ಕಲ್ಪ ಮೀಡಿಯಾ ಹೌಸ್
ಸಿದ್ರಾಮಯ್ಯನವರು ಒಂದು ರೂಪಾಯಿಗೆ ಕೆಜಿ ಅಕ್ಕಿ ಕೊಡೋ ಬದ್ಲು ಆ ದುಡ್ಡಲ್ಲಿ ಎಲ್ಲ ಹಾಸ್ಪಿಟಲ್’ಗೂ ಒಂದೊಂದು ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ದಿದ್ರೆ ಇವತ್ತು ಆಕ್ಸಿಜನ್ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ! ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿ ಓಟು ಗಿಟ್ಟಿಸಿಕೊಳ್ಳೋ ಬದಲು ಪ್ರತಿ ಆಸ್ಪತ್ರೆಗೂ 20-20 ಬೆಡ್ ಜಾಸ್ತಿ ಮಾಡಿದ್ದಿದ್ರೆ ಇವತ್ತು ಹಾಸಿಗೆ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ!
70 ವರ್ಷ ದೇಶ ಆಳಿದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಹಜ್’ಗೆ ಕಳ್ಸೋ ಬದಲು, ಕಂಡ ಕಂಡಲ್ಲಿ ಹಜ್ ಭವನ ಕಟ್ಟಿಸೋ ಬದಲು, ಸಚಿವರ ಕೈಲಿ, ಅಳಿಯನ ಕೈಲಿ ಹಗರಣಗಳನ್ನು ಮಾಡಿಸಿ ಜನರ ದುಡ್ಡನ್ನು ನುಂಗೋ ಬದಲು ಊರಿಗೊಂದು ಆಸ್ಪತ್ರೆ ಕಟ್ಟಿಸಿದ್ದಿದ್ರೆ ಇವತ್ತು ಜನ ಆಸ್ಪತ್ರೆ ಇಲ್ಲದೇ ಸಾಯ್ತಿರ್ಲಿಲ್ಲ! ಅಂತೆಲ್ಲಾ ಹೇಳಿದ್ರೆ ಬಾಲಿಶ ಅನ್ಸತ್ತಾ?
ಅಲ್ಲ ಕಣ್ರಯ್ಯಾ! 70 ವರ್ಷ ಆಳ್ವಿಕೆ ಮಾಡಿ ನೆಟ್ಟಗೆ ಅವಶ್ಯಕತೆವಿರುವಷ್ಟು ಡಾಕ್ಟರ್, ನರ್ಸ್ಗಳನ್ನು ಅಪಾಯಿಂಟ್ ಮಾಡಿಕೊಳ್ಳದೇ, ಮೆಡಿಕಲ್ ಕಾಲೇಜುಗಳನ್ನು ಕಟ್ಟಿಸದೇ, ಆಸ್ಪತ್ರೆಗಳನ್ನು ಕಟ್ಟಿಸದೇ, ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯನ್ನು ಏರಿಸದೇ, ಆಸ್ಪತ್ರೆಗಳ ಸ್ಥಿತಿಗತಿಗಳನ್ನು ಮೇಲ್ದರ್ಜೆಗೆ ಏರಿಸದೇ, ದೇಸೀ ಉತ್ಪಾದನೆಗೆ ಪ್ರೋತ್ಸಾಹ ಕೊಡದೇ ಅಂತಾರಾಷ್ಟ್ರೀಯ ಮೆಡಿಕಲ್ ಮಾಫಿಯಾ ಕ್ಕೆ ಸಪೋರ್ಟ್ ಕೊಟ್ಟು ಅವರಿಂದ ಕಿಕ್ ಬ್ಯಾಕ್ ಪಡೆದು ಈಗ ದಿಢೀರನೆ ನಿದ್ರೆಯಿಂದ ಎಚ್ಚೆತ್ತವರಂತೆ, ಹಗಲೂ ರಾತ್ರಿ ದೇಶಕ್ಕಾಗಿ ಕೆಲಸ ಮಾಡುತ್ತಾ 70 ವರ್ಷ ಇವರು ಮಾಡಿರೋ ಕೊಳಕನ್ನು ಸ್ವಚ್ಛ ಮಾಡ್ತಿರೋ ಮೋದಿ ಬಗ್ಗೆ ಅಪಪ್ರಚಾರ ಮಾಡಿದ್ರೆ ಯಾರಾದ್ರೂ ಕೇಳ್ತಾರೆ ಅನ್ಕೊಂಡಿದೀರಾ?
ಜನರನ್ನು ಏನು ಬಕ್ರಾಗಳು ಅನ್ಕೊಂಡಿದೀರಾ ನೀವು ಹೇಳೋದೆಲ್ಲಾ ನಂಬೋಕೆ? ಮೋದಿ ಬಗ್ಗೆ ಇಲ್ಲದ್ದು ಮಾತಾಡಿದ್ರೆ ನಿಮ್ ಬಾಯಿಗೆ ಹುಳ ಬೀಳತ್ತೆ! ನಿಮ್ ಯೋಗ್ಯತೆಗೆ 2014 ರಲ್ಲಿ ಬಿಟ್ಟಿದ್ದಿದ್ರೆ ದೇಶಾನ ಮಾರಿಬಿಡ್ತಿದ್ರಿ. ಉಳಿಸಿದ್ದು ಮೋದಿ. ಜನಧನ್ ಯೋಜನೆ, ಡೀಮಾನಿಟೈಸೇಷನ್, ಡಿಜಿಟಲ್ ವ್ಯವಹಾರ, ಮೇಕ್ ಇನ್ ಇಂಡಿಯಾ, ಆಧಾರ್ ಅನುಷ್ಠಾನ, ರೈತರ ಖಾತೆಗೆ ನೇರ ಪ್ರೋತ್ಸಾಹ ಧನ ವರ್ಗಾವಣೆ, ರಾಫೆಲ್ ಸೇರಿದಂತೆ ಸೈನ್ಯದ ಶಸ್ತ್ರಾಸ್ತ್ರಗಳ ಸಂಗ್ರಹ, ಪಾಕಿಸ್ತಾನ ಚೀನಾಕ್ಕೆ ಖಡಕ್ ಉತ್ತರ, ಭ್ರಷ್ಟಾಚಾರ ರಹಿತ ಆಡಳಿತ, ಗಡಿ ಬಂದೋಬಸ್ತ್, ಆರ್ಟಿಕಲ್ 370 ರದ್ದು, ರಾಮಮಂದಿರ ವಿವಾದ ಇತ್ಯರ್ಥ, ಕೋಮುಗಲಭೆ ರಹಿತ ಆಡಳಿತ, ಸಾವಿರಾರು ಕಿಲೋಮೀಟರ್’ಗಳ ರಸ್ತೆ, ದೇಸೀ ವ್ಯಾಕ್ಸಿನ್. ಒಂದಾ ಎರಡಾ ಮೋದಿ ಈ ದೇಶಕ್ಕೆ ಕೊಟ್ಟಿರೋದು?
70 ವರ್ಷ ಮಾಡಿರೋ ಗಲೀಜನ್ನು ತೊಳೆಯೋಕೆ ಇನ್ನೂ ಸ್ವಲ್ಪ ಸಮಯ ಬೇಕು. 2023 ಕ್ಕೂ ನಮಗೆ ಮೋದೀನೇ ಬೇಕು. ಅದಕ್ಕೆ ಇನ್ನೂ 10 ವರ್ಷ ಅಧಿಕಾರವನ್ನು ಪಡೆಯುವ ಆಲೋಚನೆ ಬಿಟ್ಟು ಮರ್ಯಾದೆಯಿಂದ ಕೂತ್ಕೊಳ್ಳಿ. ಪೆಟ್ರೋಲ್ ರೇಟು ಅದೂ ಇದು ಅಂತ ಸಣ್ಣಪುಟ್ಟ ಸಮಸ್ಯೆಗಳನ್ನೇ ಬೂತಗನ್ನಡಿಯಲ್ಲಿ ದೊಡ್ಡದು ಮಾಡಿ ತೋರಿಸೋಕೆ ಹೋದ್ರೆ ಜನ ಕೇಳಲ್ಲ. ಮೂರು ತಿಂಗಳು ಬಿಟ್ಟು ನೋಡಿ ಫ್ರೀ ವ್ಯಾಕ್ಸಿನ್ ಕೊಟ್ಟು ಕೋಟಿ ಜನರ ಜೀವವನ್ನು ಉಳಿಸಿದ ಪುಣ್ಯಾತ್ಮ ಮೋದಿ ಅನ್ನೋದನ್ನ ನೀವೇ ಒಪ್ಕೊಳೋ ಸ್ಥಿತಿ ನಿರ್ಮಾಣ ಆಗತ್ತೆ. ಒಪ್ಕೊಳ್ಳದೇ ಇದೇ ಥರ ಕೀಳು ರಾಜಕೀಯ ಮಾಡ್ತಾ ಇದ್ರೆ ಮುಂದಿನ ಚುನಾವಣೆಯಲ್ಲಿ ನೀವು ಕಾಣೆ ಆಗೋಗ್ತೀರಾ! ಜನ_ಪೆದ್ದರಲ್ಲ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















