ಕೊಪ್ಪಳ: ಸಪ್ತಸ್ವರ ಸಮೂಹ ಮತ್ತು ಕೊಪ್ಪಳ ಶ್ರೀ ರಾಘವೇಂದ್ರ ಮಠ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸಪ್ತಸ್ವರ ಸಮೂಹದ 4ನೆಯ ವಾರ್ಷಿಕೋತ್ಸವ ಇದೇ ಡಿಸೆಂಬರ್ 1 ರವಿವಾರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಜಗನ್ನಾಥದಾಸ ಚಿಕಲಪರ್ವಿ ವಿಜಯದಾಸರ ವಂಶಂಸ್ಥರು ರವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮ ಅಧ್ಯಕ್ಷತೆ ಸಮೂಹದ ಸಂಸ್ಥಾಪಕ ಗಿರೀಶ ಕುಲಕರ್ಣಿ, ಮುಖ್ಯ ಅತಿಥಿಗಳಾಗಿ ವ್ಯಾಸರಾಜ ಸಂತೆಕೆಲೂರ, ಸುಶೀಲಾ ಕಾಂತರಾವ, ವಸಂತ ಪೂಜಾರ ಮಾದಿನೂರರವರು ಭಾಗವಹಿಸಲಿದ್ದಾರೆ.
ಬೆಳಗ್ಗೆ ಸುಶೀಲಾ ಕಾಂತರಾವ್ ಅವರಿಂದ ಹರಪನಹಳ್ಳಿ ಭೀಮವ್ವನವರ ಜೀವನ ಸಾಹಿತ್ಯ ಹಾಗೂ ಪ್ರವೀಣ ಕುಲಕರ್ಣಿ ಜಮಖಂಡಿಯವರಿಂದ ಮಹಿಪತಿ ದಾಸರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನಡೆಯಲಿದೆ.
ನಂತರದಲ್ಲಿ ಸಪ್ತಸ್ವರ ಸಮೂಹದ ಸದಸ್ಯರುಗಳಾದ ಅಶ್ವಿನಿ ಬಳ್ಳಾರಿ, ರಾಧಾ ಸವಣೂರ, ವೇಣುಗೋಪಾಲ ರಾಯಚೂರು, ವಿಭಾ ಕಟ್ಟಿ, ಅನನ್ಯಾ ದೇಸಾಯಿ, ಅನ್ವಿಕಾ ಕೊಪ್ಲು, ಕೃಷ್ಣ ಡಬೇರ, ಅನಸೂಯಾ ಜಾಗಿರದಾರ, ಸಮೀರ ಬಂಡಿಹಾಳ, ವಾದಿರಾಜ ಪಾಟೀಲ ರವರ, ಮುಂತಾದವರ ದಾಸವಾಣಿ, ನೃತ್ಯರೂಪಕ ಇತ್ಯಾದಿ ಕಾರ್ಯಕ್ರಮಗಳು ಜರುಗುವುದು.
ಸಂಜೆ 5 ಗಂಟೆಗೆ ಸನ್ಮಾನ ಸಭಾ ಕಾರ್ಯಕ್ರಮ ಜರುಗಲಿದ್ದು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗಿತ ಕಲಾವಿದರಾದ ಪಂಡಿತ ಶ್ರೀಪಾದ ಹೆಗಡೆ, ಧಾರವಾಡ ಹಾಗೂ ದಾಸಸಾಹಿತ್ಯ ಸೇವೆಗೆ ಶ್ರೀ ಸಿರವಾಳ ರಾಘವೇಂದ್ರಾರ್ಚಾ ಅವರಿಗೆ ಗೌರವ ಸನ್ಮಾ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಡಿತರಂಗನಾಥಾಚಾರ್ಯ ಹುಲಗಿ, ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಅರ್ಚಕರಾದ ಪ್ರೇಮಾಚಾರ್, ಕೊಪ್ಪಳ ಹಾಗೂ ಕೊಪ್ಪಳ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಕೆ.ಜಿ ಕುಲಕರ್ಣಿ ಉಪಸ್ಥಿತಿಯಲ್ಲಿರುವರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕುಲಕರ್ಣಿ ವಹಿಸಲಿದ್ದಾರೆ.
ಗಂಗಾವತಿಯ ಪಂ. ಋಗ್ವೇದಿ ಶ್ರೀನಿವಾಸಾಚಾರ್ ಅವರಿಂದ ದಾಸವಾಣಿ, ನಂತರ ಸಮೂಹದ ಕಲಾವಿದೆ ಕುಮಾರಿ ಚೈತ್ರಾ ಗುಬ್ಬಿ ಬೆಂಗಳೂರು ಇವರ ಭರತನಾಟ್ಯ ಹಾಗೂ ಶ್ರೀ ಮೇಧೋನ್ಮೋದಿನಿ ಭಜನಾ ಮಂಡಳಿ ಕೊಪ್ಪಳರವರಿಂದ ಕೋಲಾಟ ಜರುಗಲಿದೆ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಖ್ಯಾತ ಕಲಾವಿದರಾದ ಶ್ರೀಪಾದ ಹೆಗಡೆ ಧಾರವಾಡ ಅವರಿಂದ ಗಾಯನ ಜರುಗುವುದು. ತಬಲಾ ಸಾಥನಲ್ಲಿ ಹೊನ್ನಾವರದ ಶ್ರೀಗುರುರಾಜ ಆಡುಕಳ ಹಾಗೂ ಸಂವಾದಿನಿಯಲ್ಲಿ ಧಾರವಾಡದ ಶ್ರೀಮತಿ ನಾಗವೇಣಿ ಹೆಗಡೆ, ತಾನ್ಪೂರ ಸಾಥ ವಿಭಾ ಕಟ್ಟಿ ಕೊಪ್ಪಳರವರು ಸಹಕರಿಸುವರು.
ಸಂಗೀತ ಕಾರ್ಯಕ್ರಮದಲ್ಲಿ ಸಮೂಹದ ಕಲಾವಿದರಾದ ಶ್ರೀ ಗುರುರಾಜದಾಸ ಕೊಪ್ಪಳ, ರವೀಂದ್ರ ಆಶ್ರಿತ, ಅನಂತ ಪವಣಸ್ಕರ ಅವರುಗಳು ತಬಲಾ ಕಲಾವಿದರಾಗಿ ಸಾಥ್ ನೀಡಿದರೆ, ನಾರಾಯಣ ದಾಸ್, ಪ್ರಭಾಕರ್ ಪಟವಾರಿ, ಸಮೀರ್ ಬಂಡಿಹಾಳ್, ಮಾರುತಿ ಚಿತ್ರಗಾರ್ ರವರುಗಳು ಹಾರ್ಮೋನಿಯಂ ಸಾಥ್ ನೀಡುವರು, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ್, ಸತೀಶ್ ದೇಸಾಯಿ, ಗುರುರಾಜ್ ಜೋಶಿ ನರಸಿಂಹ ಆಲೂರ್ ಸಾಥ್ ನೀಡುವರು.
ಭೀಮಸೇನ್ ಇಂದರಗಿ, ವಾದಿರಾಜ್ ಪಾಟೀಲ್, ವೈಷ್ಣವಿ ಹುಲಗಿ, ಅನಸೂಯಾ ಜಾಗಿರದಾರ ಅವರುಗಳು ಕಾರ್ಯಕ್ರಮ ನಿರೂಪಿಸುವರು. ಕೃಷ್ಣ ಸೊರಟೂರ್ ಅವರ ಛಾಯಾಚಿತ್ರ ಬದರಿ ಪುರೋಹಿತ್ ಅವರ ವ್ಯಂಗ್ಯಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಸಪ್ತಸ್ವರ ಸಮೂಹ ಪ್ರಧಾನ ಸಂಚಾಲಕ ಗಿರೀಶ್ ಕುಲಕರ್ಣಿ ತಿಳಿಸಿದ್ದಾರೆ.
(ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ)
Get In Touch With Us info@kalpa.news Whatsapp: 9481252093, 94487 22200
Discussion about this post