ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಲವು-ನಿಲುವು ಹೀಗಿದೆ:
ಮಲೆನಾಡಾದ ಶಿವಮೊಗ್ಗ ಲೋಕಸಭಾ ಕ್ರೇತ್ರಕ್ಕೆ ಸೇರ್ಪಡೆಗೊಂಡ(ದಕ್ಷಿಣ ಕನ್ನಡ …ಈಗ ಉಡುಪಿ ಜಿಲ್ಲೆಯ) ಕರಾವಳಿಯ ಭಾಗ.
ಬೂತ್ ಗಳ ಸಂಖ್ಯೆ (2019 ರಲ್ಲಿ) ಒಟ್ಟು 246
ಒಟ್ಟು ಮತದಾರರು: 2,26,587
ಮಹಿಳೆಯರು: 1,16,349
ಪುರುಷರು: 1,10,237
ಮೈತ್ರಿ ಪಕ್ಷ ಮತ್ತು ಬಿಜೆಪಿಗೆ ಸಮಸಮ ಕಾದಾಟ. ಎಂತ ಆಗ್ತದೋ ನೋಡಬೇಕು, ಹೇಳೋದು ಕಷ್ಟ.
-ಬಾಲಕೃಷ್ಣ, ಕ್ಯಾಂಟೀನ್ ಮಾಲಿಕ, ಕೊಲ್ಲೂರು
ಈಗ ಮೋದಿ ಅಲೆ ಜೋರಾಗಿದೆ. ಶೇ, 75 ಯುವಜನ ಮೋದೀಜಿಯವರ ಕೈ ಬಲಪಡಿಸುವ ದೃಷ್ಟಿಯಿಂದ ಬಿಜೆಪಿಗೇ ಮತ ನೀಡುತ್ತಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಇಲ್ಲಿ ಸಂಪರ್ಕದಲ್ಲೇ ಇಲ್ಲ. ಹೀಗಾಗಿ ಜೆಡಿಎಸ್’ಗೆ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳು ಬೀಳುವುದು ಅನುಮಾನ. ಅವರೂ ಕೂಡ ಬಿಜೆಪಿಗೇ ಮತ ನೀಡುತ್ತಾರೆ.
ಇನ್ನು… ಯಡ್ಯೂರಪ್ಪ ಅವರ ಜನಪ್ರಿಯತೆ ಸೇರಿ ಇಲ್ಲಿ ಬಿಜೆಪಿಗೆ ಲೀಡ್ ಕೊಡಲು ವಿಪುಲ ಅವಕಾಶವಿದೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಶಿರೂರು ಫಾಲ್ಸ್’ನಿಂದ ಸಂಪರ್ಕ ಪಡೆದು ಯೋಜನೆ ತರಲು ಸಾಧ್ಯವಿದೆ. ಇಲ್ಲಿ ಜೆಡಿಎಸ್ ಆಕ್ಟಿವ್ ಇಲ್ಲ. ಕರಾವಳಿ ಜನತೆಗೆ ಅವರು ಸ್ಪಂದಿಸುವುದಿಲ್ಲ.
ಇಲ್ಲಿ ಮೋದಿ ಅಲೆಯಿದೆ. ಬಿಜೆಪಿಗೇ ಬಹಳ ಮತಗಳು.
ಬಿಜೆಪಿಗೆ ಇಲ್ಲಿ ಬಹಳ ಮಂದಿ ಇಷ್ಟಪಡುತ್ತಾರೆ. ಹೀಗಾಗಿ ಬಿವೈಆರ್ ಗೆಲ್ಲುತ್ತಾರೆ.(ಅವರು ಅಳೆದೂ ಸುರಿದೂ ಕೊನೆಗೆ ಮಾತಾಡಿದರು)
-ದಿನೇಶ್, ಅಂಗಡಿ ಮಾಲಿಕರು, ವಂಡ್ಸೆ
ಬಿಜೆಪಿಯ ಪ್ರಾಬಲ್ಯವನ್ನು ಒಪ್ಪಿಕೊಂಡು ಬಿಜೆಪಿಗೇ ಜನರ ಗಟ್ಟಿಯಾದ ಒಲವಿದೆ.
