Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಕ್ಕಳ ಭವಿಷ್ಯಕ್ಕೆ, ಶಿಕ್ಷಕರ ಜೀವನಕ್ಕೆ ಮುಳುವಾಯಿತೆ ಕೋವಿಡ್ 19 (ಕೊರೋನಾ)

August 9, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬಹಳ ವರ್ಷಗಳ ಹಿಂದೆ ಕೆಲವು ಕಾಯಿಲೆಗಳು ವೇಗವನ್ನು ಪಡೆದುಕೊಂಡು ಕೋಟ್ಯಂತರ ಜನರ ಬದುಕನ್ನು ನಾಶ ಮಾಡಿದ್ದು ಇತಿಹಾಸ. ಅದೇ ಶತಮಾನಗಳು ಕಳೆದನಂತರ ಮಾನವನ ಅತಿಯಾದ ಹಣದ ದಾಹ, ಅಧಿಕಾರದ ವ್ಯಾಮೋಹ, ಸ್ವಪ್ರತಿಷ್ಠೆ ಹೆಚ್ಚಾಗುತ್ತಿದ್ದಂತೆ ಗೊತ್ತಿಲ್ಲದೆ ಇರುವ ನೂರಾರು ವೈರಾಣುಗಳು ಮಾನವನ ದೇಹಕ್ಕೆ ನಾಟಿ ಮನುಷ್ಯನ ಜೀವ ಕಿತ್ತುಕೊಂಡು ಅವರ ಕುಟುಂಬಗಳನ್ನು ಅನಾಥವನ್ನಾಗಿ ಮಾಡುತ್ತಿದೆ.

ಕೋವಿಡ್19 ಹಿಂದೆಲ್ಲಾ ಬರುತ್ತಿದ್ದ ಮಹಾಮಾರಿ ಖಾಯಿಲೆಗಳಿಗೆ ಹೋಲಿಸಿದರೆ ಈ ಖಾಯಿಲೆ ಹೆಚ್ಚಾಗಿ ಜೀವ ಹಾನಿ ಉಂಟು ಮಾಡುವುದಿಲ್ಲ, ನಮ್ಮ ಭಾರತೀಯ ಆಹಾರ ಪದ್ದತಿ ಮತ್ತು ಜೀವನ ಶೈಲಿ ನಮ್ಮ ಭಾರತೀಯ ಜನರ ಆರೋಗ್ಯವನ್ನು ಈ ಮಟ್ಟಿಗೆ ಕಾಪಾಡಿಕೊಂಡು ಬಂದಿದೆ.

ಭಾರತೀಯ ನಾಗರಿಕರು ತಮ್ಮ ನಿತ್ಯದ ಬದುಕಿನಲ್ಲಿ ರೋಗ ನಿರೋಧಕ ಶಕ್ತಿ ಇರುವ ಆಹಾರವನ್ನೇ ಹೆಚ್ಚಾಗಿ ಬಳಸುವುದರಿಂದ ಜೀವಕ್ಕೆ ಯಾವುದೇ ರೀತಿಯ ಹಾನಿಯು ಕೂಡ ಆಗುವುದಿಲ್ಲ. ಎಂದು ಋಷಿ ಮುನಿಗಳ ಕಾಲದಲ್ಲೇ ತಾಳೆಗರಿಯ ಮೇಲೆ ಬರೆದಿರುವುದನ್ನು ಈಗಲೂ ಕೂಡ ಪಾಲಿಸುತ್ತಿದ್ದೇವೆ. ಅಂತಹ ಪುಣ್ಯ ಭೂಮಿ ಆಗಿದೆ ಈ ನಮ್ಮ ಭರತ ಖಂಡ.

ಕೋವಿಡ್19 ಎದುರಿಸಲು ಕೋವಿಡ್ ವಾರಿಯರ್ಸ್ ಎಷ್ಟೇ ಪ್ರಯತ್ನ ಪಡುತ್ತಿದ್ದರು ಜನರು ಮಾತು ಕೀಳದಿರುವುದು ಶೋಚನೀಯ ಸಂಗತಿ. ತನ್ನ ಮನೆಯಲ್ಲಿಯೇ ಕಂದಮ್ಮಗಳನ್ನು, ಹಿರಿಯ ನಾಗರಿಕರನ್ನು ಇಟ್ಟಿಕೊಂಡು ತಾನು ಯಾವ ಸುರಕ್ಷತೆಯೂ ತೆಗೆದುಕೊಳ್ಳದೆ ಇನ್ನೊಬ್ಬರ ಜೀವದ ಹಾನಿಗೆ ಕಾರಣರಾಗುತ್ತಿದ್ದಾರೆ. ಒಂದು ಕಡೆ ಬಡವರ ಬವಣೆಗಳಾದರೆ ಇನ್ನೊಂದೆಡೆ ಪಾಪ ಈ ಶಿಕ್ಷಕರ ಮಕ್ಕಳ ಪಾಡು ಕೇಳುವವರಿಲ್ಲ.

ಮಕ್ಕಳು ತನ್ನ ತಾಯಿ ತಂದೆಯ ಬಳಿ ಮೊದಲ ವಿದ್ಯಾಭ್ಯಾಸ ಕಲಿತು ಶಾಲೆಯಲ್ಲಿ ನೆಚ್ಚಿನ ಗುರುಗಳು ಹೇಳಿಕೊಟ್ಟ ಪಠ್ಯಗಳನ್ನು ನೇರವಾಗಿ ಕಲಿತು ಮನೆಯಲ್ಲಿ ತಂದೆ ತಾಯಿಯರೊಡನೆ ಒಪ್ಪಿಸುತ್ತಿದ್ದರು. ಶಿಕ್ಷಕರ ಆ ಶಾಲೆಯಲ್ಲಿನ ಪಠ್ಯ ಕಲಿಸುವಿಕೆ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಬರುತ್ತಿತ್ತು, ಶಿಕ್ಷಕರು ಕೂಡ ಮಕ್ಕಳ ಜೊತೆ ಬೆರೆತು ಕಲಿಕೆಯಲ್ಲಿ ಶ್ರದ್ಧೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದರು. ಮಕ್ಕಳು ಕೂಡ ಅದೇ ಉತ್ಸಾಹದಲ್ಲಿ ಶಿಕ್ಷಕರೊಡನೆ ಬೆರೆತು ಕಲಿಕೆ ಮಾಡುತ್ತಿದ್ದರು. ಇದೇ ಕಲಿಕೆಯು ಇಂದು ಶಿಕ್ಷಕರ ಜೀವನಕ್ಕೆ ಕೊಡಲಿ ಪೆಟ್ಟು ಕೊಟ್ಟು, ಮಕ್ಕಳ ಮನಃಸ್ಥಿತಿಯನ್ನೇ ಕುಗ್ಗಿಸುತ್ತಿದೆ.

ಹೌದು… ಕೋವಿಡ್19 ಎಂಬ ವೈರಾಣು ಮಕ್ಕಳ ಭವಿಷ್ಯ ಮತ್ತು ಶಿಕ್ಷಕರ ಬದುಕನ್ನೇ ಕಿತ್ತುಕೊಂಡಿದೆ. ಮಕ್ಕಳು ನೇರವಾಗಿ ಶಿಕ್ಷಕರೊಡನೆ ಕಲಿತ ಕಲಿಕೆಯನ್ನೇ ಹೆಚ್ಚಾಗಿ ಗಮನಿಸುವುದಿಲ್ಲ, ಇನ್ನು ಈ ಮೊಬೈಲ್ ಕಂಪ್ಯೂಟರ್ ಮೂಲಕ ಯಾವ ಮಟ್ಟಿಗೆ ತಮ್ಮ ಮನೋವಿಕಾಸ ಮತ್ತು ವಿದ್ಯೆಯನ್ನು ವೃದ್ಧಿಸಿಕೊಳ್ಳುತ್ತಾರೆ ಎಂಬುದು ಅರಿತುಕೊಳ್ಳಲು ಸಾಧ್ಯವಿಲ್ಲ. ಇದರ ಮಧ್ಯೆಯು ಕೆಲವರ ಮಕ್ಕಳು ಗುರುಕುಲ ಶಾಲೆಗಳಲ್ಲಿ ಓದುತ್ತಿರುವುದು ಸಂತೋಷದ ಸಂಗತಿ. ದುಡ್ಡಿಗೋಸ್ಕರ ಮಕ್ಕಳಿಗೆ ಹೆಚ್ಚಾಗಿ ಶಾಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಒತ್ತಡ ಹಾಕಿ online ತರಗತಿಗಳನ್ನು ಮಾಡಿ ಮಕ್ಕಳ ಚಿಂತನೆಗಳಿಗೆ ಪೆಟ್ಟು ಕೊಡುತ್ತಿವೆ ಈ ಶಿಕ್ಷಣ ಸಂಸ್ಥೆಗಳು.

ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಗುರುಕುಲ ಮಾದರಿಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹೇಳಿಕೊಟ್ಟು ಮಕ್ಕಳೊಡನೆ ಮಕ್ಕಳಾಗಿ ಬೆರೆತು ಮಕ್ಕಳ ಪಠ್ಯಗಳನ್ನು ಆಡುತ್ತಾ ಆಡುತ್ತಾ, ಹೇಳಿಕೊಟ್ಟು ಮಕ್ಕಳಿಗೆ ಕ್ರಿಯಾಶೀಲತೆ ಕೊರತೆ ಬರದಂತೆ ನೋಡಿಕೊಳ್ಳಬಹುದು. ಮನೆಯಲ್ಲಿಯೇ ಪಠ್ಯದ ಜೊತೆ ಸಂಸ್ಕಾರ, ಇತಿಹಾಸ, ನೀತಿ ಬೋಧನೆಗಳನ್ನು ಕಂಪ್ಯೂಟರ್ ಬದಲು ತಾಯಿ ತಂದೆಯರು ಕಲಿಸಬೇಕಿದೆ. ಇದರ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಶಾಲೆಯ ತರಗತಿಯ ಪಠ್ಯ ಶಿಕ್ಷಕರು ಹೇಳಿ ಕೊಟ್ಟ ಹಾಗೆ ಓದಿಕೊಂಡು ಹೋದರೆ ಸಾಕು, ಹೆಚ್ಚಾಗಿ ಮಕ್ಕಳಿಗೆ ಕಂಪ್ಯೂಟರ್ ಮೊಬೈಲ್ ಶಿಕ್ಷಣ ಹೊರತುಪಡಿಸಿ ಮನೋವಿಕಾಸ ವೃದ್ಧಿಸುವ ನೀತಿ ಪಾಠಗಳೇ ಈ ದಿನಗಳಲ್ಲಿ ಮಕ್ಕಳಿಗೆ ಕೊಡುವ ಉತ್ತಮ ಮನೋವಿಕಾಸ.

ಶಿಕ್ಷಕ ವೃತ್ತಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಒಳ್ಳೆಯ ಶಿಕ್ಷಕರನ್ನು ಈ ಕೋವಿಡ್ 19 ಇಂದ ಕಳೆದುಕೊಳ್ಳದಿರೋಣ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಹಾಯಧನ ನೀಡೋಣ ಬಡ ಶಿಕ್ಷಕರಿಗೆ. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ಗುರುವಿನ ಕೊಡುಗೆ ಅಪಾರ. ಅವರ ನೆರವಿಗೆ ಹೋಗೋಣ ಮತ್ತು ಸಾಧ್ಯವಾದಷ್ಟು ಮಕ್ಕಳ ಮನೋಬಲ ಕುಗ್ಗದಂತೆ, ಕ್ರಿಯಾಶೀಲತೆ ಹಾಳಾಗದಂತೆ, ಮಕ್ಕಳ ಜೊತೆಯಲ್ಲಿಯೇ ಉತ್ತಮ ಸ್ನೇಹಿತರಾಗಿ ಭವಿಷ್ಯವನ್ನು ರೂಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕೋವಿಡ್19 ಬದಿಗಿಟ್ಟು ಮಕ್ಕಳ ಭವಿಷ್ಯ ಮತ್ತು ಶಿಕ್ಷಕರ ಜೀವನದ ಬಗ್ಗೆ ಚಿಂತನೆ ಮಾಡಿ ಭವಿಷ್ಯದಲ್ಲಿ ಎಚ್ಗರಿಕೆಯ ಹೆಜ್ಜೆಯನ್ನು ಇಡೋಣ.


Get In Touch With Us info@kalpa.news Whatsapp: 9481252093

Tags: BhadravathiBhanuprakash S AcharyaCorona VirusCovid19Kannada News WebsiteLatest News KannadaOnline Classಕಂಪ್ಯೂಟರ್ಕೋವಿಡ್-19ಭಾರತೀಯ ಜೀವನ ಶೈಲಿಶಿಕ್ಷಕ
Previous Post

ನಿಮ್ಮ ಮುದ್ದು ಮಗುವಿಗೆ ಶ್ರೀಕೃಷ್ಣ ವೇಷ ಹಾಕುತ್ತೀರಾ? ಫೋಟೋ ನಮಗೆ ಕಳುಹಿಸಿ, ಪ್ರಕಟಿಸುತ್ತೇವೆ

Next Post

ಜಯನಗರದಲ್ಲಿ ಸರಳವಾದರೂ ಧಾರ್ಮಿಕ ವಿಜೃಂಭಣೆಯಿಂದ ಸಂಪನ್ನಗೊಂಡ ರಾಯರ ಆರಾಧನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ಜಯನಗರದಲ್ಲಿ ಸರಳವಾದರೂ ಧಾರ್ಮಿಕ ವಿಜೃಂಭಣೆಯಿಂದ ಸಂಪನ್ನಗೊಂಡ ರಾಯರ ಆರಾಧನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Free Health Camp Organized by Medicover Hospitals

June 25, 2025

ಮೆಡಿಕವರ್ ಆಸ್ಪತ್ರೆ | ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿ

June 25, 2025

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Free Health Camp Organized by Medicover Hospitals

June 25, 2025

ಮೆಡಿಕವರ್ ಆಸ್ಪತ್ರೆ | ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿ

June 25, 2025

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!