No Result
View All Result
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?
English Articles

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

by ಕಲ್ಪ ನ್ಯೂಸ್
March 5, 2026
0

Kalpa Media House  |  Bengaluru | Zee Kannada, which continues to entertain audiences with fresh and engaging content and has...

Read moreDetails

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
  • Advertise With Us
  • Grievances
  • About Us
  • Contact Us
Thursday, March 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಮರಾಜ್ ಕಾಟನ್ ಪಾರಂಪರಿಕ ಬ್ರಾಂಡ್ ಪಯಣದಲ್ಲಿ ಜೂನ್ 11 ಐತಿಹಾಸಿಕ ಕ್ಷಣ

250ನೆಯ ಶೋರೂಂ ಎಲ್ಲಿ ಉದ್ಘಾಟನೆಯಾಗುತ್ತಿದೆ? ಏನಿದರ ವಿಶೇಷ? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 10, 2023
in Special Articles
0
ರಾಮರಾಜ್ ಕಾಟನ್ ಪಾರಂಪರಿಕ ಬ್ರಾಂಡ್ ಪಯಣದಲ್ಲಿ ಜೂನ್ 11 ಐತಿಹಾಸಿಕ ಕ್ಷಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಜಯವಾಡ(ಆಂಧ್ರಪ್ರದೇಶ)  |

ಕಳೆದ 40 ವರ್ಷಗಳಿಂದ ಸರಿಸಾಟಿಯಿಲ್ಲದ ಬ್ರಾಂಡ್ ಆಗಿ ಹೊರಹೊಮ್ಮಿರುವ ರಾಮರಾಜ್ ಕಾಟನ್ #RamRajCotton ತನ್ನ ಸಾಂಸ್ಕೃತಿಕ, ಪಾರಂಪರಿಕ ಪಯಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.

ಹೌದು…ದೇಸಿ ಸಂಸ್ಕೃತಿ, ಅತ್ಯುತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹದ ಮೂಲಕ ದಕ್ಷಿಣ ಭಾರತದಾದ್ಯಂತ ಮನೆಮಾತಾಗಿರುವ ಬ್ರಾಂಡ್ ಎನಿಸಿರುವ ರಾಮರಾಜ್ ಕಾಟನ್ ಈಗ ತನ್ನ 250ನೆಯ ಶೋ ರೂಂ ಅನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜೂನ್ 11ರ ನಾಳೆ ಆರಂಭವಾಗಲಿದೆ. ತೆಲುಗಿನ ವರ್ಚಸ್ವಿ ಹಾಗೂ ಸ್ಟೈಲಿಶ್ ನಟ ವಿಕ್ಟರಿ ವೆಂಕಟೇಶ್ #ActorVenkatesh ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದು, ಈ ಮೂಲಕ ಹೊಸ ಇತಿಹಾಸವನ್ನು ಬರೆಯಲಿದೆ.
ದಕ್ಷಿಣ ಭಾರತದಾದ್ಯಂತ ಮನೆ ಮಾತಾಗಿರುವ ರಾಮರಾಜ್ ಬ್ರಾಂಡ್, ಧೋತಿಗಳ #Dothi ಬಗ್ಗೆ ಇದ್ದ ಗ್ರಹಿಕೆಯನ್ನು ಬದಲಾಯಿಸಿದ್ದಲ್ಲದೇ ಅದಕ್ಕೊಂದು ಹೊಸ ರೂಪಕೊಟ್ಟು ಮೌಲ್ಯವನ್ನು ಅಸಾಧಾರಣ ಎತ್ತರಕ್ಕೆ ಏರಿಸಿದೆ. ಅದರಲ್ಲೂ ವಿಶೇಷವಾಗಿ ಯುವಕರು ಇಷ್ಟಪಡುವ ಸ್ಟೈಲ್ ಟೆಂಡ್ ಆಗಿಸಿದೆ. ಹಿರಿಮೆ-ಗರಿಮೆಯನ್ನು ಹೊಂದಿರುವ ರಾಮರಾಜ್ ಕಾಟನ್ ಇತ್ತೀಚೆಗೆ 40ನೆಯ ವಾರ್ಷಿಕೋತ್ಸವದ ಸಂಭ್ರಮವನ್ನು ಮುಟ್ಟಿದೆ. ದೇಶದಾದ್ಯಂತ 250 ಕಂಪೆನಿ ಮಾಲಿಕತ್ವದ ಮಳಿಗೆಗಳನ್ನು ಹೊಂದಿರುವ ಕೆಲವೇ ಬ್ರಾಂಡ್ ರಾಮರಾಜ್ ಕಾಟನ್ #RamRajCotton ಕೂಡಾ ಇಂದು ಗುರುತಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.