-ಜನಾರ್ಧನ್, ಸಂಗಡ ಕುಂದಾಪುರ ಹೊಟೇಲ್ ಮಾಲಿಕ
ಇಲ್ಲಿ ಬಿಜೆಪಿಯದ್ದೇ ಹವಾ ಜಾಸ್ತಿ. ಮೋದಿ ಪಕ್ಷಕ್ಕೆ ನಮ್ಮಲ್ಲಿ ಗೆಲುವು ನಿಶ್ಚಿತ ಎಂದು ಇಲ್ಲಿ ಜನ ಮಾತನಾಡುತ್ತಾರೆ.
ಮೋದಿ ಅಲೆಯ ಮುಂದೆ ಇಲ್ಲಿ ಏನೂ ನಡೆಯಲ್ಲ. ಇಲ್ಲಿ ಬಿಜೆಪಿ ಅಭ್ಯರ್ಥಿಗೇ ಲೀಡ್ ಸಿಗುತ್ತದೆ.
ಇಲ್ಲಿ ಸಂಪೂರ್ಣ ಮೋದಿ ಅಲೆಯಿದೆ ಎಂದಷ್ಟೇ ಹೇಳುತ್ತೇನೆ.
ಸರ್, ಯಾರು ಏನೇ ಹೇಳಲಿ ಇಲ್ಲಿ ಈಕ್ವಲ್ ಫೈಟ್ ಇದೆ. ಇಬ್ಬರೂ ಸಮ ಸಮ ಮತ ಪಡೆಯಬಹುದು.
-ಆನಂದ ಪೂಜಾರಿ, ಬೈಂದೂರು
ನಾನು ಜೆಡಿಎಸ್ ಬೆಂಬಲಿಸುತ್ತೇನೆ. ಆದರೆ ಅಲ್ಲಿ ಸದ್ಯ ಮೋದಿ ಅಲೆಯಿದೆ ಮಾರಾಯ್ರೆ ಏನು ಮಾಡೋದು? ನಾನು ಒಳ್ಳೇ ಕೆಲಸ ಮಾಡಬೇಕು ಅಂದ್ರೆ ಈ ಪಕ್ಷ ರಾಜಕೀಯ ಅಡ್ಡ ಬರುತ್ತೆ.
-ಸರ್ವೋತ್ತಮ ಶೆಟ್ಟಿ, ವಕೀಲರು
ದೇಶದ ವಿಚಾರದಲ್ಲಿ ಬೇಡ. ನಮ್ಮಲ್ಲಂತೂ ಮೋದಿ ಅಲೆ ಇದೆ ಎನ್ನುವುದು ನಿಶ್ಚಿತ.
-ಗೋವರ್ಧನ್
ನಮ್ಮಲ್ಲೆಲ್ಲಾ ಬಿಜೆಪಿಯದ್ದೇ ಜೋರು ಸರ್. ಅಲ್ಲದೇ ಮೋದಿ ಅಲೆ ಬೇರೆ ಇದೆ.
ಒಂದೇಮಾತು ಇಲ್ಲಿ ಮೋದಿ ಅಲೆ ಇದೆ. ಜನ ಕೇಂದ್ರದಲ್ಲಿ ಮತ್ತೆ ಮೋದಿ, ಪ್ರಧಾನಿಯಾಗಲು ಬಯಸುತ್ತಾರೆ.
ದೇಶದಲ್ಲೇ ಮೋದಿ ಹವಾ ಇದೆ ಸರ್. ಹಾಗೆಯೇ ಇಲ್ಲೂ ಮೋದಿ ಹವಾ ಇದೆ. ಅದೇ ಮುಖ್ಯವಾಗುತ್ತೆ ಈ ಬಾರಿಯ ಚುನಾವಣೇಲಿ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಇಲ್ಲಿ ಶೇ.90 ಬಿಜೆಪಿ ಪರ ಮತ ಬೀಳುತ್ತವೆ. ಮೋದಿ ಅಲೆ ಮಜಬೂತಾಗಿದೆ. ಜೆಡಿಎಸ್’ಗೆ ಇಲ್ಲಿ ನೆಲೆಯೇ ಇಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್ ಮತಗಳೇ ಇಲ್ಲಿ ಅದಕ್ಕೆ ಆಧಾರ. ರಾಜ್ಯದ ಬಗ್ಗೆ ಬೇರೆ ಆಲೋಚನೆ ಕೇಂದ್ರದ ಬಗ್ಗೆ ಬೇರೆ ಆಲೋಚನೆ. ಇಲ್ಲಿಯ ಮತದಾರರು ಬಹಳ ವಿವೇಚನಾಶೀಲರು ಎಂಬುದು ನಮ್ಮ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ.
ಈಗ ಬೈಂದೂರಿಗೆ 500 ಕೋಟಿ ರೂ. ಯೋಜನೆ ಮಂಜೂರಾಗಿದೆ. ಅದನ್ನು ಬಂದರು ಅಭಿವೃದ್ಧಿಗೆ ಬಳಸಲಾಗುತ್ತದೆ. ನಂತರ ಗುಂಡೂರು ಕುಡಿಯುವ ಸರಬರಾಜು ಯೋಜನೆಗೆ 153 ಕೋಟಿ ರೂ. ಬಂದಿದೆ. 86 ಕೋಟಿ ರೂ. ವೆಚ್ಚದ ಡ್ಯಾಮ್ ಆಗಿದೆ.
ಇವೆಲ್ಲವೂ ಯಡ್ಯೂರಪ್ಪ ಮತ್ತು ರಾಘವೇಂದ್ರ ಅವರ ಸಂಸದ್ ಅವಧಿಯಲ್ಲಿ ಮಂಜೂರಾದ ಜನೋಪಯೋಗಿ ಯೋಜನೆಗಳಾಗಿವೆ ಎಂಬುದನ್ನು ಸ್ಥಳೀಯರು ಹಲವು ಮಂದಿಯ ಬಾಯಲ್ಲಿ ಬಂದ ವಿಚಾರಗಳು. ಈ ದೃಷ್ಟಿಯಿಂದ ಇಲ್ಲಿನ ಒಟ್ಟಾರೆ ಮತ ಚಲಾವಣೆ ಶೇ.80 ತಲುಪುವ ನಿರೀಕ್ಷೆಯಿದೆ.
ಅಷ್ಟೇ ಅಲ್ಲದೆ ಪ್ರಸ್ತುತ ಶಾಸಕರಾಗಿರುವ ಬಿಜೆಪಿ ಶ್ರೀ ಸುಕುಮಾರ ಶೆಟ್ಟಿ ಅವರ ಪ್ರಯತ್ನದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ 30 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳು ನಿರ್ಮಾಣವಾಗಿವೆ. ಮರವಂತೆ ಬೀಚಿನಲ್ಲಿ ಕಡಲಕೊರೆತ ತಪ್ಪಿಸಲು 30 ಕೋಟಿ ರೂ. ಯೋಜನೆ ಹಾಗೂ ಸಣ್ಣ ನೀರಾವರಿಗೆ 30 ಕೋಟಿ ರೂ. ಮಂಜೂರಾಗಿದೆ.
ಈ ಎಲ್ಲ ಅಂಶಗಳು ಮತದಾರರ ಗಮನದಲ್ಲಿವೆ ಎಂಬುದು ಸ್ಥಳೀಯರ ಮಾತಿನಿಂದಲೇ ತಿಳಿಯುತ್ತಿತ್ತು. ಇಂತಹ ಅಂಕಿಅಂಶಗಳನ್ನು ಜನರೇ ನೀಡುತ್ತಿದ್ದುದು ನಮ್ಮ ಸಮೀಕ್ಷೆಯಲ್ಲಿ ಕಂಡುಬಂದಿದ್ದು ಇದೇ ಮೊದಲು.
ಶಾಸಕರು 24ಸ7 ಕ್ಷೇತ್ರದ ಸೇವೆಗೆ ಸಿದ್ಧರಾಗಿರುವುದೂ ಒಂದು ಪ್ಲಸ್ ಪಾಯಿಂಟ್ ಆಗಿದೆ ಎಂಬುದು ಒಂದು ಸುತ್ತು ಸಾರ್ವಜನಿಕರೊಂದಿಗೆ ನಮ್ಮ ತಂಡ ನಡೆಸಿದ ಸಂವಾದದಲ್ಲಿ ದೃಢಪಟ್ಟಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post