ಕೊಲ್ಕತ್ತಾ: ಸಿಬಿಐ ಅಧಿಕಾರಿಗಳನ್ನೆ ಬಂಧಿಸುವ ಹಂತಕ್ಕೆ ತಲುಪಿದ್ದ ಪಶ್ಚಿಮ ಬಂಗಾಳದ ಪರಿಸ್ಥಿತಿ ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಕೊಲ್ಕತ್ತಾ ಪೊಲೀಸರಿಂದಲೇ ಸಿಬಿಐ ಅಧಿಕಾರಿಗಳಿಗೆ ಜೀವಬೆದರಿಕೆ ಇದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಸಿಬಿಐ ಅಧಿಕಾರಿಗಳ ನಿವಾಸಕ್ಕೆ ಅರೆಸೇನಾ ಪಡೆ ಭದ್ರತೆ ಒದಗಿಸಲಾಗಿದೆ.
ಕೋಲ್ಕತಾದ ಸಿಬಿಐ ಉನ್ನತ ಅಧಿಕಾರಿ ಪಂಕಜ್ ಕುಮಾರ್ ಶ್ರೀವಾಸ್ತವ್ ಅವರು ಪೊಲೀಸರಿಂದಲೇ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರವು ಸಿಬಿಐ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದೆ. ಅಲ್ಲದೇ, ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿಗಳು ಹಾಗೂ ಸಿಬಿಐ ಅಧಿಕಾರಿಗಳ ಮನೆಗಳಿಗೆ ಭದ್ರತೆ ಒದಗಿಸಲು ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ.
ದಕ್ಷಿಣ ಕೋಲ್ಕತಾ ಮತ್ತು ಸಾಲ್ಟ್ ಲೇಕ್ ಬಳಿ ಇರುವ ಸಿಬಿಐ ಕಚೇರಿಗಳಿಗೂ ಸಹ ಸಿಆರ್’ಪಿಎಫ್ ಯೋಧರು ಬಿಗಿಭದ್ರತೆ ಒದಗಿಸುತ್ತಿದ್ದಾರೆ. ಇಲ್ಲಿಗೆ ಬರುವವರನ್ನು ತೀವ್ರ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.
Discussion about this post