No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Friday, September 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಬಿಜೆಪಿ ಪಾಲಿನ ಚುನಾವಣಾ ಚಾಣಾಕ್ಷರಾಗಿದ್ದ ಜೇಟ್ಲಿ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

kalpa News by kalpa News
August 24, 2019
in Small Bytes, ರಾಷ್ಟ್ರೀಯ
0
ಬಿಜೆಪಿ ಪಾಲಿನ ಚುನಾವಣಾ ಚಾಣಾಕ್ಷರಾಗಿದ್ದ ಜೇಟ್ಲಿ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?
Share on FacebookShare on TwitterShare on WhatsApp

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಅವರಿಂದ ಮೊದಲ್ಗೊಂಡ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹಲವು ದಕ್ಷ ಹಾಗೂ ಯಶಸ್ವಿ ನಾಯಕರನ್ನು ಕಂಡಿದೆ. ಇಂತಹ ಸಾಲಿನಲ್ಲಿ ನಿಲ್ಲುವ ಚೇತನ ಶ್ರೀ ಅರುಣ್ ಜೇಟ್ಲಿ…

70ರ ದಶಕದಲ್ಲಿ ವಿದ್ಯಾರ್ಥಿ ಜೀವನದಿಂದಲೇ ತಮ್ಮ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದ ಜೇಟ್ಲಿ ಅವರು, ಆನಂತರ ಬಿಜೆಪಿಯಲ್ಲಿ ಸಂಫೂರ್ಣವಾಗಿ ತೊಡಗಿಸಿಕೊಂಡರು. ಭವಿಷ್ಯದ ದಿನಗಳಲ್ಲಿ ಕಮಲ ಪಕ್ಷದ ಚುನಾವಣಾ ಚಾಣಾಕ್ಷರೆನಿಸಿ ಹಲವು ಹಂತಗಳಲ್ಲಿ ಗೆಲುವನ್ನು ತಂದು ಕೊಟ್ಟರು. ಅವುಗಳಲ್ಲಿ ಕೆಲವು ಇಲ್ಲಿದೆ ಓದಿ.

ಅರುಣ್ ಜೇಟ್ಲಿಯವರು ಜನರಲ್ ಸೆಕ್ರೆಟರಿಯಾಗಿ ಮೇ 2008ರವರೆಗೆ 8 ಚುನಾವಣೆಗಳನ್ನು ನಿರ್ವಹಿಸಿದ್ದಾರೆ. ತೀರಾ ಇತ್ತೀಚೆಗೆ, ಕರ್ನಾಟಕದಲ್ಲಿ ಬಿಜೆಪಿಯ ಅತಿ ಯಶಸ್ಸನ್ನು ಅವರು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.

ಗುಜರಾತ್
2002ರಲ್ಲಿ ಅರುಣ್ ಜೇಟ್ಲಿಯವರು ಅವರ ಹತ್ತಿರದ ಸಹಯೋಗಿ ನರೇಂದ್ರ ಮೋದಿಯವರಿಗೆ ಸಹಾಯ ನೀಡಿ, ಬಿಜೆಪಿಯು ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ 126 ಸ್ಥಾನಗಳನ್ನು ಗೆದ್ದುಕೊಳ್ಳಲು ಸಾಧ್ಯವಾಯಿತು. ಈ ಸಹಯೋಗವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತು.

ಡಿಸೆಂಬರ್ 2007ರಲ್ಲಿ, ಜೇಟ್ಲಿಯವರು ಒಂದು ಚಳುವಳಿಯನ್ನು ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಈಗ ಇತಿಹಾಸ. ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 117 ಸ್ಥಾನ ಪಡೆದುಕೊಂಡಿತು. ನರೇಂದ್ರ ಮೋದಿಯವರು ಅರುಣ್ ಜೇಟ್ಲಿಯವರನ್ನು ಗುಜರಾತ್’ಗೆ ವರ್ಗಾಯಿಸುವಂತೆ ವಿಶೇಷವಾಗಿ ಪಕ್ಷದ ವರಿಷ್ಠರನ್ನು ಕೇಳಿಕೊಂಡಿರುತ್ತಾರೆ.

ಮಧ್ಯ ಪ್ರದೇಶ
2003ರಲ್ಲಿ, ಮಧ್ಯ ಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಅರುಣ್ ಜೇಟ್ಲಿಯವರು ನಿರ್ವಹಿಸಿದ್ದರು. ಉಮಾ ಭಾರತಿಯವರ ಜೊತೆಗೂಡಿ ಅಲ್ಲಿನ ವಿಧಾನಸಭೆಯ ಒಟ್ಟು 230 ಸ್ಥಾನಗಳಲ್ಲಿ 173 ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಯಶಸ್ಸು ಸಾಧಿಸಿದ್ದರು. ಮುಖ್ಯಮಂತ್ರಿ ಉಮಾಭಾರತಿ ಹಾಗೂ ಅರುಣ್ ಜೇಟ್ಲಿಯವರು ರೈತರ ಉಚ್ಛಾಟನೆಯಿಂದಾಗಿ ಪಕ್ಷವು ಕೆಳಗೆ ಬಿದ್ದಿತ್ತು.

ಕರ್ನಾಟಕ
ಮೇ 2004ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿಯವರಿಗೆ ಕರ್ನಾಟಕದ ವಿಶೇಷ ಹೊಣೆಯನ್ನು ನೀಡಲಾಗಿತ್ತು. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನದಲ್ಲಿದೆ ಹಾಗೂ ಉತ್ತಮ ನಿರೀಕ್ಷೆ ಕೂಡಾ ಮಾಡಬಹುದಾಗಿತ್ತು.

ಒಟ್ಟು 26 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯು 18 ಸ್ಥಾನಗಳನ್ನು ಗೆದ್ದುಕೊಂಡಿದ್ದು, ರಾಜ್ಯದಲ್ಲಿ ಒಟ್ಟು 83 ಸ್ಥಾನಗಳನ್ನು ಪಡೆದುಕೊಂಡು ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಎದುರಾಳಿಗಳಾದ ಕಾಂಗ್ರೆಸ್ 68 ಹಾಗೂ ಜೆಡಿಎಸ್ 59 ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ರಚಿಸಿ ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾದರು.

ಜನವರಿ 2006ರಲ್ಲಿ ಅಸಮಾಧಾನಗೊಂಡ ಜೆಡಿಎಸ್ ನಾಯಕರು, ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಒಕ್ಕೂಟ ಮಾಡಿಕೊಂಡು ಸರ್ಕಾರ ಸ್ಥಾಪಿಸಲು ನಿರ್ಧರಿಸಿದರು. ಮೊದಲರ್ಧ ಅವಧಿಯಲ್ಲಿ ಜೆಡಿಎಸ್‌ನ ಮುಖ್ಯಮಂತ್ರಿ ಹಾಗೂ ಉಳಿದರ್ಧ ಅವಧಿಗೆ ಬಿಜೆಪಿಯು ತನ್ನದೇ ಪಕ್ಷದ ಮುಖ್ಯಮಂತ್ರಿಯನ್ನು ಹೊಂದಬಹುದು ಎಂದು ಒಪ್ಪಂದ ಮಾಡಿಕೊಂಡರು.

ನವೆಂಬರ್ 2007ರಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದರು. ಮೇ 2008ರಲ್ಲಿ, ಅರುಣ್ ಜೇಟ್ಲಿಯವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವಂತಹ ಜವಾಬ್ದಾರಿ ತೆಗೆದುಕೊಂಡರು. 224-ಸದಸ್ಯರ ವಿಧಾನಸಭೆಯಲ್ಲಿ, ಬಿಜೆಪಿಯು 110 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಸಾಧಿಸಲು 3 ಸ್ಥಾನಗಳು ಕಡಿಮೆಯಾದವು. ಆ ನಂತರ, ಅರುಣ್ ಜೇಟ್ಲಿಯವರು 5 ಜನ ಸ್ವತಂತ್ರ ಶಾಸಕರ ಬೆಂಬಲ ಯಾಚಿಸಿ ಬಿಜೆಪಿಯ ಬಲವನ್ನು 115 ಸ್ಥಾನಗಳಿಗೆ ತಂದರು. ಪಕ್ಷದ ಅಧ್ಯಕ್ಷ ರಣಜಿತ್ ಸಿಂಗ್ ಅವರಿಂದ ಹಿಡಿದು ಸಹೋದ್ಯೋಗಿ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪನವರವರೆಗೆ ಪಕ್ಷದ ಎಲ್ಲಾ ನಾಯಕರುಗಳು ಈ ಗೆಲುವಿನ ರೂವಾರಿ ಅರುಣ್ ಜೇಟ್ಲಿ ಎಂದು ಹೇಳಿದ್ದು, ಅವರ ತಾಕತ್ತನ್ನು ತೋರಿಸುತ್ತದೆ.

ಬಿಹಾರ
ಬಿಹಾರದಲ್ಲಿ 2005ರ ಫೆಬ್ರವರಿಯಲ್ಲಿ ನಡೆದ ಚುನಾವಣೆಗಳು ಅನಿಶ್ಚಿತತೆಯಿಂದ ಕೂಡಿದ್ದರಿಂದ, ನವೆಂಬರ್‌ನಲ್ಲಿ ಮರುಚುನಾವಣೆಗಳು ನಡೆದವು. ಈ ಚುನಾವಣೆಯನ್ನು ಬಿಜೆಪಿಯು ಜೆಡಿಯುನೊಂದಿಗೆ ಒಂದು ಗೂಡಿ ಎದುರಿಸಿದವು. ಎನ್‌ಡಿಎಯ ಒಗ್ಗಟ್ಟಿಗೆ ಜೇಟ್ಲಿಯವರೇ ಮುಖ್ಯ ಯೋಜನಾ ರೂಪುಗಾರರಾಗಿದ್ದರು. ಬಿಜೆಪಿ ಅತಿ ಹೆಚ್ಚು ಸಂಖ್ಯೆಯ 58 ಸ್ಥಾನಗಳನ್ನು ಜೊತೆಗೆ ಜೆಡಿಯುನ 88 ಸ್ಥಾನಗಳು ಸರ್ಕಾರವನ್ನು ರಚಿಸಲು ಸಹಕಾರಿಯಾಯಿತು ಜೆಡಿಯುನ ನೀತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾದರು ಹಾಗೂ ಬಿಜೆಪಿಯ ಸುಶೀಲ್ ಕುಮಾರ್ ಮೋದಿಯವರು ಉಪಮುಖ್ಯಮಂತ್ರಿಯಾದರು.

ಪಂಜಾಬ್
ಫೆಬ್ರವರಿ 2007ರಲ್ಲಿ ಅರುಣ್ ಅವರು ಪಂಜಾಬ್’ನಲ್ಲಿ ನಡೆದ ಬಿಜೆಪಿ ಚಳುವಳಿಯ ನೇತೃತ್ವ ವಹಿಸಿದ್ದರು. ಪಕ್ಷ ಹಾಗೂ ಅದರ ಒಕ್ಕೂಟ ಶಿರೋಮಣಿ ಅಕಾಲಿ ದಳದ ನಡುವಿನ ತಂತ್ರಗಳನ್ನು ಸಹಯೋಜಿಸಿದರು. ಸ್ಪರ್ಧಿಸಿದ 23 ಸ್ಥಾನಗಳಲ್ಲಿ, ಅದು 19ರಲ್ಲಿ ಜಯಗಳಿಸಿತು, ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನದನ್ನು ಪಕ್ಷ ಸಾಧಿಸಿತು.

ಎಂಸಿಡಿ
2007ರ ಕೊನೆಯ ಭಾಗದಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (ಎಂಸಿಡಿ)ಯ ಚುನಾವಣೆಗಳ ಅಧಿಕಾರಿಯಾಗಿ ಅರುಣ್ ಜೇಟ್ಲಿಯವರನ್ನು ನೇಮಕಗೊಳಿಸಲಾಯಿತು. ಕಾರ್ಪೊರೇಶನ್’ನ 272 ಸದಸ್ಯತ್ವದಲ್ಲಿ, ಬಿಜೆಪಿಯು 164 ವಾರ್ಡ್‌ಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಜೇಟ್ಲಿ ಅವರ ತಂತ್ರಗಾರಿಕೆ ದೊಡ್ಡದಿತ್ತು.

Tags: Arun JaitelyArun Jaitley DeathArun Jaitley Passed AwayBJPKannada Newsಅರುಣ್_ಜೇಟ್ಲಿಅರುಣ್_ಜೇಟ್ಲಿ_ಅಸ್ತಂಗತಅರುಣ್_ಜೇಟ್ಲಿ_ವಿಧಿವಶಕರ್ನಾಟಕಚುನಾವಣಾ ಚಾಣಾಕ್ಷಪಂಜಾಬ್ಬಿಹಾರಮಧ್ಯ ಪ್ರದೇಶರಾಷ್ಟ್ರೀಯಸ್ವಯಂಸೇವಕಸಂಘ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಭ್ಯ, ದಕ್ಷ ರಾಜಕಾರಣಿ ಅರುಣ್ ಜೇಟ್ಲಿ ಜೀವನ ವೃತ್ತಾಂತ

Next Post

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

kalpa News

kalpa News

Next Post
ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL