ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಮಗುವಿನ ಚರ್ಮ ಕಪ್ಪಾಗಿದೆ ಎಂಬ ಕಾರಣಕ್ಕಾಗಿ ತನ್ನ 18 ತಿಂಗಳ ಮಗಳನ್ನೇ ವಿಷಪೂರಿತ ಪ್ರಸಾದ ತಿನ್ನಿಸಿ ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ.
ಮೃತ ಮಗುವನ್ನು ಅಕ್ಷಯಾ, ಪಾಪಿ ತಂದೆಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೈದರಾಬಾದ್’ನ ಕೆರಂಪುಡಿ ಎಂಬಲ್ಲಿ ನಡೆದಿದೆ.

ಆದರೆ, ಅನುಮಾನಗೊಂಡ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಮಹೇಶನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ ನಂತರ ಸತ್ಯ ಹೊರಬಂದಿದೆ.

Also read: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕಾರಿಗೆ ವ್ಯಕ್ತಿ ಬಲಿ | ಇಷ್ಟಕ್ಕೂ ನಡೆದಿದ್ದೇನು?
ಶ್ರಾವಣಿ ಅವರ ಹೇಳಿಕೆಯ ಪ್ರಕಾರ, ಮಾರ್ಚ್ 31 ರಂದು 18 ತಿಂಗಳ ಮಗುವಿನ ಮೂಗು ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದೆ.

ಕೊಲೆಯಾದ ಮಗುವಿನ ತಾಯಿ ತನ್ನ ಪತಿಯಿಂದ ದೌರ್ಜನ್ಯದ ವಿವರವನ್ನು ಸಂಬAಧಿಕರಿಗೆ ಬಹಿರಂಗಪಡಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶ್ರಾವಣಿ ಪ್ರಕಾರ, ಮಹೇಶ್ ತಮ್ಮ ಮಗಳನ್ನು ಗೋಡೆಗೆ ಎಸೆದು, ಮತ್ತೊಂದು ಬಾರಿ ನೀರಿನ ತೊಟ್ಟಿಯಲ್ಲಿ ಮುಳುಗಿಸಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post