No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Friday, March 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ನಾನು ಕೊಂಚ ಸಿಡುಕನಿರಬಹುದು, ಆದರೆ ಕೆಡುಕನಲ್ಲ: ಮತದಾರರಿಗೆ ಬೈಂದೂರು ಶಾಸಕರ ಮನದಾಳದ ಪತ್ರ

ಶಾಸಕರಾಗಿ ಸುಕುಮಾರ ಶೆಟ್ಟರ ವರ್ಷ ಮೂರು, ಸಾಧನೆ ನೂರಾರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 16, 2021
in ಉಡುಪಿ
0
ಸಭ್ಯ, ಜನಪರ, ಮಾನವೀಯ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತೇಜೋವಧೆಗೆ ಯತ್ನ: ಇಷ್ಟಕ್ಕೂ ನಡೆದಿದ್ದೇನು?

File Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಉಡುಪಿ ಜಿಲ್ಲೆಗೆ ಸೇರಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕರಾವಳಿಯ ಹೆಮ್ಮೆಯ ಪ್ರದೇಶ ಬೈಂದೂರು. ಪ್ರಾಕೃತಿಕ ಸೌಂದರ್ಯವನ್ನು ಹೊದ್ದುಕೊಂಡಿರುವ ಇಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ದಿಯ ಪರ್ವವೇ ಸಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಕನಸುಗಾರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ.

ಹೌದು… ಜನಾನುರಾಗಿ ಗುರುತಿಸಿಕೊಂಡಿರುವ ಅಭಿವೃದ್ದಿಯ ಹರಿಹಾರ ಸುಕುಮಾರ ಶೆಟ್ಟರು ಶಾಸಕರಾಗಿ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗೆ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ಅದರ ಯಥಾವತ್ ಹೀಗಿದೆ.
ಸಾಧನೆ ನೂರಾರು
ಭಗವತಿ ಕೊಲ್ಲೂರು ಮೂಕಾಂಬಿಕೆಯ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದಾಗಿ 23 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಿ ಮೂರು ವರ್ಷ.

ಮೂರು ವರ್ಷಗಳ ಹಿಂದಿನ ಈ ದಿನ ನೆನಪಿದೆ. ಆ ದಿನ ಸಂಭ್ರಮಿಸಲು ಅದರ ಹಿಂದಿನ ನಿಮ್ಮೆಲ್ಲರ ಪರಿಶ್ರಮ ಕೂಡ ಸ್ಪಷ್ಟವಾಗಿ ನೆನಪಿದೆ. ನವ ಬೈಂದೂರು ನಿರ್ಮಾಣದ ಕನಸನ್ನು ಬಿತ್ತರಿಸಿ, ಕುಡಿಯುವ ನೀರಿನ ಸಮಸ್ಯೆ ಆದಿಯಾಗಿ ಬೈಂದೂರಿನ ಅಮೂಲಾಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಹೊರಟು ನಿಂತಾಗ ಅನೇಕ ಸವಾಲುಗಳು ಸಾಮಾನ್ಯವಾಗಿದ್ದವು. ಆದರೆ ಸ್ವತಃ ನೀವುಗಳೇ ಅಭ್ಯರ್ಥಿ ಎಂಬಂತಹ ಉತ್ಸಾಹದೊಂದಿಗೆ, ನನ್ನನ್ನು ಗೆಲ್ಲಿಸಿದರೆ ಪ್ರಾಮಾಣಿಕವಾಗಿ ಸಮಗ್ರ ಬೈಂದೂರಿನ ಅಭಿವೃದ್ಧಿ ಆಗುತ್ತದೆ ಎಂಬ ಭರವಸೆಯೊಂದಿಗೆ ಹಗಲು ಇರುಳು ಎನ್ನದೆ ಹೋರಾಟ ನೀಡಿದ್ದೀರಿ. ವಿರೋಧಿಗಳ ಟೀಕೆಗಳಿಗೆ ಗಟ್ಟಿ ಧ್ವನಿಯಲ್ಲಿ ಉತ್ತರ ನೀಡಿದ್ದಿರಿ.

