No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Thursday, July 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ತೀರ್ಥಹಳ್ಳಿ

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

kalpa News by kalpa News
November 10, 2019
in ತೀರ್ಥಹಳ್ಳಿ
0
Share on FacebookShare on TwitterShare on WhatsApp

ತೀರ್ಥಹಳ್ಳಿ: ಹಿಂದೊಂದು ಕಾಲ ಇತ್ತು. ಹಳ್ಳಿಗಳಿಗೆ ಡಾಕ್ಟರ್ ಅನ್ನೋರು ಬರ್ತಿರಲಿಲ್ಲ. ಆದ್ರೆ ಈಗ ಹೊಸ ಕಾಲ ಬಂದಿದೆ. ಶಿಕ್ಷಕರೇ ಹಳ್ಳಿಗಳಿಗೆ ಬರ್ತಾ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.

ಶಿಲ್ಪಾ ಫೌಂಡೇಷನ್ ಹಾಗೂ ಇಂಡಿಯಾ ಲಿಟರಿಸಿ ಪ್ರಾಜೆಕ್ಟ್‌ ಇಲ್ಲಿನ ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಬಹು ಆಯಾಮ ಕಲಿಕೆ ಕಾರ್ಯಕ್ರಮದಲ್ಲಿ ಇಂದಿನ ಶಿಕ್ಷಕರ ಜವಾಬ್ದಾರಿಯನ್ನು ನೆನೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಒಳ್ಳೆಯ ಸಾಹಿತಿ, ಕಲಾವಿದರನ್ನು ಕೊಟ್ಟ ಮಲೆನಾಡಿಗೆ ಈ ರೀತಿ ಆಗಿರುವುದು ನಿಜಕ್ಕೂ ವಿಷಾದ. ಅದೆಷ್ಟೋ ಶಿಕ್ಷಕರು ವರ್ಗಾವಣೆಯಾಗಿದ್ದು, ಅವರು ಎ ವಲಯದಿಂದ ಸಿ ವಲಯಕ್ಕೆ ಬರಲ್ಲ. ಬಿ ವಲಯದಿಂದ ಸಿ ವಲಯಕ್ಕೂ ಬರಲ್ಲ. ಎಲ್ಲರೂ ನಗರ ಬೇಕು ಅಂದ್ರೆ ಹಳ್ಳಿಗಳಲ್ಲಿ ಪಾಠ ಮಾಡೋರು ಯಾರು..? ಹಳ್ಳಿ ಮಕ್ಕಳು ಯಾವಾಗ ಕಲಿಯೋದು..? ಎಲ್ಲ ಮಕ್ಕಳನ್ನು ಸಿಟಿಗೆ ಕಳಿಸೋಕೆ ಆಗುತ್ತಾ..? ಶಿಕ್ಷಕರು ಸಂಬಳ ತೆಗೆದುಕೊಂಡ್ರು ಯಾಕಿಷ್ಟು ಸಮಸ್ಯೆ ಆಗ್ತಿದೆ..? ಅದೆಷ್ಟೋ ಮಕ್ಕಳು ಗುಡ್ಡಗಾಡು ಪ್ರದೇಶಗಳಿಂದ ಬರ್ತಾರೆ. ಹೀಗಾಗಿ ತೀರ್ಥಹಳ್ಳಿಯನ್ನು ಶಿಕ್ಷಕರು ಗಣನೆಗೆ ತೆಗೆದುಕೊಳ್ಳಬೇಕು. ಅಚ್ಚುತ್ ಗೌಡರಂತವರು ಹಳ್ಳಿಯಲ್ಲೇ ಹುಟ್ಟಿ, ಬೆಳೆದು ಇಲ್ಲೇ ಶಿಕ್ಷಣ ಪಡೆದು, 500ಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಷನ್ ವತಿಯಿಂದ ಅವರು ಓದಿದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಇದು ಖುಷಿ ತಂದಿದೆ. ನಾವು ಕೂಡ ಸಹಕರಿಸುತ್ತೇವೆ. ಅವರು ಕೊಟ್ಟ ಪೀಠೊಪಕರಣಗಳನ್ನು ಕಾಪಾಡಿಕೊಳ್ಳಿ ಎಂದು ಹೇಳಿ ಶಾಸಕರು ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಿದರು.

