ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅವರು ಎಂದಿಗೂ, ಯಾರನ್ನೂ ನೋಯಿಸಿದವರಲ್ಲ. ಅವರಿಗೆ ಇಷ್ಟು ಕಡಿಮೆ ಆಯಸ್ಸು ದೇವರು ಕೊಡಬಾರದಿತ್ತು ಎಂದು ಅಪ್ಪಾಜಿ ಗೌಡರ ಪತ್ನಿ ಶಾರದಾ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಅವರು ಎಂದಿಗೂ ರಾಜರಂತೆಯೇ ಬದುಕಿದರು, ರಾಜರಂತೆಯೇ ಹೋದರು. ದೇವರು ಇಷ್ಟು ಕಡಿಮೆ ಆಯಸ್ಸು ಕೊಡಬಾರದಿತ್ತು. ಇನ್ನೂ ಜನ ಸೇವೆ ಮಾಡುವ ಅವಕಾಶ, ಆಯಸ್ಸನ್ನು ನೀಡಬೇಕಿತ್ತು ಎಂದರು.
ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಕೊಡದೇ, ಎಲ್ಲ ಕಾರ್ಯಗಳೂ ಶಾಂತ ರೀತಿಯಿಂದ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post