ರಾಮರಾಜ್ ನಡೆದುಬಂದ ಹಾದಿ
ಅಪ್ಪಟ ದೇಶಿ ಚಿಂತನೆಯೊಂದಿಗೆ ಸ್ವದೇಶಿ ಬ್ರಾಂಡ್ 1983ರಲ್ಲಿ ತನ್ನ ಪಯಣ ಆರಂಭಿಸಿತು. ಸಂಸ್ಕೃತಿ ಸಂಪ್ರದಾಯ, ನಾವೀನ್ಯತೆ ಮತ್ತು ಥರಹೇವಾರಿ ಉತ್ಪನ್ನಗಳ ಸಮ್ಮಿಳಿತದೊಂದಿಗೆ ಜವಳಿ ಉದ್ಯಮಕ್ಕೊಂದು ಹೊಸ ರೂಪ ಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಧೋತಿ, ಶರ್ಟ್, ಇನ್ನರ್ ವೇರ್(ಒಳ ಉಡುಪು), ನೀಟ್ ವೇರ್, ಫ್ಯಾಬ್ರಿಕ್ಸ್, ಕಿಡ್ಸ್ ಮತ್ತು ವುಮೆನ್ಸ್ ವೇರ್’ನ ಅತಿದೊಡ್ಡ ತಯಾರಕ, ಪೂರೈಕೆದಾರ ಮತ್ತು ರಫ್ತುದಾರರಲ್ಲಿ ಒಂದೆನಿಸಿಕೊಂಡಿರುವ ರಾಮರಾಜ್ ಜವಳಿ ಉದ್ಯಮದಲ್ಲಿ ಅತ್ಯುನ್ನತ ಮಾನದಂಡವನ್ನು ಹುಟ್ಟುಹಾಕಿದೆ. ಸಾಂಪ್ರದಾಯಿಕ ಧೋತಿಗಳನ್ನು ಉತ್ಪಾದಿಸುತ್ತಿದೆ. ಅಲ್ಲದೇ, ಸ್ಥಳೀಯ ಅಪ್ಪಟ ಸಂಸ್ಕೃತಿ ಮತ್ತು ಜನರ ಉಡುಗೆಗಳನ್ನು ಉತ್ತೇಜಿಸುವ ಅತಿದೊಡ್ಡ ಬ್ರಾಂಡ್ ಆಗಿದೆ. ರಾಮರಾಜ್ ಕಾಟನ್, ಕಾಲಾನುಕ್ರಮದಲ್ಲಿ ಅನೇಕ ಪುರಸ್ಕಾರಗಳನ್ನು ಹಾಗೂ ಲಕ್ಷಾಂತರ ಗ್ರಾಹಕರ ಹೃದಯ ಗೆದ್ದಿದೆ.

