ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಬಂಧ ಯುದ್ಧದಂತಹ ವಾತಾವರಣಕ್ಕೆ ತಿರುಗುತ್ತಿರುವ ಬೆನ್ನಲ್ಲೆ, ನಾವು ಭಾರತದ ಮೇಲೆ ಒಂದು ಪರಮಾಣ ಬಾಂಬ್ ಹಾಕಿದರೆ, ಭಾರತ ನಮ್ಮ ಮೇಲೆ 20 ಪರಮಾಣ ಬಾಂಬ್ ಹಾಕಿ ಪಾಕಿಸ್ಥಾನವನ್ನೆ ನಾಶ ಮಾಡಲಿದೆ ಎಂದು ಪಾಕ್ ಮಾಜಿ ಪ್ರಧಾನಿ ಪರ್ವೇಜ್ ಮುಷ್ರಫ್ ಹೇಳಿದ್ದಾರೆ.
ಅಬುದಾಬಿಯಲ್ಲಿ ಮಾತನಾಡಿರುವ ಅವರು, ಭಾರತ ಪಾಕಿಸ್ಥಾನದ ಮೇಲೆ 20 ಪರಮಾಣು ಬಾಂಬ್ ದಾಳಿ ನಡೆಸುವುದಿಲ್ಲ. ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧ ಮತ್ತೊಮ್ಮೆ ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದಿದ್ದಾರೆ.
ಭಾರತದ 20 ಪರಮಾಣು ಬಾಂಬ್ ದಾಳಿಗಳಿಂದ ಪಾಕಿಸ್ಥಾನವನ್ನು ರಕ್ಷಿಸಲು ಬಯಸುವುದಾದರೆ, ಮೊದಲಿದೆ ಪಾಕಿಸ್ಥಾನ ಭಾರತದ ಮೇಲೆ 50 ಪರಮಾಣು ಬಾಂಬ್ ದಾಳಿ ನಡೆಸಬೇಕು. ಭಾರತ ಪಾಕಿಸ್ಥಾನದ ಮೇಲೆ 20 ಪರಮಾಣು ಬಾಂಬ್ ದಾಳಿ ನಡೆಸುವುದಿಲ್ಲ. ನೀವು ಭಾರತದ ಮೇಲೆ 50 ಪರಮಾಣು ಬಾಂಬ್ ದಾಳಿ ನಡೆಸಲು ಸಿದ್ದರಿದ್ದೀರಾ? ಎಂದು ಅವರು ಪಾಕಿಸ್ಥಾನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Discussion about this post