ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಾಗಲಕೋಟೆ: ಶಾಸ್ತ್ರ ಚೂಡಾಮಣಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಅವರ ಅಮೂಲ್ಯ ಕೃತಿರತ್ನ ಇಳೆಯ ಬೆರಗು ಕೃತಿ ಲೋಕಾರ್ಪಣೆಗೊಂಡಿದೆ.

ಬಾಗಲಕೋಟೆಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಗೆಣ್ಣೂರ ಅವರು ಪ್ರೊ.ಮಲ್ಲೇಶ್ವರಂ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಸಾಹಿತಿಗಳು, ಸಂಸ್ಕೃತಿ ಚಿಂತಕರು, ನ್ಯಾಯವಾದಿಗಳು ಆದ ಡಾ.ಕೆ.ಜಿ. ಲಕ್ಷ್ಮೀನಾರಾಣಪ್ಪ, ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ ಕೃಷ್ಣ, ಶಿಕ್ಷಣ ತಜ್ಞ ಡಾ.ಕೆ.ಈ. ರಾಧಾಕೃಷ್ಣ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