ಸಾಫ್ಟೆಕ್ ಇಂಡಿಯಾ ನಿರ್ದೇಶಕ ರಾಘವ್ ಸುವರ್ಣ ಅವರು ಮಾತನಾಡಿ, ಗ್ರಾಮೀಣ ಭಾಗಗಳಿಗೆ ಕೊಡುಗೆ ನೀಡುತ್ತಿರುವ ಶಿಲ್ಪಾ ಫೌಂಡೇಷನ್ ಕಾರ್ಯ ನಿಜಕ್ಕೂ ಖುಷಿ ತಂದಿದೆ. ಅಗತ್ಯವಿರುವ ಶಾಲೆಗಳಿಗೆ ನಮ್ಮ ಕೊಡುಗೆಗಳು ತಲುಪಬೇಕಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಮಾರ್ಗದರ್ಶನವು ಬೇಕು. ಆ ಕೆಲಸವನ್ನು ಶಿಲ್ಪಾ ಫೌಂಡೇಷನ್ ಮಾಡುತ್ತಿದೆ. ಅಚ್ಚುತ್ ಹಾಗೂ ಪ್ರಮೋದ್ ಅವರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದು ಸಂತೋಷದ ವಿಚಾರ ಎಂದರು.

ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ಮಾತನಾಡಿ, ಇದು ನನಗೆ ಹೆಮ್ಮೆಯ ವಿಷಯ. ನಾನು ಓದಿದ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಒಂದು ಉತ್ತಮ ಸಂದೇಶವಾಗಿದೆ. ಮಕ್ಕಳಿಗೆ ತಂತ್ರಜ್ಞಾನದ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಇನ್ನು ಶಿಲ್ಪಾ ಫೌಂಡೇಷನ್ ಹಿಂದೆಯಂತೆ ಪ್ರತಿ ವರ್ಷ ಈ ಕಲಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಮ್ಮ ರಾಜ್ಯದ ಮಕ್ಕಳು ಶಿಕ್ಷಣದಿಂದ ಯಾರು ಕೂಡ ಅವಕಾಶ ವಂಚಿತರಾಗಬಾರದು. ಜ್ನಾನೇಂದ್ರ ಅಂತಹ ಶಾಸಕರಿಗೆ ಹಲವಾರು ಸಂಸ್ಥೆಗಳು ಈ ರೀತಿಯಲ್ಲಿ ಬೆಂಬಲ ನೀಡಬೇಕಾಗಿದೆ ಎಂದರು.


ತೀರ್ಥಹಳ್ಳಿಯ ಶಿಕ್ಷಣಾಧಿಕಾರಿ ಆನಂದ್ ಕುಮಾರ್ ಮಾತನಾಡಿ, ಇದೊಂದು ಪುಣ್ಯದ ಕೆಲಸ. ಹಲವಾರು ಶಿಕ್ಷಕರು ನಮ್ಮ ಬಳಿ ಬಂದು ಮಕ್ಕಳಿಗೆ ಅನುಕೂಲವಾಗುವಂತೆ ಆಯಾಮ ಕಲಿಕೆ ಬೇಡಿಕೆಯ ಮನವಿಯನ್ನು ಸಲ್ಲಿಸಲಾಗಿತ್ತು. ಆದ್ರೆ ಈಗ ನಮ್ಮ ಕನಸು ಈಡೇರಿದೆಯಂದು ತಿಳಿಯಬಹುದಾಗಿದೆ. ಈ ಬಹು ಆಯಾಮ ಕಲಿಕೆ ಪೀಠೋಪಕರಣಗಳನ್ನು ಎಲ್ಲ ಶಿಕ್ಷಕರು ಜಾಗೃತವಾಗಿ ಕಾಪಾಡಿಕೊಳ್ಳಬೇಕಾಗಿದೆ ಎಂದು ಶಿಕ್ಷಕರಿಗೆ ವಿಶೇಷವಾಗಿ ಸೂಚನೆ ನೀಡಿದರು.

ಇಂಡಿಯಾ ಲಿಟರಿಸಿ ಪ್ರಾಜೆಕ್ಟ್‌ ಪ್ರಾಯೋಜಕತ್ವ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ತೀರ್ಥಹಳ್ಳಿ ಸಹಯೋಗದಲ್ಲಿ ಶಿಲ್ಪಾ ಫೌಂಡೇಷನ್, ಸಾಫ್ಟೇಕ್ ಇಂಡಿಯಾ ಮತ್ತು ಫಿಡಿಲಿಟಸ್ ಕಾರ್ಪ್ ಸಹಕಾರದಿಂದ ಇಂದು ಆಯೋಜಿಸಲಾಗಿದ್ದ ಬಹು ಆಯಾಮ ಕಲಿಕಾ ಕೇಂದ್ರದ ಉದ್ಘಾಟನೆ ಯಶಸ್ವಿಗೊಂಡಿದೆ. ಬಡಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆ ಶಿಲ್ಪಾ ಫೌಂಡೇಷನ್ ವತಿಯಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್, ತಾಂತ್ರಿಕ ಉಪಕರಣಗಳನ್ನು ವಿತರಿಸಲಾಯಿತು. 22 ಶಾಲೆಗಳ ಪೈಕಿ 7 ಪ್ರೌಢಶಾಲೆ, 15 ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 16 ಲ್ಯಾಪ್‌ಟಾಪ್, 11 ಪ್ರೊಜೆಕ್ಟರ್, 11 ಸ್ರ್ಕೀನ್’ಗಳು, 21 ಡಿಜಿಟಲ್ ಉಪಕರಣ, 45 ಸೈನ್ಸ್‌ ಕಿಟ್, 22 ಲೈಬ್ರರಿ ಕಿಟ್, 7 ವೃತ್ತಿ ಮಾರ್ಗದರ್ಶಿ ಕಿಟ್’ಗಳನ್ನು ಕೊಡಲಾಯಿತು. ಶಾಲಾ ರಜೆ ದಿನದ ನಡುವೆಯೂ ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು. ಕಂಪನಿ ಗಳಿಕೆಯ 2ರಷ್ಟುನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾನೂನಿದೆ. ಅದನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಎನ್ನಲಾಗುತ್ತದೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಶಿಲ್ಪಾ ಫೌಂಡೇಷನ್ ಕಾರ್ಯಕ್ಕೆ ಶಿವಮೊಗ್ಗ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಪ್ರಶಾಂತ್ ಕುಕ್ಕೆ, ಐಎಲ್‌ಪಿ ನಿರ್ದೇಶಕ ಪ್ರಮೋದ್, ಸಾಫ್ಟೆಕ್ ಇಂಡಿಯಾ ನಿರ್ದೇಶಕ ರಾಘವ ಸುವರ್ಣ, ಪ್ರಭಾರ ಉಪಪ್ರಾಂಶುಪಾಲ ಎಚ್.ಕೆ. ಚಿಕ್ಕಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮಾಹಿತಿ: ಅನಿರೀತ್

Tags: India Literacy ProjectKannada NewsMalnad NewsMLA Araga JnanendraShilpa FoundationSofttech IndiaThirthalliಇಂಡಿಯಾ ಲಿಟರಿಸಿ ಪ್ರಾಜೆಕ್ಟ್‌ತೀರ್ಥಹಳ್ಳಿಶಾಸಕ ಆರಗ ಜ್ಞಾನೇಂದ್ರಶಿಲ್ಪಾ ಫೌಂಡೇಷನ್ಸಾಫ್ಟೆಕ್ ಇಂಡಿಯಾ
Share204Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಂದಿರವಲ್ಲೇ ಕಟ್ಟೋಣ, ಭವ್ಯ ಮಂದಿರ ಕಟ್ಟೋಣ

Next Post

ಕೊಪ್ಪಳ: ಡಿ.1ರ ಸಪ್ತಸ್ವರ ಸಮೂಹದ 4ನೆಯ ವಾರ್ಷಿಕೋತ್ಸವದ ವೈಭವ ಕಣ್ತುಂಬಿಕೊಳ್ಳಲು ಮರೆಯದಿರಿ

kalpa News

kalpa News

Next Post

ಕೊಪ್ಪಳ: ಡಿ.1ರ ಸಪ್ತಸ್ವರ ಸಮೂಹದ 4ನೆಯ ವಾರ್ಷಿಕೋತ್ಸವದ ವೈಭವ ಕಣ್ತುಂಬಿಕೊಳ್ಳಲು ಮರೆಯದಿರಿ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL