ಹೊಸಪೇಟೆ: ದಾಸಶ್ರೇಷ್ಠರಲ್ಲಿ ಪ್ರಮುಖರಾದ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಎರಡು ದಿನಗಳ ಕಾಲ ನಡೆದ ಆರಾಧನೆಯ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮೊದಲ ದಿನ ನಡೆದ ಸಂಗೀತ ಮಹೋತ್ಸವದಲ್ಲಿ ಮೈಸೂರಿನ ಚಿತ್ಕಲಾ ಮತ್ತು ವತ್ಸಲ ಅವರಿಂದ ಹಾಡುಗಾರಿಕೆ ನೆರವೇರಿತು ವಯೊಲಿನ್’ನಲ್ಲಿ ವಿದ್ವಾನ್ ಜನಾರ್ಧನ ಮತ್ತು ಮೃದಂಗದಲ್ಲಿ ವಿದ್ವಾನ್ ಶ್ರೀನಾಥ್ ಭಟ್ ಸಾಥ್ ನೀಡಿದರು.
ಎರಡನೆಯ ದಿನ ನಡೆದ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಕೆ.ವಿ. ಕೃಷ್ಣಪ್ರಸಾದ್ ರವರ ಹಾಡುಗಾರಿಕೆ ನೆರವೇರಿತು. ಅವರಿಗೆ ಮೃದಂಗದಲ್ಲಿ ವಿದ್ವಾನ್ ಶ್ರೀನಾಥ ಭಟ್, ವಯೊಲಿನ್’ನಲ್ಲಿ ವಿದ್ವಾನ್ ವಿಶ್ವವಿಜಿತ್ ಹಾಗೂ ತೇಜಸ್ ಅವರು ತಾನ್ ಪುರ್’ನಲ್ಲಿ ಸಾಥ್ ನೀಡಿದರು.
ಹೊಸಪೇಟೆ ನಗರದಲ್ಲಿ 1954 ರಲ್ಲಿ ಸ್ಥಾಪಿಸಿ ನಿರಂತರವಾಗಿ ಶ್ರೀ ಪುರಂದರ ದಾಸರ ಆರಾಧನೆ ಮತ್ತು ಸಂಗೀತ ಮಹೋತ್ಸವ ನೆರವೇರಿಸುತ್ತಿರುವ ಶ್ರೀ ಪುರಂದರದಾಸರ ಸೇವಾ ಮಂಡಳಿ ಯವರು ನಗರದ ಸಂಗೀತ ಆರಾಧಕರಿಗೆ, ಪ್ರೇಮಿಗಳಿಗೆ ಉಲ್ಲಾಸ ನೀಡಿ ಶ್ರೀ ಪುರಂದರದಾಸ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ಮಾಹಿತಿ: ಮುರಳಿಧರ್ ನಾಡಿಗೇರ್, ಹೊಸಪೇಟೆ
Discussion about this post