ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ನೀರು ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಸಂಜೆ 7 ಗಂ ಟೆಯವರೆಗೂ 60 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಟ್ಟಿರುವ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.
ಡ್ಯಾಮ್’ನ ನಾಲ್ಕು ಗೇಟ್’ಗಳು ಸುಮಾರು 9. 1/2ಅಡಿ ಎತ್ತಿ ನೀರು ಹರಿಸಲಾಗಿದೆ.
ಇನ್ನು, ಭದ್ರಾ ನದಿಯ ರಭಸ ಈ ಬಾರಿ ತುಸು ಜೋರಾಗಿಯೇ ಇದ್ದು, ಭಾರೀ ಗಾತ್ರದ ಮರದ ದಿಮ್ಮಿಗಳು, ಗಿಡಗಳು ನೀರಿನೊಂದಿಗೆ ತೇಲಿ ಬರುತ್ತಿವೆ.
ಮುಳುಗಿದ ಸೇತುವೆ ಕಣ್ತುಂಬಿಕೊಳ್ಳಲು ಜನಸಾಗರ
ಇನ್ನು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ ಎಂಬ ಸುದ್ದಿ ಪ್ರಚಾರವಾಗಿದ್ದೇ ತಡ, ಜನರು ಹೊಸ ಸೇತುವೆ ರಸ್ತೆಯಲ್ಲಿ ತಂಡೋಪತಂಡವಾಗಿ ಜಮಾಯಿಸಿ, ಸೇತುವೆ ಮುಳುಗಡೆಯಾಗಿದ್ದನ್ನು ಕಣ್ತುಂಬಿಕೊಂಡರು.
ಸೇತುವೆಯಿಂದ ಬಹಳಷ್ಟು ದೂರದಲ್ಲಿಯೇ ಬ್ಯಾರಿಕೇಟ್’ಗಳನ್ನು ಹಾಕಲಾಗಿದ್ದು, ಎರಡೂ ಕಡೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
Get In Touch With Us info@kalpa.news Whatsapp: 9481252093
Discussion about this post