ಕೊಪ್ಪಳ: ಜಿಲ್ಲೆಯ ಏಕೈಕ ಜಲಪಾತ ಕಬ್ಬರಗಿ ಜಲಪಾತ. ಇದು ಕುಷ್ಟಗಿ ತಾಲೂಕಿನ ಹನುಮಸಾಗರ ಹತ್ತಿರವಿರುವ ಕಬ್ಬರಗಿ ಗ್ರಾಮಕ್ಕೆ ಹತ್ತಿರವಿರುವುದರಿಂದ ಕಬ್ಬರಗಿ ಜಲಪಾತ ಎಂದು ಕರೆಯುತ್ತಾರೆ. ಇಲ್ಲಿಯ ಗ್ರಾಮಸ್ಥರು ಕಪಿಲೇಶ್ವರ ಕಪಿಲಪ್ಪತೀರ್ಥ ಎಂತಲೂ ಕರೆಯುತ್ತಾರೆ.
ಈ ಜಲಪಾತಕ್ಕೆ ಬಂದ ಪ್ರವಾಸಿಗರು ಈ ಕಬ್ಬರಗಿ ಜಲಪಾತದ ಹತ್ತಿರ ಅಭಿನವ ತಿರುಪತಿ ಎಂದು ಹೆಸರಾದ ಹನುಮಸಾಗರದ ಬೆಟ್ಟದ ಮೇಲೆ ನೆಲಸಿರುವ ಶ್ರೀವೇಂಕಟರಮಣ ದೇವರ ದರ್ಶನ ಮತ್ತು ಚಂದಾಲಿಂಗೇಶ್ವರ ದರ್ಶನ ಮಾಡಿಕೊಂಡು ಹನುಮಸಾಗರದಿಂದ ಕಪಿಲತೀರ್ಥ ಕಬ್ಬರಗಿ ಜಲಪಾತದ ಕಡೆಗೆ ವಾಹನದ ಮೂಲಕ ಅಲ್ಲಿಗೆ ಹೋಗಬೇಕು. ಅಲ್ಲಿ ಪ್ರಕೃತಿ ವಿಸ್ಮಯ ನೋಡಿದರೆ ಬೆಟ್ಟಗುಡ್ಡಗಳ ಸುಂದರ ಪ್ರಕೃತಿಯ ಮಧ್ಯೆ ಮಳೆಗಾಲದಲ್ಲಿ ಸೃಷ್ಠಿಯಾಗುತ್ತದೆ. ಇದು ಈ ಭಾಗದ ಒಂದು ರೋಮಾಂಚಕ ‘ದೂದ್ ಸಾಗರ’, ಇದೇ ನಮ್ಮ ಹೆಮ್ಮೆಯ ಜಲಪಾತ.
ಈ ಜಲಪಾತದ ಬಗ್ಗೆ ಇಲ್ಲಿ ಪ್ರವಾಸಿಗರು ಮತ್ತು ಕೊಪ್ಪಳ ನಗರದ ಶ್ರೀ ಗಿರೀಶ್ ಕುಲಕರ್ಣಿಯವರು ತಮ್ಮ ಅನುಭವವನ್ನು ಕಲ್ಪ ನ್ಯೂಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ: ಈ ಜಲಪಾತದ ನೀರಿನಲ್ಲಿ ಮಿಂದು, ಪ್ರಕೃತಿಯ ಮಡಿಲಲ್ಲಿ ಊಟ ಮಾಡಿ ಎಂಜಾಯ್ ಮಾಡಲಿ. ಅದರೆ, ಕೆಲವು ಯುವಕರು ತಮ್ಮ ಜೀವದ ಹಂಗು ತೊರೆದು ಜಲಪಾತದ ಮೇಲೆ ಒಂದೇ ಒಂದು ಸೆಲ್ಫಿ ಪೋಟೋಕ್ಕಾಗಿ ತಮ್ಮ ಜೀವವನ್ನು ಪಣಕ್ಕಿವುದು ಹುಚ್ಚುತನ. ಒಂದು ವೇಳೆ ಮೇಲಿಂದ ಜಾರಿ ಬಿದ್ದರೆ ಒಂದು ಸೆಲ್ಫಿಗೆ ತಿನ್ನುವ ಕುಲ್ಪಿಗಿಂತಲೂ ಕಡೆಯಾಗಿ ತಮ್ಮ ಜೀವ ಹಾಗೂ ತಮ್ಮನ್ನು ನಂಬಿದವರ ಜೀವನವನ್ನು ಹಾಳು ಮಾಡಿಕೊಳ್ಳುವ ಮನಃಸ್ಥಿತಿಯಲ್ಲಿರುವ ಯುವಕರನ್ನು ನೋಡಿದರೆ ಬೇಸರವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಭದ್ರತೆ ಕಲ್ಪಿಸಬೇಕು ಎಂದರು.
ಕೊಪ್ಪಳ, ಗಂಗಾವತಿ ಮತ್ತು ಹೊಸಪೇಟೆ ಕಡೆಯಿಂದ ಹೆಚ್ಚು ಹೆಚ್ಚು ಪ್ರವಾಸಿಗರು ಬರುವ ಈ ಸ್ಥಳಕ್ಕೆ ಕೆಎಸ್’ಆರ್’ಟಿಸಿ ಬಸ್ ವ್ಯವಸ್ಥೆ ಸಹ ಇದೆ. ಬನ್ನಿ ಜೋಗ ಜಲಪಾತ ನೋಡಿ ಆನಂದ ಪಟ್ಟ ಹಾಗೆ ಈ ನಮ್ಮ ಕಬ್ಬರಿಗಿ ಜಲಪಾತ ನೋಡಿ ಆನಂದಿಸಬಹುದು.
ವಿಶೇಷ ವರದಿ: ಮುರಳೀಧರ್ ನಾಡಿಗೇರ್, ಹೊಸಪೇಟೆ
Discussion about this post