋಷ್ ಪಾಟೀಲ್ ವಾಟ್ಸಾಪ್ ಲ್ಲಿ ಹೇಳಿದ್ದಾರಷ್ಟೆ, ಅದು ಡೆತ್ ನೋಟ್ ಅಲ್ಲ, ತನಿಖೆ ಹಂತದಲ್ಲಿದೆ. ಯಾವುದೇ ಆಧಾರವಿಲ್ಲದಿದ್ದರೂ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ತನಿಖೆಯ ಹಂತದಲ್ಲಿಯೇ ರಾಜೀನಾಮೆ ನೀಡಿದ್ದಾರೆ ಎಂದರು.
Also read: ರಾಜೀನಾಮೆ ನಂತರವೂ ಕುಂದದ ಉತ್ಸಾಹ: ಹುಟ್ಟ ಹೋರಾಟಗಾರ ಈಶ್ವರಪ್ಪಗೆ ಮಠಾಧೀಶರ ಬೆಂಬಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post