ವರ್ಷಗಳು ಕಳೆದಂತೆ, ರಾಮರಾಜ್ ಕೇವಲ ಜನರ ಸಾಮಾನ್ಯ ಉಡುಪುಗಳಿಗಷ್ಟೇ ಅಲ್ಲದೇ, ಹೆಚ್ಚು ಆದ್ಯತೆಯ ಬ್ರಾಂಡ್ ಆಗಿಯೂ ಗಮನ ಸೆಳೆದಿದೆ. ಸಾಂಪ್ರದಾಯಿಕ ಧೋತಿಗಳನ್ನು ತಯಾರಿಸುವಲ್ಲಿ ಮುಂಚೂಣಿ ಸಂಸ್ಥೆ ಎನಿಸಿಕೊಂಡಿರುವ ರಾಮರಾಜ್ ಕಾಟನ್ ಇಂದು ವೈವಿಧ್ಯಮಯ ಉತ್ಪನ್ನಗಳ ಸಂಗ್ರಹ ಹೊಂದಿದೆ. ರಾಮರಾಜ್ ಮಳಿಗೆಯು ಪ್ರತಿದಿನ ಧರಿಸುವ ಕಾಟನ್ ಧೋತಿಗಳಿಂದ ಉತ್ಪನ್ನಗಳ ಸಂಗ್ರಹ ಹೊಂದಿದೆ. ರಾಮರಾಜ್ ಮಳಿಗೆಯು ಪ್ರತಿದಿನ ಧರಿಸುವ ಕಾಟನ್ ಧೋತಿಗಳಿಂದ ಹಿಡಿದು ಪ್ರೀಮಿಯಂ ರೇಷ್ಮೆ #Silk ಧೋತಿಗಳು, ಕಾಟನ್, ಲೆನಿನ್ #Lenin ಮತ್ತು ಶುದ್ಧ ರೇಷ್ಮೆ ಶರ್ಟ್’ಗಳು ಹಾಗೂ ಎಲ್ಲಾ ವಯಸ್ಸಿನವರ ಅಗತ್ಯಕ್ಕೆ ತಕ್ಕ ಕುರ್ತಾಗಳು, ಪುರುಷರು ಮತ್ತು ಮಹಿಳೆಯರಿಗೆ ಒಳ ಉಡುಪುಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳ ಆಗರವೆನಿಸಿದೆ. 20ಕ್ಕೂ ಹೆಚ್ಚು ಬ್ರಾಂಡ್ ವಿಸ್ತರಣೆಗಳೊಂದಿಗೆ ಬಾತ್ ಟವೆಲ್ ಸೇರಿದಂತೆ ಬಾತ್ರೂಮ್ ಪರಿಕರಗಳೂ ಸಿಗುತ್ತವೆ.
ವಿನಮ್ರ ಭಾವದೊಂದಿಗೆ ಶುರುವಾದ ರಾಮರಾಜ್ ಕಾಟನ್ ಸಂಸ್ಥೆಯು ತಳಮಟ್ಟದ ಶ್ರಮದ ಮೂಲಕ ಇಂದಿನ ಕ್ರಿಯಾತ್ಮಕ ಮತ್ತು ಸ್ಪಧಾತ್ಮಕ ವ್ಯವಸ್ಥೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸರಿಸಟಿಯಿಲ್ಲದ ಪ್ರಬಲ ಬ್ರಾಂಡ್ ಆಗಿದೆ. ಇದೆಲ್ಲವೂ ಸಾಧ್ಯವಾಗಿಸಿದ್ದು, ದೂರದೃಷ್ಠಿಯುಳ್ಳ ಶ್ರೀಯುತ ಕೆ.ಆರ್. ನಾಗರಾಜನ್ ಅವರ ಕನಸುಗಳು ಮತ್ತು ಸಾಧಿಸಬೇಕೆಂಬ ಅದಮ್ಯ ಆಕಾಂಕ್ಷೆ. ಅವರು ಯುಶಸ್ವಿ ಉದ್ಯಮಿ ಮಾತ್ರವಲ್ಲ, ಭಾರತದ ಮೊಟ್ಟಮೊದಲ `ಸಾಂಸ್ಕೃತಿಕ ಉದ್ಯಮಿ’. ಎಲ್ಲ ಬ್ರಾಂಡ್’ಗಳಂತೆ ರಾಮರಾಜ್ ಕಾಟನ್ ಕೂಡ ಕೇವಲ ಹೆಸರು, ಖ್ಯಾತಿ ಮತ್ತು ವ್ಯವಹಾರವಷ್ಟೇ ಅಲ್ಲದೇ ಅದಕ್ಕೂ ಮೀರಿದ ದೂರದೃಷ್ಠಿ ಮತ್ತು ಪ್ರಯತ್ನಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿತು. ನೇಕಾರರು #weaver ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಉನ್ನತಿಯನ್ನು ಸದಾ ಬಯಸಿದೆ. 4 ದಶಕಗಳ ಸುದೀರ್ಘ ಪಯಣದ ನಂತರವೂ ಸಂಸ್ಥೆಯು 50,000ಕ್ಕೂ ಅಧಿಕ ನೇಕಾರ ಕುಟುಂಬಗಳ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ ಎತ್ತರಕ್ಕೇರಿದೆ. ರಾಮರಾಜ್ ಸಂಸ್ಥೆಯು, ದಕ್ಷಿಣ ಭಾರತದಾದ್ಯಂತ 15,000ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಅವಕಾಶಗಳನ್ನು ನೀಡಿದೆ.

