ಕಲ್ಪ ಮೀಡಿಯಾ ಹೌಸ್ | ಲಕ್ಕವಳ್ಳಿ |
ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರು ಭದ್ರಾ ಅಣೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ಸಮಯ ಕಳೆದರು.
ಭದ್ರಾ ಅಣೆಕಟ್ಟೆಯ ಹಿನ್ನೀರು ಪ್ರದೇಶಕ್ಕೆ ತೆರಳಿ ದಂಡೆಯಲ್ಲಿ ಕುಳಿತು ಸಮಯ ಕಳೆದ ಗುರೂಜಿಯವರು ತನ್ನ 40 ವರ್ಷದ ಹಿಂದಿನ ದಿನಗಳನ್ನು ನೆನೆದರು.

ಕಳೆದ 40 ವರ್ಷಗಳಿಂದ ಮೂಲಕ್ಕೆ ಹಿಂತಿರುಗಿ ಜೀವನವನ್ನು ಸಂಭ್ರಮಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಆರ್ಟ್ ಆಫ್ ಲಿವಿಂಗ್ ವಿಶ್ವದಾದ್ಯಂತ ಪಸರಿಸಿದೆ. 40 ವರ್ಷದ ಹಿಂದೆ ಇವೆಲ್ಲವೂ ಆರಂಭವಾದ ಸ್ಥಳ ಇದಾಗಿದ್ದು, ಇಂದು ಇಲ್ಲಿಗೆ ಭೇಟಿ ನೀಡಿರುವುದು ಸಂತಸ ಮೂಡಿಸಿದೆ ಎಂದಿದ್ದಾರೆ ಗುರೂಜಿಯವರು.
Also read: ಎಂಎಲ್’ಸಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್, ಎಂಪಿ ಸ್ಥಾನಕ್ಕೆ ಅಖಿಲೇಶ್ ರಾಜೀನಾಮೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















