ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಮಂಗಳೂರು |
ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ಹಾಗೂ ಈಶಾನ್ಯ ರೈಲ್ವೆಯ ಕರ್ನಾಟಕ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ರೈಲುಗಳ ಕುರಿತಾಗಿ ರೈಲ್ವೆ ಇಲಾಖೆ ಮಹತ್ವದ ಮಾಹಿತಿ ನೀಡಿದೆ.
ಈ ರೈಲುಗಳ ಭಾಗಶಃ ರದ್ದತಿ
ಸೇಲಂ ವಿಭಾಗದಲ್ಲಿ ಜೋಲಾರ್’ಪೇಟೆ – ದೊಡ್ಡಂಪಟ್ಟಿ ವಿಭಾಗದ ನಡುವೆ ಸ್ವಯಂಚಾಲಿತ ಸಿಗ್ನಲಿಂಗ್ ಕಾರ್ಯಾರಂಭ ಮಾಡುವುದರಿಂದ ದಕ್ಷಿಣ ರೈಲ್ವೆ ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಗೆ ಸೂಚನೆ ನೀಡಿದೆ.
1) 66550 ಸಂಖ್ಯೆಯ ಕೆಎಸ್’ಆರ್ #Bengaluru ಬೆಂಗಳೂರು – ಜೋಲಾರ್’ಪೇಟೆ ದೈನಂದಿನ ಮೆಮುವನ್ನು 2026ರ ಮಾರ್ಚ್ 24 ರಂದು ಸೋಮನಾಯಕನಪಟ್ಟಿ ಮತ್ತು ಜೋಲಾರ್’ಪೇಟೆ ಜಂಕ್ಷನ್ ನಡುವೆ ಭಾಗಶಃ ರದ್ದುಪಡಿಸಲಾಗುವುದು. ರೈಲು ಜೋಲಾರ್’ಪೇಟೆ ಜಂಕ್ಷನ್ ಬದಲಿಗೆ ಸೋಮನಾಯಕನಪಟ್ಟಿಯಲ್ಲಿ ಕೊನೆಗೊಳ್ಳಲಿದೆ.
2) 66549 ಸಂಖ್ಯೆಯ ಜೋಲಾರ್’ಪೇಟೆ – ಕೆಎಸ್’ಆರ್ ಬೆಂಗಳೂರು ದೈನಂದಿನ ಮೆಮು 2026ರ ಮಾರ್ಚ್ 24 ರಂದು ಜೋಲಾರ್’ಪೇಟೆ ಜಂಕ್ಷನ್ ಬದಲಿಗೆ ಸೋಮನಾಯಕನಪಟ್ಟಿಯಿಂದ ಹೊರಡಲಿದೆ. ಜೋಲಾರ್’ಪೇಟೆ ಜಂಕ್ಷನ್ ಮತ್ತು ಸೋಮನಾಯಕನಪಟ್ಟಿ ನಡುವೆ ಭಾಗಶಃ ರದ್ದಾಗಲಿದೆ.
ಬಿ. ಮಂಗಳೂರು ಸೆಂಟ್ರಲ್’ನಲ್ಲಿ ಯಾರ್ಡ್ ಮರುಜೋಡಣೆ ಕಾರ್ಯ ಮತ್ತು ಹೊಸ ಸ್ಟೇಬಲ್ ಮಾರ್ಗಕ್ಕೆ ಸಂಪರ್ಕದಿಂದಾಗಿ ದಕ್ಷಿಣ ರೈಲ್ವೆ ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಗೆ ಸೂಚನೆ ನೀಡಿದೆ.
1) 56628 ಸಂಖ್ಯೆಯ ಸುಬ್ರಹ್ಮಣ್ಯ ರಸ್ತೆ – ಮಂಗಳೂರು #Mangalore ಸೆಂಟ್ರಲ್ ದೈನಂದಿನ ಪ್ಯಾಸೆಂಜರ್ ರೈಲು 2026ರ ಮಾರ್ಚ್ 28 ರಂದು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದಾಗಲಿದೆ. ರೈಲು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್’ನಲ್ಲಿ ಕೊನೆಗೊಳ್ಳಲಿದೆ.
2) 56625 ಸಂಖ್ಯೆಯ ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರಸ್ತೆ ದೈನಂದಿನ ಪ್ಯಾಸೆಂಜರ್ ರೈಲು 2026ರ ಮಾರ್ಚ್ 29ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್’ನಿಂದ ಹೊರಡುತ್ತದೆ ಮತ್ತು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಭಾಗಶಃ ರದ್ದಾಗಲಿದೆ.
ಈ ರೈಲುಗಳ ಭಾಗಶಃ ರದ್ದತಿ ಮತ್ತು ನಿಯಂತ್ರಣ
ಗುಂತಕಲ್ ವಿಭಾಗದ ತಿರುಪತಿ ಯಾರ್ಡ್’ನಲ್ಲಿ ಸೇತುವೆ ಸಂಖ್ಯೆ 154 ಅನ್ನು ಪೈಪ್ ಪ್ರಕಾರದಿಂದ ಬಾಕ್ಸ್ ಪ್ರಕಾರಕ್ಕೆ ಪರಿವರ್ತಿಸುವ ಸಂಚಾರ ನಿರ್ಬಂಧದಿಂದಾಗಿ ದಕ್ಷಿಣ ಮಧ್ಯ ರೈಲ್ವೆ ಈ ಕೆಳಗಿನ ರೈಲುಗಳ ಭಾಗಶಃ ರದ್ದತಿ ಮತ್ತು ನಿಯಂತ್ರಣವನ್ನು ಸೂಚಿಸಿದೆ.
ರೈಲುಗಳ ಭಾಗಶಃ ರದ್ದತಿ:
1) 22618 ಸಂಖ್ಯೆಯ ಬೆಂಗಳೂರು – ತಿರುಪತಿ ತ್ರೈ-ವಾರದ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಅನ್ನು ಚಂದ್ರಗಿರಿ ಮತ್ತು ತಿರುಪತಿ ನಡುವೆ 27.04.2026, 29.04.2026 ಮತ್ತು 02.05.2026 ರಂದು ಭಾಗಶಃ ರದ್ದುಗೊಳಿಸಲಾಗುವುದು. ರೈಲು ತಿರುಪತಿಯ ಬದಲಿಗೆ ಚಂದ್ರಗಿರಿಯಲ್ಲಿ ಕೊನೆಗೊಳ್ಳುತ್ತದೆ.
2) 22617 ಸಂಖ್ಯೆಯ ತಿರುಪತಿ – ಬೆಂಗಳೂರು ತ್ರೈ-ವಾರದ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಅನ್ನು 28.04.2026 ಮತ್ತು 01.05.2026 ರಂದು ತಿರುಪತಿ ಮತ್ತು 22617 ರ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ದಿನಾಂಕಗಳಲ್ಲಿ ರೈಲು ತಿರುಪತಿಯ ಬದಲಿಗೆ ಚಂದ್ರಗಿರಿಯಿAದ ಹೊರಡಲಿದೆ.
ಈ ರೈಲುಗಳ ನಿಯಂತ್ರಣ
1) 12890 ಸಂಖ್ಯೆಯ ಬೆಂಗಳೂರು – ಟಾಟಾನಗರ ವೀಕ್ಲಿ ಎಕ್ಸ್’ಪ್ರೆಸ್, 27.04.2026 ರಂದು ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
2) 12836 ಸಂಖ್ಯೆಯ ಬೆಂಗಳೂರು – ಹತಿಯಾ ದ್ವಿ-ವಾರ ಎಕ್ಸ್’ಪ್ರೆಸ್, 28.04.2026 ಮತ್ತು 30.04.2026 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಈ ರೈಲಿನ ಮಾರ್ಗ ಬದಲಾವಣೆ
ಈಶಾನ್ಯ ರೈಲ್ವೆಯ ಸೂಚನೆಯಂತೆ, ರೈಲು ಸಂಖ್ಯೆ 12592 ಯಶವಂತಪುರ-ಗೋರಖ್ಪುರ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್, 23.03.2026, 30.03.2026, 06.04.2026, 13.04.2026, 20.04.2026, 27.04.2026, 04.05.2026 ಮತ್ತು 11.05.2026 ರಂದು ಪ್ರಾರಂಭವಾಗಲಿದ್ದು, ಗೊಂಡಾ ಜಂಕ್ಷನ್, ಬಹ್ನಿರ್ ಮತ್ತು ಗೋರಖ್ಪುರ ಜಂಕ್ಷನ್ ಮೂಲಕ ಸಂಚರಿಸಲು ಮಾರ್ಗ ಬದಲಾಯಿಸಲಾಗುತ್ತದೆ. ಗೊಂಡಾ – ಗೋರಖ್ಪುರ ವಿಭಾಗದ ಮುಂಡೇವಾರ್ ಮತ್ತು ಚುರೆಬ್ ನಿಲ್ದಾಣಗಳ ನಡುವೆ ಹಳಿ ಯಂತ್ರದ ಕೆಲಸದಿಂದಾಗಿ ಈ ಬದಲಾವಣೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















