ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರು ಹಠಾತ್ ನಿಧನರಾದ ಸುದ್ದಿ ಮಿಂಚಿನಂತೆ ತಾಲೂಕಿನಾದ್ಯಂತ ತಲುಪಿದ್ದು, ಅವರ ನಿವಾಸದ ಮುಂದೆ ರಾತ್ರೋ ರಾತ್ರಿ ಸಾವಿರಾರು ಮಂದಿ ಸೇರಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದ ಅಪ್ಪಾಜಿ ಗೌಡರ ಪಾರ್ಥಿವ ಶರೀರವನ್ನು ರಾತ್ರಿ ಸುಮಾರು 1.30ರವೇಳೆಗೆ ಅವರ ನಿವಾಸಕ್ಕೆ ತರಲಾಯಿತು. ಆವೇಳೆಗಾಗಲೇ ಸಾವಿರಾರು ಮಂದಿ ಜಮಾಯಿಸಿದ್ದರು.
ಅಪ್ಪಾಜಿ ಗೌಡರ ನಿಧನದ ಸುದ್ದಿ ತಿಳಿದು ಸುರಿಯುತ್ತಿದ್ದ ಮಳೆಯನ್ನೂ ಸಹ ಲೆಕ್ಕಿಸದೇ ಗ್ರಾಮೀಣ ಭಾಗದಿಂದಲೂ ಸಹ ಸಾವಿರಾರು ಮಂದಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಧಾವಿಸಿ, ಅಂತಿಮ ದರ್ಶನ ಪಡೆದರು.
ಚಿಕ್ಕ ವಯೋಮಾನದಿಂದ ಯುವತಿಯರು ಸೇರಿದಂತೆ ವಯೋವೃದ್ಧರೂ ಸಹ ಸರಿ ರಾತ್ರಿಯಲ್ಲಿ ಧಾವಿಸಿ, ಅಂತಿಮ ದರ್ಶನ ಪಡೆದರು. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಅಭಿಮಾನಿಗಳ ಹಾಗೂ ಕಾರ್ಯಕರ್ತರ ರೋಧನ ಮುಗಿಲುಮುಟ್ಟಿತ್ತು.
ಮನೆಯ ಮುಂಭಾಗದಲ್ಲಿಯೇ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಬ್ಯಾರಿಕೇಟ್ ಹಾಕಿ, ಸರತಿ ಸಾಲಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಿವೈಎಸ್’ಪಿ ಸುಧಾಕರ್ ನಾಯ್ಕ್, ನಗರಸಭೆ ಆಯುಕ್ತ ಮನೋಹರ್, ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಾಗದಂತೆ ವ್ಯವಸ್ಥೆ ಮಾಡಿದ್ದಾರೆ.
Get In Touch With Us info@kalpa.news Whatsapp: 9481252093