ನಿಮ್ಮೆಲ್ಲರ ಕನಸಿನಂತ, ನಿಮ್ಮಗಳ ಹೋರಾಟದಿಂದ ಬಹುದೊಡ್ಡ ಅಂತರದ ಗೆಲುವನ್ನು ಸಂಪಾದಿಸಿ ಕೊಟ್ಟಿದ್ದೀರಿ. ಚುನಾವಣೆಯ ಮಾತುಗಳನ್ನು ಕೇವಲ ಅತ್ತಿಗೆ ಸೀಮಿತವಾಗಿರಿಸದೇ ಚಲಾವಣೆಗೂ ತರುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ, ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಯಾವತ್ತೂ ಮುಲಾಜಿಗೆ ಒಳಗಾಗದೇ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದರಾದ ಬಿ.ವೈ. ರಾಘವೇಂದ್ರ ಅವರ ಸಂಪೂರ್ಣ ಸಹಕಾರದಿಂದಾಗಿ ಬೈಂದೂರಿಗೆ ಸಾವಿರದ ಎಂಟುನೂರು ಕೋಟಿಗೂ ಮಿಕ್ಕಿ ಅನುದಾನ ತರುವಲ್ಲಿ ಶ್ರಮಿಸಿದ್ದೇನೆ.

ನನ್ನ ಗೆಲುವಿಗೆ ಶ್ರಮಿಸಿದ ತೆರೆಯ ಮರೆಯ ನೀವುಗಳು ಸೇರಿ, ಈಗ ಸಂಪರ್ಕದಲ್ಲಿರುವ ನಿಮ್ಮೆಲ್ಲರ ಶ್ರಮವನ್ನು ಜೀವನಪರ್ಯತ ಮರೆಯಲು ಸಾಧ್ಯವಿಲ್ಲ ಬಂಧುಗಳೇ. ಹಾಗಂತ I am not perfect! ಕೊಂಚ ಸಿಡುಕನಿರಬಹುದು. ಆದರೆ ಕೆಡುಕನಲ್ಲ, ಭ್ರಷ್ಟನಲ್ಲ. ನನಗಾಗಿ ಒಂದಿನಿತು ಕೆಲಸವನ್ನು ಮಾಡಿಸಿಕೊಂಡವನಲ್ಲ, ನನ್ನ ವೈಯಕ್ತಿಕ ಕಾರಣಕ್ಕೆ ಅಧಿಕಾರಗಳ ಜೊತೆ ಮಾತನಾಡಿದನಲ್ಲ, ನನ್ನವರೆಂಬ ನಿಮಗಾಗಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ದುಂಬಾಲು ಬಿದ್ದು ಅನುದಾನ ತಂದಿದ್ದೇನೆ.
ಅಭಿವೃದ್ಧಿ ಎಂದರೆ ಬೇರೆ ಕ್ಷೇತ್ರಗಳಲ್ಲಿ ಕೈಗಾರಿಕೆ, ಉದ್ಯೋಗ ನಿರ್ಮಾಣ. ಅದೇ ನಿಜ ಆದರೆ ನಮ್ಮ ಕ್ಷೇತ್ರದ ಹಲವಷ್ಟು ಕಡೆ ಮೂಲಭೂತ ಸೌಕರ್ಯಗಳು ಇರಲಿಲ್ಲ. ಅದಕ್ಕಾಗಿ ಶ್ರಮಿಸುತ್ತ ಮೂರು ವರ್ಷ ಸವೆದಿದೆ. ಕೊಟ್ಟ ಮಾತಿನಂತೆ ಸಮಗ್ರ ಬೈಂದೂರಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಕನಸುಗಳ ಪಟ್ಟಿಯಲ್ಲಿ ಬೈಂದೂರಿಗೆ ವಿಮಾನ ನಿಲ್ದಾಣ, ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ, ಇವೆಲ್ಲ ಇದೆಯಾದರೂ ಲೋಕಕಂಟದ ವ್ಯಾದಿ ಅಭಿವೃದ್ಧಿ ಕುಂಠಿತಗೊಳಿಸಿದ್ದು ಸತ್ಯ.

ಇದು ಗೆಲುವನ್ನು ಸಂಭ್ರಮಿಸುವ ಸಮಯವಲ್ಲ. ಕೋವಿಡ್‌ನ್ನು ಗೆಲ್ಲುವಲ್ಲಿ ಶ್ರಮಿಸಬೇಕಾದ ಸಮಯ. ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಅದರ ಬಗ್ಗೆ ನಮಗೂ ಕಾಳಜಿಯಿದೆ, ಹಾಗಾಗಿ ಬೈಂದೂರಿನಲ್ಲಿ ಶೀಘ್ರವಾಗಿ ಆಕ್ಸಿಜನ್ ಘಟಕ ಆರಂಭ ಆಗಲಿದೆ. ನೀವೆಲ್ಲರೂ ಧೈರ್ಯದಿಂದ ಇರಿ. ಬೈಂದೂರು ಭವಿಷ್ಯತ್ ಬದಲಾಗಿಸುವ ಪಣತೊಟ್ಟ ನನ್ನ ಜೊತೆಗಿದ್ದು ಬೃಹತ್ ಅಂತರದ ಗೆಲುವನ್ನು ಸಂಪಾದಿಸಿ ಕೊಟ್ಟ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಸಂಕಷ್ಟವನ್ನು ನೀವುಗಳು ನಿಶ್ಚಿತವಾಗಿ ಗೆಲ್ಲುವಲ್ಲಿ ನಾನು ನಿಮ್ಮ ಜೊತೆಗಿರಲಿದ್ದೇನೆ. ತಮಗೆಲ್ಲರಿಗೂ ಕೊಲ್ಲೂರು ಮೂಕಾಂಬಿಕೆಯು ರಕ್ಷಣೆಯನ್ನು ನೀಡಿ, ಸುಖ-ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: B Y RaghavendraByndoor MLA Sukumara ShettyKannada News WebsiteKaravaliLatest News KannadaUdupiಉಡುಪಿಕರಾವಳಿಬಿ.ಎಂ. ಸುಕುಮಾರ ಶೆಟ್ಟಿಬಿ.ವೈ. ರಾಘವೇಂದ್ರಬೈಂದೂರುಶಿವಮೊಗ್ಗ
Share209Tweet123Send
Previous Post

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ: ಸಚಿವ ಬಿ.ಸಿ.ಪಾಟೀಲ್

Next Post

ಸೋಂಕಿನ ಅಪಾಯ ಲೆಕ್ಕಿಸದೇ, ತಮ್ಮ ಜೀವ ಪಣಕ್ಕಿಟ್ಟು ಎರಡು ಜೀವ ಉಳಿಸಿದ ಸಾಗರದ ವೈದ್ಯರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸೋಂಕಿನ ಅಪಾಯ ಲೆಕ್ಕಿಸದೇ, ತಮ್ಮ ಜೀವ ಪಣಕ್ಕಿಟ್ಟು ಎರಡು ಜೀವ ಉಳಿಸಿದ ಸಾಗರದ ವೈದ್ಯರು

ಸೋಂಕಿನ ಅಪಾಯ ಲೆಕ್ಕಿಸದೇ, ತಮ್ಮ ಜೀವ ಪಣಕ್ಕಿಟ್ಟು ಎರಡು ಜೀವ ಉಳಿಸಿದ ಸಾಗರದ ವೈದ್ಯರು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

March 20, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು-ವಿಜಯಪುರ, ಮೈಸೂರು-ಬಾಗಲಕೋಟೆ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

March 20, 2026
Mysore – Shivamogga Express Big Update on this Date | Must Read

ಮಂಗಳೂರು-ಸುಬ್ರಹ್ಮಣ್ಯ ರೈಲು ರದ್ದು | ಯಶವಂತಪುರ-ಕಾರವಾರ ಸೇರಿ 7 ರೈಲುಗಳ ಬಿಗ್ ಅಪ್ಡೇಟ್

March 20, 2026
ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

March 20, 2026
ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL