ನವದೆಹಲಿ: ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಜ್ ಅವರಿಗೆ ಪಾಕಿಸ್ಥಾನ ಹಿತವಾಗಿದ್ದರೆ. ಅಲ್ಲಿಗೆ ತೆರಳಲು. ನಾವು ಬೇಕಾದರೆ ಅವರಿಗೆ ಪಾಕ್ಗೆ ತೆರಳಲು ಒನ್ ವೇ ಟಿಕೇಟ್ ಕೊಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪಾಕ್ ಸರ್ವಾಧಿಕಾರಿಯಾಗಿದ್ದ ಪವೇಜ್ ಮುಷರಫ್ ಅವರ ನಿಲುವುಗಳು ಸರಿಯಾಗಿತ್ತು. ಅವರಂತೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬಯಸುತ್ತಾರೆ ಎಂಬ ವಿವಾದಾತ್ಮಕ ನಿಲುವನ್ನು ಹೊರಹಾಕಿರುವ ಹಿನ್ನೆಲೆಯಲ್ಲಿ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸೈಫುದ್ದೀನ್ ಅವರ ಪುತ್ರಿಯ ಅಪಹರಣವಾದಾಗ ಆಕೆಯನ್ನು ರಕ್ಷಿಸಲು ಬಳಸಿದ್ದ ಭಾರತ ಸರ್ಕಾರದ ಅಧಿಕಾರಗಳನ್ನು. ಬದಲಾಗಿ, ಅಂದು ಯಾವುದೇ ರಾಷ್ಟ್ರ ಸಹಾಯಕ್ಕೆ ಬರಲಿಲ್ಲ ಎಂದು ಹೇಳೆಯ ವಿಚಾರವನ್ನು ಪ್ರಸ್ತಾಪಿಸಿದರು.
ಭಾರತದಲ್ಲಿ ಯಾರೇ ಇರಬೇಕಾದರೂ ಸಂವಿಧಾನಕ್ಕೆ ಬದ್ದರಾಗಿ ಇರಬೇಕಾಗುತ್ತದೆ. ಇದಕ್ಕೆ ಒಪ್ಪದೇ, ಸೋಜ್ ಅವರಿಗೆ ಪಾಕಿಸ್ಥಾನವೇ ಹಿತವಾಗಿದ್ದರೆ ಅವರು ಅಲ್ಲಿಗೆ ತೆರಳಲಿ. ನಾವು ಅವರಿಗೆ ಒನ್ ವೇ ಟಿಕೇಟ್ ಕೊಡಿಸುತ್ತೇವೆ ಎಂದು ಕಟಕಿಯಾಡಿದ್ದಾರೆ.
Discussion about this post