ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ/ಶಿವಮೊಗ್ಗ |
ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಎಂದರೆ ಕೇವಲ ಕೃಷಿ ಕುರಿತಾಗಿ ಮಾತ್ರವಲ್ಲ ವಿಶೇಷ ಖಾದ್ಯಗಳು ಕುರಿತಾಗಿಯೂ ಸಹ ತಿಳಿಸಿಕೊಡುತ್ತಾರೆ ಎಂಬುದು ಸಾಬೀತಾಗಿದೆ.
ಶಿಕಾರಿಪುರ #Shikaripura ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಸಗುಲ್ಲ #Rasagulla ಮತ್ತು ರಸಮಲೈ #Rasmalai ಎಂದರೆ ಏನು, ಹೇಗೆ ಮಾಡುವುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು.
Also Read>> ಸ್ಟಾರ್ಟ್ ಅಪ್ | ಶಿವಮೊಗ್ಗದಿಂದಲೇ ನಡೆದ FPO ವ್ಯವಹಾರವೆಷ್ಟು? ಕೇಂದ್ರ ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ
ರಸಗುಲ್ಲ ತಯಾರಿಕೆ ಹೇಗೆ?
ಒಂದು ಹಾಲಿನ ಮೌಲ್ಯವರ್ಧನೆಯಾಗಿದೆ. ಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು. ತದನಂತರ ಹಾಲು ಒಡೆಯುತ್ತದೆ.

ರಸಗುಲ್ಲ ಪ್ರೋಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ್’ಗಳಿಂದ ತುಂಬಿದೆ. ಇದರ ಮೌಲ್ಯ ಒಂದು ಕೆಜಿಗೆ ಸುಮಾರು 150 ರೂಪಾಯಿಗಳು ಹಾಗೂ 1 ಲೀಟರ್ ಹಾಲಿಗೆ 200 ಗ್ರಾಂ ರಸಗುಲ್ಲ ತಯಾರಿಸಬಹುದು ಎಂಬುದನ್ನು ನಮಗೆ ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ರಸಮಲೈ ತಯಾರಿಕೆ ಹೇಗೆ?
ಒಂದು ಹಾಲಿನ ಮೌಲ್ಯವರ್ಧನೆಯಾಗಿದೆಇದನ್ನುತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು. ತದನಂತರ ಹಾಲು ಒಡೆಯುತ್ತದೆ ಅದನ್ನು ಸೋಸಿ ನೀರಿನ ಅಂಶ ಹೋಗುವವರೆಗೂ ಕಾಟನ್ ಬಟ್ಟೆಯಿಂದ ಹಿಂಡಬೇಕು.
ಹಾಗೆಯೇ ಒಂದು ಪಾತ್ರೆಯಲ್ಲಿ ಹಾಲಿಗೆ ಬಾದಾಮ್ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು. ಅದಕ್ಕೆ ಚಪ್ಪಟೆ ಆಕಾರದ ರಸಮಲೈಯನ್ನು ಹಾಕಬೇಕು. ಇದು ಪ್ರೋಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ್’ಗಳಿಂದ ತುಂಬಿದೆ ಹಾಗೂ ಇದರ ಮೌಲ್ಯ ಒಂದು ಕೆಜಿಗೆ ಸುಮಾರು 200 ರೂಪಾಯಿಗಳು ಹಾಗೂ 1 ಲೀಟರ್ ಹಾಲಿಗೆ 200 ಗ್ರಾಂ ರಸಮಲೈ ತಯಾರಿಸಬಹುದು ಎಂಬುದನ್ನು ನಮಗೆ ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ನೆಲವಾಗಿಲಿನ ಜನರು ಈ ಎರಡು ಪದಾರ್ಥವನ್ನು ಮೆಚ್ಚಿದರು. ಮಹಿಳೆಯರು ಮನೆಯಲ್ಲೇ ಮಾಡಿ ವಾಣಿಜ್ಯೋದ್ಯಮಿಯಾಗಬಹುದು. ಇದು ಲಾಭದಾಯಕವಾಗಿದೆ ಮತ್ತು ಸ್ವಚ್ಛತೆಯಿಂದ ಮಾಡುವುದರಿಂದ ಆರೋಗ್ಯಕರವಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





Discussion about this post