ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಗ್ಯಾಸ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ನಗರದಲ್ಲಿ ಬಳಕೆಯಾಗುವಷ್ಟೇ ಗ್ರಾಮೀಣ ಪ್ರದೇಶದಲ್ಲಿ ಬಳಸುತ್ತಿದ್ದಾರೆ. ಈ ಭಾಗದಲ್ಲಿ ಸೇವಾ ಕೇಂದ್ರ ತೆರೆಯುವುದರಿಂದ ಗ್ರಾಮೀಣ ಪ್ರದೇಶ ಗ್ಯಾಸ್ ಬಳಕೆದಾರರಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ನೂತನವಾಗಿ ಸರ್ಕಾರಿ ಸೌಮ್ಯದ ಭರತ್ ಗ್ಯಾಸ್ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹೊಗೆ ಮುಕ್ತಗ್ರಾಮಗಳನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಜ್ವಾಲ್ ಯೋಜನೆಯಂತಹ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಹಲವಾರು ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್ ವಿತರಿಸಿತ್ತು. ಇದನ್ನು ಬಳಕೆ ಮಾಡಿ ಮುಗಿದ ಸಿಲಿಂಡರ್ ಪುನಃ ತುಂಬಿಸಬೇಕಾದರೆ ನಗರದ ಗ್ಯಾಸ್ ಸೇವಾ ಕೇಂದ್ರಕ್ಕೆ ಹೋಗಬೇಕಿತ್ತು. ಈಗಾಗಲೇ ನಗರದಲ್ಲಿ ಇಂಡೇನ್ ಮತ್ತು ಎಚ್’ಪಿ ಗ್ಯಾಸ್ ಸೇವಾ ಕೇಂದ್ರಗಳ ಕಾರ್ಯ ನಿರ್ವಹಿಸುತ್ತಿದ್ದು ಭಾರತ್ ಗ್ಯಾಸ್ ಸೇವಾ ಕೇಂದ್ರವಿರಲಿಲ್ಲ. ಬೆಳಗೆರೆ ಗ್ರಾಮದ ಗೊಂಚಿಕಾರ್ ತಿಪ್ಪೇಸ್ವಾಮಿಯವರು ಜಿ.ಟಿ. ಭಾರತ್ ಗ್ಯಾಸ್ ಸೇವಾ ಕೇಂದ್ರವನ್ನು ಪ್ರಾರಂಭಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ಮತ್ತಷ್ಟು ಗ್ಯಾಸ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ ಎಂದರು.
ಜಿ.ಟಿ. ಭಾರತ್ ಗ್ಯಾಸ್ ಸೇವಾ ಕೇಂದ್ರದ ಮಾಲೀಕರಾದ ಜಿ.ಟಿ. ರುದ್ರಮುನಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಬಳಕೆದಾರರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಗ್ಯಾಸ್ ಖಾಲಿಯಾದಾಗ ನಗರಕ್ಕೆ ಹೋಗಬೇಕಿತ್ತು. ಗ್ಯಾಸ್ ಬುಕ್ಕಿಂಗ್ ಮಾಡಿದ ಮೇಲೆ ಅವರು ತಂದು ಕೊಡುವವರೆಗು ಕಾಯಬೇಕಿತ್ತು. ಇದನ್ನರಿತು ಜಿಟಿ ಬ್ರದರ್ಸ ಸೇರಿ ಗ್ರಾಮೀಣ ಪ್ರದೇಶದ ಗ್ಯಾಸ್ ಬಳಕೆದಾರರಿಗೆ ಅನುಕೂಲವಾಗುವಂತೆ ಬೆಳಗೆರೆ ಗ್ರಾಮದಲ್ಲಿ ಜಿ.ಟಿ. ಭಾರತ್ ಗ್ಯಾಸ್ ಸೇವಾ ಕೇಂದ್ರವನ್ನು ಇಂದಿನಿಂದ ಆರಂಭಿಸಿದ್ದೇವೆ. ಗ್ಯಾಸ್ ಬಳಕೆದಾರರು ಇಂದಿನಿಂದಲೇ ಹೊಸ ಗ್ಯಾಸ್ ಸಿಲಿಂಡರ್ ಖರೀದಿ ಮಾಡಿಬಹುದು. ಗ್ಯಾಸ್ ಮುಗಿದಾಗ ಮೊಬೈಲ್ ಮೂಲಕವೇ ಬುಕಿಂಗ್ ಮಾಡಬಹುದು. ಸೇವಾ ಕೇಂದ್ರ ಇಲ್ಲೇ ಇರುವುದರಿಂದ ಮನೆಗೆ ಬೇಗನೆ ತೆಗದುಕೊಂಡು ಹೋಗಬಹುದು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಜಿ.ಟಿ. ಭಾರತ್ ಸೇವಾ ಕೇಂದ್ರವನ್ನು ಆರಂಭಿಸಿದ್ದೇವೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಗ್ರಾಮಪಂಚಾಯಿತಿ ಅಧ್ಯಕ್ಷೆ ತಿಪ್ಪಮ್ಮ, ಗ್ರಾಮಪಂಚಾಯಿತಿ ಸದಸ್ಯರಾದ ಕೆ.ಟಿ. ನಿಜಲಿಂಗಪ್ಪ ಎನ್. ನಾಗಭೂಷಣ್ ರಾವ್, ಶಿವಣ್ಣ, ಪಿಡಿಓ ಗುಂಡಪ್ಪ, ಸೇವಸಹಕಾರ ಸಂಘದ ಅಧ್ಯಕ್ಷ ಎನ್. ತಿಪ್ಪಿರಯ್ಯ, ಭಾರತ್ ಗ್ರಾಸ್ ಸೇವಾಕೇಂದ್ರದ ಮಾಲೀಕರಾದ ಜಿ.ಟಿ. ತಿಪ್ಪೇಸ್ವಾಮಿ, ಜಿ.ಟಿ. ರಾಘವೇಂದ್ರ, ಶಿಕ್ಷಕರಾದ ಎ. ರವಿಕುಮಾರ್, ಮುಖಂಡರಾದ ದೊಡ್ಡಲಿಂಗೇಗೌಡ, ಶಿವಾನಂದ್, ಮಂಜುನಾಥ್, ರವಿಕುಮಾರ್, ಮಹಾಲಿಂಗಪ್ಪ, ರಾಜಣ್ಣ, ಗಿರೀಶ್ ಪಾಡುರಂಗಯ್ಯ, ಕೆ. ಚಂದ್ರಯ್ಯ, ಗೋವಿಂದಪ್ಪ, ಜಗದೀಶ್ ಇದ್ದರು.
(ವರದಿ: ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post