ರಾಮರಾಜ್ ಬ್ರಾಂಡ್ ಖ್ಯಾತಿ ದಿನೇದಿನೇ ವೃದ್ಧಿಯಾಗಲು ನಂಬಿಕೆ ಮತ್ತು ಬೆಳವಣಿಗೆಯ ಬಲವಾದ ನೆಟ್ ವರ್ಕ್ ಪ್ರಮುಖ ಕಾರಣವಾಗಿದೆ. ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಬಲವಾದ ಹೆಜ್ಜೆಗುರುತನ್ನು ಹೊಂದಿರುವ ಈ ಬ್ರಾಂಡ್ ನೇರವಾಗಿ ಮತ್ತು ಕಂಪನಿಯು ದಕ್ಷಿಣ ಭಾರತದ ರಾಜ್ಯಗಳ ಹೆಚ್ಚಿನ ನಗರಗಳು ಮತ್ತು ಉಪನಗರಗಳಲ್ಲಿ ಮಳಿಗೆಗಳು ಮತ್ತು ಶೋರೂಂಗಳೊಂದಿಗೆ 250 ವಿಶೇಷ ಬ್ರಾಂಡ್ ರೀಟೇಲ್ ಔಟ್ ಲೆಟ್’ಗಳನ್ನು ನಿರ್ವಹಿಸುತ್ತದೆ. ಧೋತಿ ಮತ್ತು ಜನರಲ್ಲಿ ಸಾಂಪ್ರದಾಯಿಕ ಉಡುಪುಗಳ ಬಗೆಗಿರುವ ಸದಭಿರುಚಿಯ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಕ್ರಮಗಳ ಅಳವಡಿಕೆ ಮೂಲಕ ರಾಮರಾಜ್ ದಕ್ಷಿಣ ಭಾರತದಾದ್ಯಂತ ಸಾವಿರಾರು ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸಿದ್ದು, ಶ್ವೇತವರ್ಣದ ವೀರ ಯೋಧನಂತೆ ಕಂಗೊಳಿಸುತ್ತಿದೆ.
ದೂರದೃಷ್ಠಿಯುಳ್ಳ ಉದ್ಯಮಿ ಹಾಗೂ ಸಂಸ್ಥಾಪಕರೂ ಆಗಿರುವ ಅಧ್ಯಕ್ಷ ಶ್ರೀಯುತ ಕೆ.ಆರ್. ನಾಗರಾಜನ್ ಅವರ ಆಶ್ರಯದಲ್ಲಿ ಬೆಳೆದುಬಂದ ರಾಮರಾಜ್ ಕಾಟನ್’ನ ಈ ಯಶಸ್ಸಿನ ಹಿಂದೆ 4 ದಶಕಗಳ ಅಚಲ ಸಮರ್ಪಣೆ ಮತ್ತು ಸರಿಸಾಟಿಯಿಲ್ಲದ ಬದ್ದತೆ ಮತ್ತು ಮಾರುಕಟ್ಟೆ ನೈಪುಣ್ಯತೆಯ ಶ್ರಮವಿದೆ. ಸಿಬ್ಬಂದಿಯ ಅಚಲ ಬೆಂಬಲದಿಂದ ಈ ಮಟ್ಟಿಗೆ ಬೆಳೆದುಬಂದಿರುವ ರಾಮರಾಜ್ ಕಾಟನ್ ವಿಜಯವಾಡದಲ್ಲಿ ಹೆಗ್ಗುರುತಿನ 250ನೆಯ ಶೋರೂಂ ಉದ್ಘಾಟನೆಯೊಂದಿಗೆ ಇತಿಹಾಸ ಬರೆದಿದೆ. ದೇಸಿ ಸೊಗಡಿನ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಮತ್ತು ತನ್ನ ಎಲ್ಲಾ ಉತ್ಪನ್ನಗಳಲ್ಲಿ ಸಂಪ್ರದಾಯವನ್ನು ಮಿಳಿತಗೊಳಿಸುತ್ತಿರುವ ರಾಮರಾಜ್ ಬ್ರಾಂಡ್ ಪಯಣದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಹೆಮ್ಮೆಯ 250ನೆಯ ಮಳಿಗೆಯನ್ನು ನಟ ವಿಕ್ಟರಿ ವೆಂಕಟೇಶ್ ಅವರು ಉದ್ಘಾಟಿಸುತ್ತಿರುವುದು ವಿಶೇಷ. ಬಹುಮುಖ ಪ್ರತಿಭೆಯ ವೆಂಕಟೇಶ್ ಅವರು ವಿಭಿನ್ನ ಪಾತ್ರಗಳ ಮೂಲಕ ಹೆಸರು ಮಾಡಿದವರು. ಇವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಮರಾಜ್ ಧೋತಿ ಮತ್ತು ಶರ್ಟ್’ಗಳ ಬ್ರಾಂಡ್ ಅಂಬಾಸಿಡರ್.
Kalahamsa Infotech private limitedಈ ಸಾಧನೆಯ ಮೈಲುಗಲ್ಲು ರಾಮರಾಜ್ ಕಾಟನ್’ನ ಭವಿಷ್ಯವನ್ನು ಇನ್ನಷ್ಟು ಭರವಸೆದಾಯಕವಾಗಿಸಿದೆ. ದಕ್ಷಿಣ ಭಾರತದಲ್ಲಿ ಈ ಬ್ರಾಂಡ್, ಮುಂಚೂಣಿ ನಾಯಕನಾಗಿ ಹೊರಹೊಮ್ಮಿದೆ. ಈತ ತನ್ನ ವೈವಿಧ್ಯಮಯ ಅಸಾಧಾರಣ ಉತ್ಪನ್ನಗಳೊಂದಿಗೆ ಪ್ಯಾನ್-ಇಂಡಿಯಾ ಉಪಸ್ಥಿತಿಯ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಉತ್ಪಾದನೆ ಹೆಚ್ಚಳ, ತಂತ್ರಜ್ಞಾನದಲ್ಲಿ ಸುಧಾರಣೆ, ನಿರಂತರವಾದ ಮಾರಾಟ ಜಾಲ ವಿಸ್ತರಣೆ, ಜಾಹೀರಾತು ನೀಡುವಿಕೆ ಹೀಗೆ ಎಲ್ಲ ಬಗೆಯಲ್ಲೂ ಸಂಸ್ಥೆಯು ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಇಂದಿನ ಕ್ರಿಯಾತ್ಮಕ ಮಾರುಕಟ್ಟೆಗೆ ಸೂಕ್ತವಾದ ದೃಷ್ಠಿಕೋನದೊಂದಿಗೆ ದೇಶದಾದ್ಯಂತ ಗ್ರಾಹಕರನ್ನು ಸೆಳೆದು ಅವರ ಅಗತ್ಯಗಳನ್ನು ಪೂರೈಸಲು ಇರುವ ಯಾವುದೇ ಅವಕಾಶವನ್ನು ರಾಮರಾಜ್ ಕಾಟನ್ ಮಿಸ್ ಮಾಡಿಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಲು ಮತ್ತು ವಿಜಯದ ಹೊಸ ಪುಟಗಳನ್ನು ತೆರೆಯಲು ಸಜ್ಜಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005-1.mp4

