ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಿಪ್ಪನ್’ಪೇಟೆ: ಭಾರೀ ಮಳೆಯ ಪರಿಣಾಮವಾಗಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಬಚಾವಾದ ಘಟನೆ ವಡಗೆರೆ-ನೆವಟೂರು ಮುಖ್ಯರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.
ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಧಾರಾಕಾವಾಗಿ ಮಳೆ ಸುರಿಯುತ್ತಿದೆ. ಇಂದು ಭಾರಿ ಮಳೆ ಗಾಳಿಗೆ ಒಂದೇ ರಸ್ತೆಯ 2 ಪ್ರತ್ಯೇಕ ಘಟನೆಗಳಲ್ಲಿ ರಿಪ್ಪನಪೇಟೆ ಸಮೀಪದ ವಡಗೆರೆ ಮತ್ತು ನೆವಟೂರು ಮುಖ್ಯ ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ.
ನೆವಟೂರು ಸಮೀಪದಲ್ಲಿ ವಾಹನ ಬರುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮರ ಬಿದ್ದಿದೆ. ವಾಹನ ಸವಾರನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೇ ರೀತಿ ವಡಗೆರೆಯಲ್ಲಿ ಲೈನ್ ಮೇಲೆ ಮರ ಬಿದ್ದು ಶಾರ್ಟ್ ಸರ್ಕ್ಯೂಟ್ ಆಗಿದೆ. ಇಲ್ಲೂ ಸಹ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Get In Touch With Us info@kalpa.news Whatsapp: 9481252093
Discussion about this post