ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೆಯ ಅಲೆ ಹೆಚ್ಚಾಗಿ ಹಬ್ಬುತ್ತಿದ್ದು ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಬೆಡ್ ವ್ಯವಸ್ಥೆ, ಆಕ್ಸಿಜನ್ ಮತ್ತು ವೈದ್ಯಕೀಯ ಸೌಲಭ್ಯ ಸಿಗದೆ ತುಂಬಾ ಕಷ್ಠ ಅನುಭವಿಸುವ ಸಂಧರ್ಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ 100 ಹಾಸಿಗೆಯ ಕೊವೀಡ್ ಕೇರ್ ಅಸ್ಪತ್ರೆ ಪ್ರಾರಂಭಿಸಲಾಯಿತು.
ಇದರಲ್ಲಿ ಸಾರ್ವಜನಿಕರಿಗೆ ಆಕ್ಸಿಜನ್ ಸಹಿತ ಬೆಡ್ಗಳ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಲು ಸಹಕಾರಿಯಾಗಿದ್ದು, ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈ ಕಾರ್ಯದಲ್ಲಿ ಕೈಜೋಡಿಸಿ ಅವಶ್ಯಕವಾಗಿ ಬೇಕಾಗಿರುವ 10 ಲಕ್ಷ ರೂ. ವೆಚ್ಚದ 4 ಬೈಪ್ಯಾಪ್ (BiBAP) ಉಪಕರಣಗಳನ್ನು ನೀಡಿ ಕೋವಿಡ್ ರೋಗಿಗಳಿಗೆ ನೆರವಾಗಿದ್ದಾರೆ.
ಈ ಉಪಕರಣಗಳು ಕೋವಿಡ್ ರೋಗಿಗಳ ಉಸಿರಾಟದ ತೊಂದರೆ ಇದ್ದು, ವೆಂಟಿಲೇಟರ್ ದೊರೆಯದೆ ಇದ್ದಾಗ ಈ ಉಪಕರಣಗಳನ್ನು ಉಪಯೋಗಿಸಿ ರೋಗಿಯನ್ನು ಉಪಚರಿಸಲು ಸಹಾಯ ಮಾಡುತ್ತದೆ. ಹಾಗೂ ಈ ಉಪಕರಣಗಳನ್ನು ಕಂಪನಿಯ ವೈದ್ಯಾಧಿಕಾರಿಗಳಾದ ಡಾ. ಪ್ರವೀಣ್ ಕುಮಾರ್, ಹಿರಿಯ ಅಧಿಕಾರಿ ಉದ್ಭವ್ ಕುಲಕರ್ಣಿ ಇವರು ನೋಡಲ್ ಅಧಿಕಾರಿಗಳಾದ ಡಾ. ಮಹೇಶ್ ಅವರಿಗೆ ಹಸ್ತಾಂತರಿಸಿದರು.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post