Tags: Actor Victory VenkateshAndra PradeshCotton ClothsDothihomegrown brandKannada News WebsiteLatest News KannadaRamraj CottonRamraj Show RoomSouth IndiaVijayawadaಆಂಧ್ರಪ್ರದೇಶದಕ್ಷಿಣ ಭಾರತಧೋತಿನಟ ವಿಕ್ಟರಿ ವೆಂಕಟೇಶ್ರಾಮರಾಜ್ ಕಾಟನ್ವಿಜಯವಾಡಸ್ವದೇಶಿ ಬ್ರಾಂಡ್
Share197Tweet123Send
Previous Post

ನವೀನ್ ಕುಮಾರ್‌ಗೆ ದಾವಣಗೆರೆ ವಿಶ್ವವಿದ್ಯಾಲಯದ ಪಿಹೆಚ್ ಡಿ ಪದವಿ

Next Post

ಮಾಜಿ ಸಚಿವ ಈಶ್ವರಪ್ಪ ಅಪರೂಪದ ರಾಜಕಾರಣಿ: ಕಾಶಿ ಪೀಠದ ಶ್ರೀಗಳು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಾಜಿ ಸಚಿವ ಈಶ್ವರಪ್ಪ ಅಪರೂಪದ ರಾಜಕಾರಣಿ: ಕಾಶಿ ಪೀಠದ ಶ್ರೀಗಳು

ಮಾಜಿ ಸಚಿವ ಈಶ್ವರಪ್ಪ ಅಪರೂಪದ ರಾಜಕಾರಣಿ: ಕಾಶಿ ಪೀಠದ ಶ್ರೀಗಳು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

March 5, 2026
ವಿಟಿಯು ‘ಯುಕ್ತಿ-2026’ ಸಾಂಸ್ಕೃತಿಕ ಉತ್ಸವ |  ಜೆಎನ್‌ಎನ್‌ಸಿಇ ಕಾಲೇಜು ತಂಡ ಚಾಂಪಿಯನ್ಸ್

ವಿಟಿಯು ‘ಯುಕ್ತಿ-2026’ ಸಾಂಸ್ಕೃತಿಕ ಉತ್ಸವ |  ಜೆಎನ್‌ಎನ್‌ಸಿಇ ಕಾಲೇಜು ತಂಡ ಚಾಂಪಿಯನ್ಸ್

March 5, 2026
ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

March 4, 2026
​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

March 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL