ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಶೋಧನಾರ್ಥಿ ಕೆ.ಬಿ. ಯೋಗೇಶ್ವರಿ ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್’ಡಿ ಪದವಿ ನೀಡಲಾಗಿದೆ.
ಯೋಗೇಶ್ವರಿ ಅವರು ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್. ಮಂಜುನಾಥ್ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮ್ಯಾನೇಜ್ಮೆಂಟ್ ಆಫ್ ನಾನ್ ಪರ್ಫಾರ್ಮಿಂಗ್ ಅಸ್ಸೆಟ್ಸ್ ಆಂಡ್ ಪ್ರಿಯಾರಿಟಿ ಸೆಕ್ಟರ್ ಲೆಂಡಿಂಗ್ ಬೈ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಇನ್ ಕರ್ನಾಟಕ ವಿಥ್ ಸ್ಪೆಶಲ್ ಪರಫಾರ್ಮೇನ್ಸ್ ಟು ಶಿವಮೊಗ್ಗ(ಡಿಸ್ಟ್ರಿಕ್ಟ್) ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್’ಡಿ ನೀಡಿದೆ.
ಯೋಗೇಶ್ವರಿ ಶಿವಮೊಗ್ಗ ತಾಲೂಕಿನ ಬಾಳೇಕೊಪ್ಪ ಗ್ರಾಮದ ದಿ. ಕೆ.ವಿ. ಬಸವರಾಜಪ್ಪ ಮತ್ತು ಕೆ.ಬಿ. ಗೌರಮ್ಮ ಇವರ ಪುತ್ರಿ.
ಇವರ ಈ ಶೈಕ್ಷಣಿಕ ಸಾಧನೆಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get in Touch With Us info@kalpa.news Whatsapp: 9481252093






Discussion about this post